ರಾಜ್ಯದಲ್ಲಿ ನಡೆದ ಹಿಂದಿ ಭಾಷೆ ವಿರೋಧ ಆಂದೋಲನ ಭಾಗವಾಗಿ ಮಡಿದವರಿಗೆ ಗೌರವಸಲ್ಲಿಸಲು ಬುಧವಾರ ನಡೆದ ಭಾಷಾ ಹುತಾತ್ಮತ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಿಂದಿ ಹೇರುವುದನ್ನು ಅಭ್ಯಾಸ ಮಾಡಿಕೊಂಡಿದೆ. ಆಡಳಿತದಿಂದ ಶಿಕ್ಷಣದವರೆಗೆ ಹಿಂದಿ ಹೇರುವುದಕ್ಕೇ ಆಡಳಿತಕ್ಕೆ ಬಂದಂತೆ ಭಾವಿಸುತ್ತಿದ್ದಾರೆ. ಒಂದು ರಾಷ್ಟ್ರ, ಒಂದು ಧರ್ಮ, ಒಂದು ಚುನಾವಣೆ, ಒಂದು (ಪ್ರವೇಶ) ಪರೀಕ್ಷೆ, ಒಂದು ಆಹಾರ, ಒಂದು ಸಂಸ್ಕೃತಿಯಂತೆ, ಒಂದು ಭಾಷೆ ಹೇರಿಕೆಯಿಂದ ಇತರ ರಾಷ್ಟ್ರೀಯ ಜನಾಂಗಗಳ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ಹಿಂದಿ ಹೇರಿಕೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ತಮಿಳನ್ನು ರಕ್ಷಿಸುವ ಪ್ರಯತ್ನ ನಿರಂತರವಾಗಿರುತ್ತದೆ ಎಂದರು.