<p><strong>ನವದೆಹಲಿ</strong>: ಆಪರೇಷನ್ ಸಿಂಧೂರ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ವಿಪಕ್ಷಗಳು ಸ್ವಯಂ ಹಾನಿ ಮಾಡಿಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟ ಪ್ರಧಾನಿ ನರೇಂದ್ರ ಮೋದಿ, ‘ತಮ್ಮ ಕಾಲಿಗೆ ಕಲ್ಲಿನಿಂದ ಹೊಡೆದುಕೊಳ್ಳುವ ವಿರೋಧ ಪಕ್ಷವನ್ನು ನೀವು ಬೇರೆಲ್ಲಿ ಕಾಣುವಿರಿ’ ಎಂದು ಪ್ರಶ್ನಿಸಿದರು. </p><p>ಸಂಸತ್ ಭವನದಲ್ಲಿ ಮಂಗಳವಾರ ನಡೆದ ಎನ್ಡಿಎ ಮೈತ್ರಿಕೂಟದ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಬೇಡಿಕೆಯನ್ನು ಕಾರ್ಯತಂತ್ರದ ತಪ್ಪು ಹೆಜ್ಜೆ ಎಂದು ಅವರು ಬಣ್ಣಿಸಿದರು. ಸಂಸತ್ನಲ್ಲಿ ನಡೆದ ಚರ್ಚೆಯು ವಿಪಕ್ಷಗಳಿಗೆ ತಿರುಗುಬಾಣವಾಯಿತು ಎಂದು ಪ್ರತಿಪಾದಿಸಿದರು.</p><p>ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕಿಂತ ದೊಡ್ಡ ಛೀಮಾರಿ ಇನ್ನೊಂದಿಲ್ಲ’ ಎಂದು ಅವರು ಹೇಳಿದರು.</p><p>ಭಾರತದ ಭಾಗ ಮತ್ತು ಭದ್ರತೆಯ ಬಗ್ಗೆ ರಾಹುಲ್ ಬಾಲಿಶ ಮತ್ತು ಆಧಾರರಹಿತ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ನ್ಯಾಯಾಲಯವು ಅವರಿಗೆ ಪಾಠ ಕಲಿಸಿದೆ ಎಂದು ಮೋದಿ ಹೇಳಿದರು.</p><p>1998ರಲ್ಲಿ ಮೈತ್ರಿಕೂಟವು ಸ್ಥಾಪನೆಯಾದಾಗಿನಿಂದ ಅದರ ಪ್ರಯಾಣವು ಯಶಸ್ಸಿನಿಂದ ಕೂಡಿದೆ ಮತ್ತು ಇನ್ನೂ ಅನೇಕ ಸಾಧನೆಗಳನ್ನು ಮಾಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.</p><p>ಆಪರೇಷನ್ ಸಿಂಧೂರ ಬಗ್ಗೆ ಮೈತ್ರಿಕೂಟದ ನಾಯಕರು ಶ್ಲಾಘಿಸಿದರು. ಭಯೋತ್ಪಾದಕರನ್ನು ನಿಗ್ರಹಿಸಿದ್ದಕ್ಕಾಗಿ ಮೋದಿ ಅವರನ್ನು ಅಭಿನಂದಿಸಿದರು. ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹಾದೇವ್ ಸಮಯದಲ್ಲಿ ಸಶಸ್ತ್ರ ಪಡೆಗಳ ಅಸಾಧಾರಣ ಧೈರ್ಯ ಮತ್ತು ಅಚಲ ಬದ್ಧತೆಯನ್ನು ಪ್ರಶಂಸಿಸಿ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. </p><p>2024ರ ಜೂನ್ನಲ್ಲಿ ಎನ್ಡಿಎ ಮೈತ್ರಿಕೂಟ ಸರ್ಕಾರ ರಚಿಸಿದ ಬಳಿಕ ಸಂಸತ್ತಿನ ಅಧಿವೇಶನಗಳಲ್ಲಿ ಮೈತ್ರಿಕೂಟದ ಸದಸ್ಯರು ಸಭೆ ಸೇರಿರುವುದು ಇದು ಎರಡನೇ ಬಾರಿ. </p>.ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲ ವಂಚನೆ: ಇ.ಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ.ಧರ್ಮಸ್ಥಳ ಪ್ರಕರಣ: ಕಾಡಿನಲ್ಲಿ ಏಳನೇ ದಿನದ ಶೋಧ ಆರಂಭ.LIVE | ಸಾರಿಗೆ ನೌಕರರ ಮುಷ್ಕರ: ರಸ್ತೆಗಿಳಿಯದ KSRTC ಬಸ್ಗಳು; ಸಂಚಾರದಲ್ಲಿ ಭಾರಿ ವ್ಯತ್ಯಯ.ಸರ್ಕಾರಿ ಸಾರಿಗೆ ನೌಕರರ ಮುಷ್ಕರಕ್ಕೆ ಕೂಡಲೇ ಪರಿಹಾರ: ಬಿ.ವೈ.