<p><strong>ಪಟ್ನಾ</strong>: ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ’ಯ (ಪಿಎಂ–ಕಿಸಾನ್) ಅಡಿ ನೀಡುವ ₹22 ಸಾವಿರ ಕೋಟಿಯ 19ನೆಯ ಕಂತಿನ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಡುಗಡೆ ಮಾಡಿದರು. ಇದರಿಂದಾಗಿ ದೇಶದಾದ್ಯಂತ ಒಟ್ಟು 9.8 ಕೋಟಿ ರೈತರಿಗೆ ಪ್ರಯೋಜನ ಆಗಲಿದೆ. ಬಿಹಾರದಲ್ಲಿ ಈ ಯೋಜನೆಯ ಫಲಾನುಭವಿ ರೈತರ ಸಂಖ್ಯೆ 82 ಲಕ್ಷ.</p><p>ಸೋಮವಾರ ಭಾಗಲ್ಪುರ ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮೋದಿ ಅವರು ಭಾಗಿಯಾದರು. ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಈ ಸಮಾವೇಶದಲ್ಲಿ ಮೋದಿ ಅವರು ನೇರ ನಗದು ವರ್ಗಾವಣೆ ಮೂಲಕ, ರೈಲು ಮತ್ತು ರಸ್ತೆ ಯೋಜನೆಗಳ ಘೋಷಣೆಯ ಮೂಲಕ ಹಾಗೂ ಭಾಗಲ್ಪುರದ ಕಹಲಗಾಂವ್ನಲ್ಲಿ ವಿಕ್ರಮಶಿಲಾ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವ ಮಾಡುವ ಮೂಲಕ ಹಲವು ಕೊಡುಗೆಗಳನ್ನು ನೀಡಿದರು.</p><p>‘ನಾವು ರೈತರಿಗೆ ಅತಿಹೆಚ್ಚಿನ ಮಹತ್ವ ನೀಡಿದ್ದೇವೆ. ಆಹಾರ ಸಂಸ್ಕರಣೆ ಉದ್ಯಮಕ್ಕೂ ನಾವು ಗಮನ ನೀಡುತ್ತಿದ್ದೇವೆ. ಈ ಉದ್ಯಮದಿಂದಾಗಿ ರೈತರಿಗೂ ಪ್ರಯೋಜನವಾಗುತ್ತದೆ’ ಎಂದು ಮೋದಿ ಅವರು ಹೇಳಿದರು. ಪಿಎಂ–ಕಿಸಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ವಾರ್ಷಿಕವಾಗಿ ₹6,000 ನೀಡಲಾಗುತ್ತದೆ. ಈ ಮೊತ್ತವನ್ನು ರೈತರ ಖಾತೆಗೆ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ.</p><p>ಅಕ್ಟೋಬರ್ನಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಈ ಮೊತ್ತವನ್ನು ವರ್ಗಾವಣೆ ಮಾಡಿರುವುದು ಮಹತ್ವದ್ದಾಗಿದೆ.</p><p>ಭಾಗಲ್ಪುರ ರೇಷ್ಮೆಯನ್ನು ಬಳಸಿ ತಯಾರಿಸಿದ ಸೀರೆಗಳು ದೇಶದಲ್ಲಿ ಮಾತ್ರವೇ ಅಲ್ಲದೆ, ವಿಶ್ವದ ಇತರೆಡೆಗಳಲ್ಲಿಯೂ ಪ್ರಸಿದ್ಧಿ ಪಡೆದಿವೆ ಎಂದು ಮೋದಿ ಹೇಳಿದರು.</p><p>2005ರ ನಂತರ ಬಿಹಾರವು ಅಭವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುವಂತೆ ತಾವು ಮಾಡಿದ್ದು ಹೇಗೆ ಎಂಬುದನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿವರಿಸಿದರು. ‘2005ರಲ್ಲಿ ನಾನು ಅಧಿಕಾರ ಹಿಡಿದಾಗ ಬಿಹಾರದ ವಾರ್ಷಿಕ ಬಜೆಟ್ ಗಾತ್ರ ₹28 ಸಾವಿರ ಕೋಟಿ ಆಗಿತ್ತು. ಈಗ ಅದು ₹3 ಲಕ್ಷ ಕೋಟಿಗಿಂತ ಹೆಚ್ಚಾಗಿದೆ’ ಎಂದು ನಿತೀಶ್ ಹೇಳಿದರು. ಅನುದಾನಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು.</p><p><strong>ತೇಜಸ್ವಿ ಟೀಕೆ</strong>: </p><p>ಮೋದಿ ಅವರ ಬಿಹಾರ ಭೇಟಿಯ ಪ್ರಯೋಜನ ಏನು ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.</p><p>‘ಮೋದಿ ಅವರು 11 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ, ನಿತೀಶ್ ಅವರು 20 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಬಿಹಾರವು ತಲಾವಾರು ಆದಾಯದಲ್ಲಿ, ಹೂಡಿಕೆಯಲ್ಲಿ, ರೈತರ ಆದಾಯದಲ್ಲಿ ಕೆಳಮಟ್ಟದಲ್ಲಿದೆ’ ಎಂದು ತೇಜಸ್ವಿ ಅವರು ಹೇಳಿದ್ದಾರೆ.</p><p>ಚುನಾವಣೆ ಹತ್ತಿರವಾದಾಗಲೆಲ್ಲ ಪ್ರಧಾನಿಯವರು ಬಿಹಾರಕ್ಕೆ ಬರುತ್ತಾರೆ, ಭರವಸೆಗಳನ್ನು ನೀಡುತ್ತಾರೆ. ಆದರೆ ಅವು ಯಾವುದನ್ನೂ ಅವರು ಈಡೇರಿಸುವುದಿಲ್ಲ ಎಂದು ತೇಜಸ್ವಿ ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ</strong>: ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ’ಯ (ಪಿಎಂ–ಕಿಸಾನ್) ಅಡಿ ನೀಡುವ ₹22 ಸಾವಿರ ಕೋಟಿಯ 19ನೆಯ ಕಂತಿನ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಡುಗಡೆ ಮಾಡಿದರು. ಇದರಿಂದಾಗಿ ದೇಶದಾದ್ಯಂತ ಒಟ್ಟು 9.8 ಕೋಟಿ ರೈತರಿಗೆ ಪ್ರಯೋಜನ ಆಗಲಿದೆ. ಬಿಹಾರದಲ್ಲಿ ಈ ಯೋಜನೆಯ ಫಲಾನುಭವಿ ರೈತರ ಸಂಖ್ಯೆ 82 ಲಕ್ಷ.</p><p>ಸೋಮವಾರ ಭಾಗಲ್ಪುರ ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮೋದಿ ಅವರು ಭಾಗಿಯಾದರು. ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಈ ಸಮಾವೇಶದಲ್ಲಿ ಮೋದಿ ಅವರು ನೇರ ನಗದು ವರ್ಗಾವಣೆ ಮೂಲಕ, ರೈಲು ಮತ್ತು ರಸ್ತೆ ಯೋಜನೆಗಳ ಘೋಷಣೆಯ ಮೂಲಕ ಹಾಗೂ ಭಾಗಲ್ಪುರದ ಕಹಲಗಾಂವ್ನಲ್ಲಿ ವಿಕ್ರಮಶಿಲಾ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವ ಮಾಡುವ ಮೂಲಕ ಹಲವು ಕೊಡುಗೆಗಳನ್ನು ನೀಡಿದರು.