ನಿಜಾಮಾಬಾದ್ ಜಿಲ್ಲೆಯಲ್ಲಿಮಹಾನಗರ ಪಾಲಿಕೆ ಚುನಾವಣೆ ರ್ಯಾಲಿಯನ್ನು ಉದ್ದೇಶಿಸಿಮಾತನಾಡಿದ ಓವೈಸಿ,‘ಐದು ವರ್ಷದಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಎನ್ಡಿಎ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದೀಗ ಆರ್ಎಸ್ಎಸ್ ಜನರು ಎರಡು ಮಕ್ಕಳು ಮಿತಿಗೊಳಿಸುವ ಕಾನೂನಿನ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಶೇ 60 ಜನಸಂಖ್ಯೆ 40 ವರ್ಷದೊಳಗಿನ ಯುವಜನರಾಗಿದ್ದು, ಇವರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಆರ್ಎಸ್ಎಸ್ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.