ಕಾನ್ಪುರದಿಂದ ಬಂದಿದ್ದ ಐವರು ಭಕ್ತರನ್ನು ಮಥುರಾ ರೈಲು ನಿಲ್ದಾಣದಿಂದ ವೃಂದಾವನ ಕಡೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಆಟೋ ರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ ಎಂದು ವೃಂದಾವನ ಎಸ್ಎಚ್ಒ ಆನಂದ್ ಕುಮಾರ್ ಶಾಹಿ ಹೇಳಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಐವರನ್ನು ವೃಂದಾವನದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಾನ್ಪುರದ ಬಲರಾಮ ನಗರದ ನಿವಾಸಿ ಪ್ರಕಾತ್ ಕಟಿಯಾರ್ (32) ಎಂಬುವವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.