<p class="title"><strong>ನವದೆಹಲಿ:</strong> ನೂತನ ಸಂಸತ್ ಭವನ ನಿರ್ಮಾಣ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ಹೇಳಿದರು.</p>.<p class="title">ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಪುನಾಭಿವೃದ್ಧಿ ಕಾರ್ಯಗಳೂ ಸರಿಯಾದ ಸಮಯದಲ್ಲಿ ಮುಗಿಯಲಿವೆ ಎಂದೂ ಅವರು ಹೇಳಿದರು.</p>.<p class="title">ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಅವೆನ್ಯೂ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಇವುಗಳ ನಿರ್ಮಾಣ ಮಾಡಲಾಗುತ್ತಿದೆ.</p>.<p class="bodytext">ಪ್ರಸ್ತುತ ಸಂಸತ್ ಭವನ ಅಸುರಕ್ಷಿತವಾಗಿದೆ. ಇದು ನಿರ್ಮಾಣವಾದಾಗ ಭೂಕಂಪ ವಲಯ 2 ರಲ್ಲಿತ್ತು. ಆದರೆ ಈಗ ಆ ಪ್ರದೇಶವು ಭೂಕಂಪ ವಲಯದ ನಾಲ್ಕರಲ್ಲಿದೆ. ಆದ್ದರಿಂದ ಹೊಸ ಸಂಸತ್ ಭವನ ಅಗತ್ಯವಿದೆ ಎಂದು ಸಚಿವ ಪುರಿ ಅವರು ಹೊಸ ಸಂಸತ್ ಭವನ ನಿರ್ಮಾಣವನ್ನು ಸಮರ್ಥಿಸಿಕೊಂಡರು.</p>.<p class="bodytext">ಇಂಡಿಯಾ ಟುಡೇ ಸಮಾವೇಶ 2021ರಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಸಚಿವರು, ಈಗ ಅಸ್ತಿತ್ವದಲ್ಲಿರುವ ಕಟ್ಟಡವನ್ನು ಸಂಸತ್ಭವನವಾಗಿ ವಿನ್ಯಾಸಗೊಳಿಸಲಾಗಿಲ್ಲ. ಆದ್ದರಿಂದ ಇಲ್ಲಿ ಹೆಚ್ಚಿನ ಸಂಸತ್ ಸದಸ್ಯರಿಗೆ ಸ್ಥಳಾವಕಾಶವಿಲ್ಲ. ಇದು ವಸಾಹಾತುಶಾಹಿ ಆಡಳಿತದಲ್ಲಿ ಸಭೆ ನಡೆಸುವ ಕೇಂದ್ರವಾಗಿತ್ತು ಎಂದು ಹೇಳಿದರು.</p>.<p class="bodytext">‘ದೇಶ ಸ್ವತಂತ್ರವಾದ ನಂತರ ಸಂಸತ್ ಸದಸ್ಯರ ಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ಆಂತರಿಕವಾಗಿ ಹೊಂದಾಣಿಕೆ ಮಾಡಲಾಗಿದೆ. ರಚನಾತ್ಮಕ ದೃಷ್ಟಿಕೋನದಿಂದ ಇದು ಅಸುರಕ್ಷಿತ ಕಟ್ಟಡವಾಗಿದೆ. ಇದು ಭೂಕಂಪದ ವಲಯದಲ್ಲಿದೆ. ಆದ್ದರಿಂದ ನಾವು ಭಯವನ್ನು ಸೃಷ್ಟಿಸಲು ಬಯಸುವುದಿಲ್ಲ’ ಎಂದು ಪುರಿ ಹೇಳಿದರು.</p>.<p class="bodytext">ಸೆಂಟ್ರಲ್ ವಿಸ್ತಾದ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಹೊಸ ಸಂಸತ್ ಕಟ್ಟಡ, ಒಂದು ಸಾಮಾನ್ಯ ಕೇಂದ್ರ ಕಾರ್ಯಾಲಯ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಮೂರು ಕಿ.ಮೀ.ರಾಜಪಥ, ಹೊಸ ಪ್ರಧಾನಮಂತ್ರಿ ನಿವಾಸ ಮತ್ತು ಕಚೇರಿ ಹಾಗೂ ಉಪರಾಷ್ಟ್ರಪತಿಗಳ ನೂತನ ಸಂಕೀರ್ಣ ನಿರ್ಮಾಣ ಮಾಡಲಾಗುತ್ತದೆ.</p>.<p class="bodytext">ಈಗಿರುವ ಸಂಸತ್ ಕಟ್ಟಡದ ಬಳಿ ನೂತನ ಸಂಸತ್ ಕಟ್ಟಡವನ್ನು ಸೆಂಟ್ರಲ್ ವಿಸ್ತಾ ಯೋಜನೆಯಡಿ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಸಂಸ್ಥೆಯು ನಿರ್ಮಿಸುತ್ತಿದೆ.</p>.<p class="bodytext">ಮುಂದಿನ ವರ್ಷ ಡಿಸೆಂಬರ್ನಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವು ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ನೂತನ ಸಂಸತ್ ಭವನ ನಿರ್ಮಾಣ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ಹೇಳಿದರು.