<p><strong>ಪಟ್ನಾ</strong>: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಕಾರ್ಯಕ್ರಮವೊಂದರಲ್ಲಿ ತಮಗೆ ಉಡುಗೊರೆಯಾಗಿ ನೀಡಿದ ಚಿಕ್ಕ ಹೂಕುಂಡವನ್ನು ಹಿರಿಯ ಐಎಎಸ್ ಅಧಿಕಾರಿಯೊಬ್ಬರ ತಲೆಯ ಮೇಲೆ ಇಟ್ಟಿರುವ ಘಟನೆ ನಡೆದಿದೆ. ಅವರ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಪಕ್ಷ ಆರ್ಜೆಡಿಯು, ಇದು ಅವರ ಮಾನಸಿಕ ಸ್ಥಿತಿಯನ್ನು ತೋರ್ಪಡಿಸುತ್ತದೆ ಎಂದು ಹರಿಹಾಯ್ದಿದೆ.</p>.<p>ಪಟ್ನಾದ ಎಲ್.ಎನ್. ಮಿಶ್ರಾ ಇನ್ಸ್ಟಿಟಿಟ್ಯೂಟ್ನಲ್ಲಿ ಈ ಘಟನೆ ನಡೆದಿದೆ. ಅಲ್ಲಿ ನಿತೀಶ್ ಅವರು ಸುಮಾರು ₹10 ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಹೊಸದಾಗಿ ನೇಮಕಗೊಂಡ 20 ಬೋಧಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.</p>.<p>ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಶಿಕ್ಷಣ) ಎಸ್. ಸಿದ್ಧಾರ್ಥ್ ಅವರು ನಿತೀಶ್ ಕುಮಾರ್ ಅವರಿಗೆ ಚಿಕ್ಕ ಹೂವಿನ ಕುಂಡವನ್ನು ಉಡುಗೊರೆಯಾಗಿ ನೀಡಿದರು. ಸ್ವೀಕರಿಸಿದ ಕೂಡಲೇ ನಿತೀಶ್ ಅವರು ಅದನ್ನು ಅಧಿಕಾರಿಯ ತಲೆಯ ಮೇಲೆ ಇರಿಸಿದರು. ಆಗ, ಅಲ್ಲಿದ್ದ ಬಹುತೇಕರು ಮುಖ್ಯಮಂತ್ರಿಯ ಈ ನಡೆಯಿಂದ ತಬ್ಬಿಬ್ಬಾದರು. ಸಿದ್ಧಾರ್ಥ್ ಅವರು ತಕ್ಷಣವೇ ಹೂಕುಂಡವನ್ನು ತಲೆಯ ಮೇಲಿಂದ ತೆಗೆದುಹಾಕಿ, ನಿರ್ಗಮಿಸಿದರು. ಇಡೀ ಪ್ರಸಂಗದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. </p>.<p>‘ಈ ಘಟನೆ ಅತ್ಯಂತ ಆಘಾತಕಾರಿ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ನಿತೀಶ್ ಅವರ ನಡವಳಿಕೆ ರಾಜ್ಯಕ್ಕೆ ನಾಚಿಕೆಯುಂಟು ಮಾಡುತ್ತಿದೆ. ಇದು ಅವರ ಮನಸ್ಸು ನಿಯಂತ್ರಣದಲ್ಲಿಲ್ಲ ಎನ್ನುವುದನ್ನು ತೋರಿಸುತ್ತದೆ. ನಿತೀಶ್ ಬಿಹಾರದ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎನಿಸಿದ್ದಾರೆ’ ಎಂದು ಆರ್ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ</strong>: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಕಾರ್ಯಕ್ರಮವೊಂದರಲ್ಲಿ ತಮಗೆ ಉಡುಗೊರೆಯಾಗಿ ನೀಡಿದ ಚಿಕ್ಕ ಹೂಕುಂಡವನ್ನು ಹಿರಿಯ ಐಎಎಸ್ ಅಧಿಕಾರಿಯೊಬ್ಬರ ತಲೆಯ ಮೇಲೆ ಇಟ್ಟಿರುವ ಘಟನೆ ನಡೆದಿದೆ. ಅವರ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಪಕ್ಷ ಆರ್ಜೆಡಿಯು, ಇದು ಅವರ ಮಾನಸಿಕ ಸ್ಥಿತಿಯನ್ನು ತೋರ್ಪಡಿಸುತ್ತದೆ ಎಂದು ಹರಿಹಾಯ್ದಿದೆ.</p>.<p>ಪಟ್ನಾದ ಎಲ್.ಎನ್. ಮಿಶ್ರಾ ಇನ್ಸ್ಟಿಟಿಟ್ಯೂಟ್ನಲ್ಲಿ ಈ ಘಟನೆ ನಡೆದಿದೆ. ಅಲ್ಲಿ ನಿತೀಶ್ ಅವರು ಸುಮಾರು ₹10 ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಹೊಸದಾಗಿ ನೇಮಕಗೊಂಡ 20 ಬೋಧಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.</p>.<p>ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಶಿಕ್ಷಣ) ಎಸ್. ಸಿದ್ಧಾರ್ಥ್ ಅವರು ನಿತೀಶ್ ಕುಮಾರ್ ಅವರಿಗೆ ಚಿಕ್ಕ ಹೂವಿನ ಕುಂಡವನ್ನು ಉಡುಗೊರೆಯಾಗಿ ನೀಡಿದರು. ಸ್ವೀಕರಿಸಿದ ಕೂಡಲೇ ನಿತೀಶ್ ಅವರು ಅದನ್ನು ಅಧಿಕಾರಿಯ ತಲೆಯ ಮೇಲೆ ಇರಿಸಿದರು. ಆಗ, ಅಲ್ಲಿದ್ದ ಬಹುತೇಕರು ಮುಖ್ಯಮಂತ್ರಿಯ ಈ ನಡೆಯಿಂದ ತಬ್ಬಿಬ್ಬಾದರು. ಸಿದ್ಧಾರ್ಥ್ ಅವರು ತಕ್ಷಣವೇ ಹೂಕುಂಡವನ್ನು ತಲೆಯ ಮೇಲಿಂದ ತೆಗೆದುಹಾಕಿ, ನಿರ್ಗಮಿಸಿದರು. ಇಡೀ ಪ್ರಸಂಗದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. </p>.<p>‘ಈ ಘಟನೆ ಅತ್ಯಂತ ಆಘಾತಕಾರಿ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ನಿತೀಶ್ ಅವರ ನಡವಳಿಕೆ ರಾಜ್ಯಕ್ಕೆ ನಾಚಿಕೆಯುಂಟು ಮಾಡುತ್ತಿದೆ. ಇದು ಅವರ ಮನಸ್ಸು ನಿಯಂತ್ರಣದಲ್ಲಿಲ್ಲ ಎನ್ನುವುದನ್ನು ತೋರಿಸುತ್ತದೆ. ನಿತೀಶ್ ಬಿಹಾರದ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎನಿಸಿದ್ದಾರೆ’ ಎಂದು ಆರ್ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>