<p><strong>ಚೆನ್ನೈ</strong>: ಉಚ್ಛಾಟಿತ ನಾಯಕ ಒ ಪನ್ನೀರ್ ಸೆಲ್ವಂ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.</p><p>ಎಐಎಡಿಎಂಕೆಗೆ ಮರಳಲು ಸಿದ್ದ ಎಂದು ಶನಿವಾರ ಪನ್ನೀರ್ ಸೆಲ್ವಂ ಅವರು ಇಂಗಿತ ವ್ಯಕ್ತಪಡಿಸಿದ್ದರು.</p><p>ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ 77ನೇ ಜನ್ಮದಿನದ ಪೂರ್ವಭಾಗಿಯಾಗಿ ಪಕ್ಷದ ಕಾರ್ಯಕರ್ತರಿಗೆ ಪತ್ರ ಬರೆದಿರುವ ಪಳನಿಸ್ವಾಮಿ ಅವರು, ತೋಳ ಮತ್ತು ಕುರಿಗಳು ಸಹಬಾಳ್ವೆಯಿಂದಿರಲು ಸಾಧ್ಯವೇ ಎಂದು ಕೇಳಿದ್ದಾರೆ.</p><p>‘ತೋಳ ಮತ್ತು ಕುರಿಗಳು ಒಟ್ಟಿಗೆ ಬಾಳಲು ಸಾಧ್ಯವೆ? ಕಳೆ ಮತ್ತು ಬೆಳೆ ಎರಡು ಫಸಲಿನ ಭಾಗವಾಗಲು ಸಾಧ್ಯವೆ? ಒಬ್ಬ ನಿಷ್ಠಾವಂತ ಮತ್ತು ಒಬ್ಬ ದೇಶದ್ರೋಹಿ ಒಟ್ಟಾಗಿ ನಿಲ್ಲಲ್ಲು ಸಾಧ್ಯವೇ? ಇಲ್ಲ ಎಂಬ ನಿಮ್ಮ ಮಾತು ನನಗೆ ಕೇಳಿದೆ’ ಎಂದು ಹೇಳಿದ್ದಾರೆ.</p><p>ಆ ಮೂಲಕ ಪನ್ನೀರ್ ಸೆಲ್ವಂ ಅವರಿಗೆ ಎಐಎಡಿಎಂಕೆಯಲ್ಲಿ ಸ್ಥಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.</p><p>ಎಐಎಡಿಎಂಕೆ ಮರಳಲು ಸಿದ್ದರಿರುವುದಾಗಿ ಹೇಳಿದ್ದ ಪನ್ನೀರ್ ಸೆಲ್ವಂ, ಪಕ್ಷದ ಪ್ರಧಾನ ಕಾರ್ಯದರ್ಶಿ ಯಾರಾಗಬೇಕೆಂಬುವುದನ್ನು ಪಕ್ಷದ ಕಾರ್ಯಕರ್ತರೇ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದರು.</p><p>‘ಯಾವುದೇ ಷರತ್ತುಗಳಿಲ್ಲದೇ ನಾನು, ಟಿಟಿವಿ ದಿನಕರನ್ ಮತ್ತು ಶಶಿಕಲ ಅವರು ಎಐಎಡಿಎಂಕೆಗೆ ಮರಳಲು ಸಿದ್ದರಿದ್ದೇವೆ. ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದೇವೆ’ ಎಂದು ಹೇಳಿದ್ದರು.</p><p>ಎಐಎಡಿಎಂಕೆ 2011ರಿಂದ 2021ರವರೆಗೆ 10 ವರ್ಷಗಳ ಕಾಲ ತಮಿಳುನಾಡಿನ ಚುಕ್ಕಾಣಿ ಹಿಡಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಉಚ್ಛಾಟಿತ ನಾಯಕ ಒ ಪನ್ನೀರ್ ಸೆಲ್ವಂ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.</p><p>ಎಐಎಡಿಎಂಕೆಗೆ ಮರಳಲು ಸಿದ್ದ ಎಂದು ಶನಿವಾರ ಪನ್ನೀರ್ ಸೆಲ್ವಂ ಅವರು ಇಂಗಿತ ವ್ಯಕ್ತಪಡಿಸಿದ್ದರು.</p><p>ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ 77ನೇ ಜನ್ಮದಿನದ ಪೂರ್ವಭಾಗಿಯಾಗಿ ಪಕ್ಷದ ಕಾರ್ಯಕರ್ತರಿಗೆ ಪತ್ರ ಬರೆದಿರುವ ಪಳನಿಸ್ವಾಮಿ ಅವರು, ತೋಳ ಮತ್ತು ಕುರಿಗಳು ಸಹಬಾಳ್ವೆಯಿಂದಿರಲು ಸಾಧ್ಯವೇ ಎಂದು ಕೇಳಿದ್ದಾರೆ.</p><p>‘ತೋಳ ಮತ್ತು ಕುರಿಗಳು ಒಟ್ಟಿಗೆ ಬಾಳಲು ಸಾಧ್ಯವೆ? ಕಳೆ ಮತ್ತು ಬೆಳೆ ಎರಡು ಫಸಲಿನ ಭಾಗವಾಗಲು ಸಾಧ್ಯವೆ? ಒಬ್ಬ ನಿಷ್ಠಾವಂತ ಮತ್ತು ಒಬ್ಬ ದೇಶದ್ರೋಹಿ ಒಟ್ಟಾಗಿ ನಿಲ್ಲಲ್ಲು ಸಾಧ್ಯವೇ? ಇಲ್ಲ ಎಂಬ ನಿಮ್ಮ ಮಾತು ನನಗೆ ಕೇಳಿದೆ’ ಎಂದು ಹೇಳಿದ್ದಾರೆ.</p><p>ಆ ಮೂಲಕ ಪನ್ನೀರ್ ಸೆಲ್ವಂ ಅವರಿಗೆ ಎಐಎಡಿಎಂಕೆಯಲ್ಲಿ ಸ್ಥಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.</p><p>ಎಐಎಡಿಎಂಕೆ ಮರಳಲು ಸಿದ್ದರಿರುವುದಾಗಿ ಹೇಳಿದ್ದ ಪನ್ನೀರ್ ಸೆಲ್ವಂ, ಪಕ್ಷದ ಪ್ರಧಾನ ಕಾರ್ಯದರ್ಶಿ ಯಾರಾಗಬೇಕೆಂಬುವುದನ್ನು ಪಕ್ಷದ ಕಾರ್ಯಕರ್ತರೇ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದರು.</p><p>‘ಯಾವುದೇ ಷರತ್ತುಗಳಿಲ್ಲದೇ ನಾನು, ಟಿಟಿವಿ ದಿನಕರನ್ ಮತ್ತು ಶಶಿಕಲ ಅವರು ಎಐಎಡಿಎಂಕೆಗೆ ಮರಳಲು ಸಿದ್ದರಿದ್ದೇವೆ. ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದೇವೆ’ ಎಂದು ಹೇಳಿದ್ದರು.</p><p>ಎಐಎಡಿಎಂಕೆ 2011ರಿಂದ 2021ರವರೆಗೆ 10 ವರ್ಷಗಳ ಕಾಲ ತಮಿಳುನಾಡಿನ ಚುಕ್ಕಾಣಿ ಹಿಡಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>