</p>.<p class="title">ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಪುನಾಭಿವೃದ್ಧಿ ಕಾರ್ಯಗಳೂ ಸರಿಯಾದ ಸಮಯದಲ್ಲಿ ಮುಗಿಯಲಿವೆ ಎಂದೂ ಅವರು ಹೇಳಿದರು.</p>.<p class="title">ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಅವೆನ್ಯೂ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಇವುಗಳ ನಿರ್ಮಾಣ ಮಾಡಲಾಗುತ್ತಿದೆ.</p>.<p class="bodytext">ಪ್ರಸ್ತುತ ಸಂಸತ್ ಭವನ ಅಸುರಕ್ಷಿತವಾಗಿದೆ. ಇದು ನಿರ್ಮಾಣವಾದಾಗ ಭೂಕಂಪ ವಲಯ 2 ರಲ್ಲಿತ್ತು. ಆದರೆ ಈಗ ಆ ಪ್ರದೇಶವು ಭೂಕಂಪ ವಲಯದ ನಾಲ್ಕರಲ್ಲಿದೆ. ಆದ್ದರಿಂದ ಹೊಸ ಸಂಸತ್ ಭವನ ಅಗತ್ಯವಿದೆ ಎಂದು ಸಚಿವ ಪುರಿ ಅವರು ಹೊಸ ಸಂಸತ್ ಭವನ ನಿರ್ಮಾಣವನ್ನು ಸಮರ್ಥಿಸಿಕೊಂಡರು.</p>.<p class="bodytext">ಇಂಡಿಯಾ ಟುಡೇ ಸಮಾವೇಶ 2021ರಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಸಚಿವರು, ಈಗ ಅಸ್ತಿತ್ವದಲ್ಲಿರುವ ಕಟ್ಟಡವನ್ನು ಸಂಸತ್ಭವನವಾಗಿ ವಿನ್ಯಾಸಗೊಳಿಸಲಾಗಿಲ್ಲ. ಆದ್ದರಿಂದ ಇಲ್ಲಿ ಹೆಚ್ಚಿನ ಸಂಸತ್ ಸದಸ್ಯರಿಗೆ ಸ್ಥಳಾವಕಾಶವಿಲ್ಲ. ಇದು ವಸಾಹಾತುಶಾಹಿ ಆಡಳಿತದಲ್ಲಿ ಸಭೆ ನಡೆಸುವ ಕೇಂದ್ರವಾಗಿತ್ತು ಎಂದು ಹೇಳಿದರು.</p>.<p class="bodytext">‘ದೇಶ ಸ್ವತಂತ್ರವಾದ ನಂತರ ಸಂಸತ್ ಸದಸ್ಯರ ಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ಆಂತರಿಕವಾಗಿ ಹೊಂದಾಣಿಕೆ ಮಾಡಲಾಗಿದೆ. ರಚನಾತ್ಮಕ ದೃಷ್ಟಿಕೋನದಿಂದ ಇದು ಅಸುರಕ್ಷಿತ ಕಟ್ಟಡವಾಗಿದೆ. ಇದು ಭೂಕಂಪದ ವಲಯದಲ್ಲಿದೆ. ಆದ್ದರಿಂದ ನಾವು ಭಯವನ್ನು ಸೃಷ್ಟಿಸಲು ಬಯಸುವುದಿಲ್ಲ’ ಎಂದು ಪುರಿ ಹೇಳಿದರು.</p>.<p class="bodytext">ಸೆಂಟ್ರಲ್ ವಿಸ್ತಾದ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಹೊಸ ಸಂಸತ್ ಕಟ್ಟಡ, ಒಂದು ಸಾಮಾನ್ಯ ಕೇಂದ್ರ ಕಾರ್ಯಾಲಯ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಮೂರು ಕಿ.ಮೀ.ರಾಜಪಥ, ಹೊಸ ಪ್ರಧಾನಮಂತ್ರಿ ನಿವಾಸ ಮತ್ತು ಕಚೇರಿ ಹಾಗೂ ಉಪರಾಷ್ಟ್ರಪತಿಗಳ ನೂತನ ಸಂಕೀರ್ಣ ನಿರ್ಮಾಣ ಮಾಡಲಾಗುತ್ತದೆ.</p>.<p class="bodytext">ಈಗಿರುವ ಸಂಸತ್ ಕಟ್ಟಡದ ಬಳಿ ನೂತನ ಸಂಸತ್ ಕಟ್ಟಡವನ್ನು ಸೆಂಟ್ರಲ್ ವಿಸ್ತಾ ಯೋಜನೆಯಡಿ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಸಂಸ್ಥೆಯು ನಿರ್ಮಿಸುತ್ತಿದೆ.</p>.<p class="bodytext">ಮುಂದಿನ ವರ್ಷ ಡಿಸೆಂಬರ್ನಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವು ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>