ಕೋಲ್ಕತ್ತದಿಂದ 100 ಕಿ.ಮೀ. ದೂರದಲ್ಲಿರುವ ಸಾಗರ ದ್ವೀಪಕ್ಕೆ ಹೋಗುವ ವಿವಿಧ ಮಾರ್ಗಗಳಲ್ಲಿ 3.2 ಲಕ್ಷ ಯಾತ್ರಾರ್ಥಿಗಳು ಕೋವಿಡ್ ಆರ್-ಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಸಚಿವರಾದ ಅರೂಪ್ ಬಿಸ್ವಾಸ್ ಹಾಗೂ ಶಶಿ ಪಂಜ ಸ್ಥಳದಲ್ಲಿ ಮೊಕ್ಕಾಂ ಹೂಡಿ, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ ಪವಿತ್ರ ಸ್ನಾನ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದಾರೆ.