ಅಮೇಠಿ, ಪ್ರಯಾಗರಾಜ್ ಹಾಗೂ ಸುಲ್ತಾನ್ಪುರದಲ್ಲಿ ಸರಣಿ ಚುನಾವಣಾ ಸಮಾವೇಶಗಳನ್ನು ಉದ್ದೇಶಿಸಿ ಪ್ರಧಾನಿಮಾತನಾಡಿದರು. ಕಾಶಿ ಹಾಗೂ ಅಯೋಧ್ಯೆಯಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಪ್ರತಿಪಕ್ಷಗಳು ಕೋಮುದೃಷ್ಟಿಯಿಂದ ನೋಡುತ್ತಿವೆ ಎಂದು ಅವರು ಪ್ರಯಾಗರಾಜ್ನಲ್ಲಿ ಆರೋಪಿಸಿದರು. ‘ಪ್ರಯಾಗರಾಜ್ ಎಂಬ ಹೆಸರು ಹೆಮ್ಮಯ ಪ್ರತೀಕ. ಆದರೆ ಈ ಹೆಸರನ್ನು ವಿರೋಧಿಸುವವರು ಜನರಿಗಾಗಿ ಏನನ್ನೂ ಮಾಡಲಾರರು’ ಎಂದು ಪ್ರಧಾನಿ ಟೀಕಿಸಿದರು. ಯೋಗಿ ಆದಿತ್ಯನಾಥ ಅವರ ಸರ್ಕಾರವು ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಬದಲಿಸಿತ್ತು.