<p><strong>ಜೈಪುರ</strong>: 'ಆಪರೇಷನ್ ಸಿಂಧೂರ ಮೂಲಕ ಭಾರತದ ಶಕ್ತಿ, ಸೇನೆಯ ತಾಕತ್ತು ಹಾಗೂ ಮೋದಿಯವರ 'ನಿರ್ಣಾಯಕ ನಾಯಕತ್ವ'ವು ಮತ್ತೊಮ್ಮೆ ಅನಾವರಣಗೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. </p><p>ಜೈಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.</p><p>ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶವು ಸುರಕ್ಷಿತವಾಗಿದೆ. ಆಪರೇಷನ್ ಸಿಂಧೂರ ಮೂಲಕ ಕೇವಲ 22 ನಿಮಿಷಗಳಲ್ಲಿ ಭಯೋತ್ಪಾದಕರ ಅಡಗು ತಾಣಗಳನ್ನು ನಾಶ ಮಾಡಿದ್ದು ಭಾರತೀಯ ಸೇನೆಯ ಶೌರ್ಯಕ್ಕೆ ಸಾಕ್ಷಿಯಾಗಿದೆ ಎಂದರು. </p><p>ಪಾಕಿಸ್ತಾನಕ್ಕಾದ ಹಿನ್ನಡೆಯು ನಮ್ಮ ಸೇನೆಯ ಶಕ್ತಿಯನ್ನು ಹಾಗೂ ಮೋದಿಯವರ ನಾಯಕತ್ವದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರು. </p>.‘ಆಪರೇಷನ್ ಸಿಂಧೂರ’ ಈಗ ಶೌರ್ಯದ ಸಂಕೇತವಾಗಿದೆ: ಪ್ರಧಾನಿ ಮೋದಿ.<p>ಸರ್ಜಿಕಲ್ ದಾಳಿ, ವಾಯು ದಾಳಿ ಹಾಗೂ ಆಪರೇಷನ್ ಸಿಂಧೂರ ಮೂಲಕ ನಮ್ಮ ತಂಟೆಗೆ ಬಂದರೆ, ಅವರ ಗಡಿಯೊಳಗೆ ನುಗ್ಗಿ ಉತ್ತರ ಕೊಡುತ್ತೇವೆ ಎನ್ನುವುದನ್ನು ಭಾರತ ನಿರೂಪಿಸಿದೆ ಎಂದರು. </p><p>ಪಾಕಿಸ್ತಾನದ ಕುತಂತ್ರಗಳು ನಿಲ್ಲುವವರೆಗೂ ಆಪರೇಷನ್ ಸಿಂಧೂರ ನಿಲ್ಲುವುದಿಲ್ಲ ಎಂದು ತಿಳಿಸಿದರು. </p><p>ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಹೊಸ ನಿಲುವುಗಳನ್ನು ಪ್ರದರ್ಶಿಸುವ ಮೂಲಕ 'ದಿಟ್ಟ ಹಾಗೂ ಸ್ಪಷ್ಟ ರಾಷ್ಟ್ರೀಯ ಭದ್ರತಾ ನೀತಿಯ ಹೊಸ ಯುಗ' ಇದಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: 'ಆಪರೇಷನ್ ಸಿಂಧೂರ ಮೂಲಕ ಭಾರತದ ಶಕ್ತಿ, ಸೇನೆಯ ತಾಕತ್ತು ಹಾಗೂ ಮೋದಿಯವರ 'ನಿರ್ಣಾಯಕ ನಾಯಕತ್ವ'ವು ಮತ್ತೊಮ್ಮೆ ಅನಾವರಣಗೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. </p><p>ಜೈಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.</p><p>ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶವು ಸುರಕ್ಷಿತವಾಗಿದೆ. ಆಪರೇಷನ್ ಸಿಂಧೂರ ಮೂಲಕ ಕೇವಲ 22 ನಿಮಿಷಗಳಲ್ಲಿ ಭಯೋತ್ಪಾದಕರ ಅಡಗು ತಾಣಗಳನ್ನು ನಾಶ ಮಾಡಿದ್ದು ಭಾರತೀಯ ಸೇನೆಯ ಶೌರ್ಯಕ್ಕೆ ಸಾಕ್ಷಿಯಾಗಿದೆ ಎಂದರು. </p><p>ಪಾಕಿಸ್ತಾನಕ್ಕಾದ ಹಿನ್ನಡೆಯು ನಮ್ಮ ಸೇನೆಯ ಶಕ್ತಿಯನ್ನು ಹಾಗೂ ಮೋದಿಯವರ ನಾಯಕತ್ವದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರು. </p>.‘ಆಪರೇಷನ್ ಸಿಂಧೂರ’ ಈಗ ಶೌರ್ಯದ ಸಂಕೇತವಾಗಿದೆ: ಪ್ರಧಾನಿ ಮೋದಿ.<p>ಸರ್ಜಿಕಲ್ ದಾಳಿ, ವಾಯು ದಾಳಿ ಹಾಗೂ ಆಪರೇಷನ್ ಸಿಂಧೂರ ಮೂಲಕ ನಮ್ಮ ತಂಟೆಗೆ ಬಂದರೆ, ಅವರ ಗಡಿಯೊಳಗೆ ನುಗ್ಗಿ ಉತ್ತರ ಕೊಡುತ್ತೇವೆ ಎನ್ನುವುದನ್ನು ಭಾರತ ನಿರೂಪಿಸಿದೆ ಎಂದರು. </p><p>ಪಾಕಿಸ್ತಾನದ ಕುತಂತ್ರಗಳು ನಿಲ್ಲುವವರೆಗೂ ಆಪರೇಷನ್ ಸಿಂಧೂರ ನಿಲ್ಲುವುದಿಲ್ಲ ಎಂದು ತಿಳಿಸಿದರು. </p><p>ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಹೊಸ ನಿಲುವುಗಳನ್ನು ಪ್ರದರ್ಶಿಸುವ ಮೂಲಕ 'ದಿಟ್ಟ ಹಾಗೂ ಸ್ಪಷ್ಟ ರಾಷ್ಟ್ರೀಯ ಭದ್ರತಾ ನೀತಿಯ ಹೊಸ ಯುಗ' ಇದಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>