</p><p>‘ನಾವು ರೈತರಿಗೆ ಅತಿಹೆಚ್ಚಿನ ಮಹತ್ವ ನೀಡಿದ್ದೇವೆ. ಆಹಾರ ಸಂಸ್ಕರಣೆ ಉದ್ಯಮಕ್ಕೂ ನಾವು ಗಮನ ನೀಡುತ್ತಿದ್ದೇವೆ. ಈ ಉದ್ಯಮದಿಂದಾಗಿ ರೈತರಿಗೂ ಪ್ರಯೋಜನವಾಗುತ್ತದೆ’ ಎಂದು ಮೋದಿ ಅವರು ಹೇಳಿದರು. ಪಿಎಂ–ಕಿಸಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ವಾರ್ಷಿಕವಾಗಿ ₹6,000 ನೀಡಲಾಗುತ್ತದೆ. ಈ ಮೊತ್ತವನ್ನು ರೈತರ ಖಾತೆಗೆ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ.</p><p>ಅಕ್ಟೋಬರ್ನಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಈ ಮೊತ್ತವನ್ನು ವರ್ಗಾವಣೆ ಮಾಡಿರುವುದು ಮಹತ್ವದ್ದಾಗಿದೆ.</p><p>ಭಾಗಲ್ಪುರ ರೇಷ್ಮೆಯನ್ನು ಬಳಸಿ ತಯಾರಿಸಿದ ಸೀರೆಗಳು ದೇಶದಲ್ಲಿ ಮಾತ್ರವೇ ಅಲ್ಲದೆ, ವಿಶ್ವದ ಇತರೆಡೆಗಳಲ್ಲಿಯೂ ಪ್ರಸಿದ್ಧಿ ಪಡೆದಿವೆ ಎಂದು ಮೋದಿ ಹೇಳಿದರು.</p><p>2005ರ ನಂತರ ಬಿಹಾರವು ಅಭವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುವಂತೆ ತಾವು ಮಾಡಿದ್ದು ಹೇಗೆ ಎಂಬುದನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿವರಿಸಿದರು. ‘2005ರಲ್ಲಿ ನಾನು ಅಧಿಕಾರ ಹಿಡಿದಾಗ ಬಿಹಾರದ ವಾರ್ಷಿಕ ಬಜೆಟ್ ಗಾತ್ರ ₹28 ಸಾವಿರ ಕೋಟಿ ಆಗಿತ್ತು. ಈಗ ಅದು ₹3 ಲಕ್ಷ ಕೋಟಿಗಿಂತ ಹೆಚ್ಚಾಗಿದೆ’ ಎಂದು ನಿತೀಶ್ ಹೇಳಿದರು. ಅನುದಾನಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು.</p><p><strong>ತೇಜಸ್ವಿ ಟೀಕೆ</strong>: </p><p>ಮೋದಿ ಅವರ ಬಿಹಾರ ಭೇಟಿಯ ಪ್ರಯೋಜನ ಏನು ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.</p><p>‘ಮೋದಿ ಅವರು 11 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ, ನಿತೀಶ್ ಅವರು 20 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಬಿಹಾರವು ತಲಾವಾರು ಆದಾಯದಲ್ಲಿ, ಹೂಡಿಕೆಯಲ್ಲಿ, ರೈತರ ಆದಾಯದಲ್ಲಿ ಕೆಳಮಟ್ಟದಲ್ಲಿದೆ’ ಎಂದು ತೇಜಸ್ವಿ ಅವರು ಹೇಳಿದ್ದಾರೆ.</p><p>ಚುನಾವಣೆ ಹತ್ತಿರವಾದಾಗಲೆಲ್ಲ ಪ್ರಧಾನಿಯವರು ಬಿಹಾರಕ್ಕೆ ಬರುತ್ತಾರೆ, ಭರವಸೆಗಳನ್ನು ನೀಡುತ್ತಾರೆ. ಆದರೆ ಅವು ಯಾವುದನ್ನೂ ಅವರು ಈಡೇರಿಸುವುದಿಲ್ಲ ಎಂದು ತೇಜಸ್ವಿ ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>