<p><strong>ಮಹಾಕುಂಭನಗರ</strong>: ಮಹಾಕುಂಭಮೇಳದ ಜನಜಂಗುಳಿಯಲ್ಲಿ ತಮ್ಮ ಕುಟುಂಬದಿಂದ ಬೇರ್ಪಟ್ಟಿದ್ದ 50,000ಕ್ಕೂ ಅಧಿಕ ಜನರನ್ನು ಮತ್ತೆ ಕುಟುಂಬಗಳ ಜೊತೆಗೆ ಸೇರಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.</p><p>ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಮಹಾ ಕುಂಭಮೇಳದ ಸಮಯದಲ್ಲಿ, ದೇಶ ಮತ್ತು ವಿದೇಶಗಳ ಮೂಲೆ ಮೂಲೆಗಳಿಂದ 66 ಕೋಟಿಗೂ ಹೆಚ್ಚು ಭಕ್ತರು ಗಂಗಾ ಮತ್ತು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ..</p><p>ಈ ವೇಳೆ ಕುಟುಂಬದಿಂದ ಬೇರ್ಪಟ್ಟ 54,357 ಮಂದಿ ಮತ್ತೆ ಒಂದಾಗಿದ್ದಾರೆ. ಬೇರ್ಪಟ್ಟವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು.</p><p>ಈ ಬಾರಿ, ಮಹಾಕುಂಭದ ಸಮಯದಲ್ಲಿ ಕಳೆದುಹೋದ ಜನರನ್ನು ಅವರ ಕುಟುಂಬಗಳೊಂದಿಗೆ ತ್ವರಿತವಾಗಿ ಸೇರಿಸಲು ರಾಜ್ಯ ಸರ್ಕಾರವು ಡಿಜಿಟಲ್ ಲಾಸ್ಟ್ ಮತ್ತು ಫೌಂಡ್ ಕೇಂದ್ರಗಳನ್ನು ಸ್ಥಾಪಿಸಿತ್ತು.</p><p>ಈ ಕೇಂದ್ರಗಳ ಮೂಲಕ 35,000ಕ್ಕೂ ಹೆಚ್ಚು ಭಕ್ತರು ಮಹಾಕುಂಭದ ಸಮಯದಲ್ಲಿ ತಮ್ಮ ಕುಟುಂಬವನ್ನು ಮತ್ತೆ ಸೇರಿಕೊಂಡಿದ್ದಾರೆ.</p><p>'ಅಮೃತ ಸ್ನಾನ'ದ ಸಮಯದಲ್ಲಿ ಮಕರ ಸಂಕ್ರಾಂತಿಯಂದು 598 ಭಕ್ತರು, ಮೌನಿ ಅಮವಾಸ್ಯೆಯಂದು 8,725 ಜನರು ಮತ್ತು ಬಸಂತ್ ಪಂಚಮಿಯಂದು 864 ಜನರು ಕಳೆದುಹೋಗಿದ್ದರು. ಡಿಜಿಟಲ್ ಕೇಂದ್ರಗಳ ಸಹಾಯದಿಂದ ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದಾಗಿದ್ದಾರೆ.</p><p>ಇದಲ್ಲದೆ, ಇತರ ವಿಶೇಷ ದಿನಗಳ ಸ್ನಾನದ ಸಂದರ್ಭಗಳಲ್ಲಿ ಕಳೆದುಹೋಗಿದ್ದ 24,896 ಜನರನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸಲಾಗಿದೆ.</p><p>ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಕ್ರಮದ ಮೇರೆಗೆ ಮಹಾ ಕುಂಭ ನಗರದಾದ್ಯಂತ 10 ಡಿಜಿಟಲ್ ಲಾಸ್ಟ್ ಮತ್ತು ಫೌಂಡ್ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. AIಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆ, ಯಂತ್ರ ಕಲಿಕೆ ಮತ್ತು ಬಹುಭಾಷಾ ಬೆಂಬಲದಂತಹ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ವ್ಯವಸ್ಥೆ ಕಾರ್ಯಾಚರಿಸಿತು ಎಂದು ಹೇಳಿಕೆ ತಿಳಿಸಿದೆ.</p><p>ಮತ್ತೊಂದೆಡೆ, ಸರ್ಕಾರೇತರ ಸಾಮಾಜಿಕ ಸಂಸ್ಥೆಗಳಾದ ಭಾರತ್ ಸೇವಾದಳ ಮತ್ತು ಹೇಮಾವತಿ ನಂದನ್ ಬಹುಗುಣ ಸ್ಮೃತಿ ಸಮಿತಿ ಕೂಡ ಕಳೆದುಹೋದ ಜನರನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಕುಂಭನಗರ</strong>: ಮಹಾಕುಂಭಮೇಳದ ಜನಜಂಗುಳಿಯಲ್ಲಿ ತಮ್ಮ ಕುಟುಂಬದಿಂದ ಬೇರ್ಪಟ್ಟಿದ್ದ 50,000ಕ್ಕೂ ಅಧಿಕ ಜನರನ್ನು ಮತ್ತೆ ಕುಟುಂಬಗಳ ಜೊತೆಗೆ ಸೇರಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.</p><p>ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಮಹಾ ಕುಂಭಮೇಳದ ಸಮಯದಲ್ಲಿ, ದೇಶ ಮತ್ತು ವಿದೇಶಗಳ ಮೂಲೆ ಮೂಲೆಗಳಿಂದ 66 ಕೋಟಿಗೂ ಹೆಚ್ಚು ಭಕ್ತರು ಗಂಗಾ ಮತ್ತು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ..</p><p>ಈ ವೇಳೆ ಕುಟುಂಬದಿಂದ ಬೇರ್ಪಟ್ಟ 54,357 ಮಂದಿ ಮತ್ತೆ ಒಂದಾಗಿದ್ದಾರೆ. ಬೇರ್ಪಟ್ಟವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು.</p><p>ಈ ಬಾರಿ, ಮಹಾಕುಂಭದ ಸಮಯದಲ್ಲಿ ಕಳೆದುಹೋದ ಜನರನ್ನು ಅವರ ಕುಟುಂಬಗಳೊಂದಿಗೆ ತ್ವರಿತವಾಗಿ ಸೇರಿಸಲು ರಾಜ್ಯ ಸರ್ಕಾರವು ಡಿಜಿಟಲ್ ಲಾಸ್ಟ್ ಮತ್ತು ಫೌಂಡ್ ಕೇಂದ್ರಗಳನ್ನು ಸ್ಥಾಪಿಸಿತ್ತು.</p><p>ಈ ಕೇಂದ್ರಗಳ ಮೂಲಕ 35,000ಕ್ಕೂ ಹೆಚ್ಚು ಭಕ್ತರು ಮಹಾಕುಂಭದ ಸಮಯದಲ್ಲಿ ತಮ್ಮ ಕುಟುಂಬವನ್ನು ಮತ್ತೆ ಸೇರಿಕೊಂಡಿದ್ದಾರೆ.</p><p>'ಅಮೃತ ಸ್ನಾನ'ದ ಸಮಯದಲ್ಲಿ ಮಕರ ಸಂಕ್ರಾಂತಿಯಂದು 598 ಭಕ್ತರು, ಮೌನಿ ಅಮವಾಸ್ಯೆಯಂದು 8,725 ಜನರು ಮತ್ತು ಬಸಂತ್ ಪಂಚಮಿಯಂದು 864 ಜನರು ಕಳೆದುಹೋಗಿದ್ದರು. ಡಿಜಿಟಲ್ ಕೇಂದ್ರಗಳ ಸಹಾಯದಿಂದ ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದಾಗಿದ್ದಾರೆ.</p><p>ಇದಲ್ಲದೆ, ಇತರ ವಿಶೇಷ ದಿನಗಳ ಸ್ನಾನದ ಸಂದರ್ಭಗಳಲ್ಲಿ ಕಳೆದುಹೋಗಿದ್ದ 24,896 ಜನರನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸಲಾಗಿದೆ.</p><p>ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಕ್ರಮದ ಮೇರೆಗೆ ಮಹಾ ಕುಂಭ ನಗರದಾದ್ಯಂತ 10 ಡಿಜಿಟಲ್ ಲಾಸ್ಟ್ ಮತ್ತು ಫೌಂಡ್ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. AIಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆ, ಯಂತ್ರ ಕಲಿಕೆ ಮತ್ತು ಬಹುಭಾಷಾ ಬೆಂಬಲದಂತಹ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ವ್ಯವಸ್ಥೆ ಕಾರ್ಯಾಚರಿಸಿತು ಎಂದು ಹೇಳಿಕೆ ತಿಳಿಸಿದೆ.</p><p>ಮತ್ತೊಂದೆಡೆ, ಸರ್ಕಾರೇತರ ಸಾಮಾಜಿಕ ಸಂಸ್ಥೆಗಳಾದ ಭಾರತ್ ಸೇವಾದಳ ಮತ್ತು ಹೇಮಾವತಿ ನಂದನ್ ಬಹುಗುಣ ಸ್ಮೃತಿ ಸಮಿತಿ ಕೂಡ ಕಳೆದುಹೋದ ಜನರನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>