ವಿಜಯೇಂದ್ರ ಆಗ್ರಹ.ಸರ್ವಾಧಿಕಾರಿ ಧೋರಣೆ: ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಸಂಸದ ತೀಕ್ಷ್ಣ ಪ್ರತಿಕ್ರಿಯೆ.KSRTC Strike |ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ; ಜನಸಾಮಾನ್ಯರಿಗೆ ಪರದಾಟ: ಅಶೋಕ .IND vs ENG Stats: 56 ನಿಮಿಷಗಳ ಥ್ರಿಲ್ಲರ್; ಭಾರತಕ್ಕೆ ಸ್ಮರಣೀಯ ಗೆಲುವು .SBI ATM ಕಳ್ಳತನಕ್ಕೆ SUV ಬಳಸಿದ ಚಾಲಾಕಿ ಕಳ್ಳರು: ಹೊರಗೆಳೆಯುವ ಯತ್ನ ವಿಫಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಆಪರೇಷನ್ ಸಿಂಧೂರ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ವಿಪಕ್ಷಗಳು ಸ್ವಯಂ ಹಾನಿ ಮಾಡಿಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟ ಪ್ರಧಾನಿ ನರೇಂದ್ರ ಮೋದಿ, ‘ತಮ್ಮ ಕಾಲಿಗೆ ಕಲ್ಲಿನಿಂದ ಹೊಡೆದುಕೊಳ್ಳುವ ವಿರೋಧ ಪಕ್ಷವನ್ನು ನೀವು ಬೇರೆಲ್ಲಿ ಕಾಣುವಿರಿ’ ಎಂದು ಪ್ರಶ್ನಿಸಿದರು. </p><p>ಸಂಸತ್ ಭವನದಲ್ಲಿ ಮಂಗಳವಾರ ನಡೆದ ಎನ್ಡಿಎ ಮೈತ್ರಿಕೂಟದ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಬೇಡಿಕೆಯನ್ನು ಕಾರ್ಯತಂತ್ರದ ತಪ್ಪು ಹೆಜ್ಜೆ ಎಂದು ಅವರು ಬಣ್ಣಿಸಿದರು. ಸಂಸತ್ನಲ್ಲಿ ನಡೆದ ಚರ್ಚೆಯು ವಿಪಕ್ಷಗಳಿಗೆ ತಿರುಗುಬಾಣವಾಯಿತು ಎಂದು ಪ್ರತಿಪಾದಿಸಿದರು.</p><p>ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕಿಂತ ದೊಡ್ಡ ಛೀಮಾರಿ ಇನ್ನೊಂದಿಲ್ಲ’ ಎಂದು ಅವರು ಹೇಳಿದರು.</p><p>ಭಾರತದ ಭಾಗ ಮತ್ತು ಭದ್ರತೆಯ ಬಗ್ಗೆ ರಾಹುಲ್ ಬಾಲಿಶ ಮತ್ತು ಆಧಾರರಹಿತ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ನ್ಯಾಯಾಲಯವು ಅವರಿಗೆ ಪಾಠ ಕಲಿಸಿದೆ ಎಂದು ಮೋದಿ ಹೇಳಿದರು.</p><p>1998ರಲ್ಲಿ ಮೈತ್ರಿಕೂಟವು ಸ್ಥಾಪನೆಯಾದಾಗಿನಿಂದ ಅದರ ಪ್ರಯಾಣವು ಯಶಸ್ಸಿನಿಂದ ಕೂಡಿದೆ ಮತ್ತು ಇನ್ನೂ ಅನೇಕ ಸಾಧನೆಗಳನ್ನು ಮಾಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.</p><p>ಆಪರೇಷನ್ ಸಿಂಧೂರ ಬಗ್ಗೆ ಮೈತ್ರಿಕೂಟದ ನಾಯಕರು ಶ್ಲಾಘಿಸಿದರು. ಭಯೋತ್ಪಾದಕರನ್ನು ನಿಗ್ರಹಿಸಿದ್ದಕ್ಕಾಗಿ ಮೋದಿ ಅವರನ್ನು ಅಭಿನಂದಿಸಿದರು. ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹಾದೇವ್ ಸಮಯದಲ್ಲಿ ಸಶಸ್ತ್ರ ಪಡೆಗಳ ಅಸಾಧಾರಣ ಧೈರ್ಯ ಮತ್ತು ಅಚಲ ಬದ್ಧತೆಯನ್ನು ಪ್ರಶಂಸಿಸಿ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. </p><p>2024ರ ಜೂನ್ನಲ್ಲಿ ಎನ್ಡಿಎ ಮೈತ್ರಿಕೂಟ ಸರ್ಕಾರ ರಚಿಸಿದ ಬಳಿಕ ಸಂಸತ್ತಿನ ಅಧಿವೇಶನಗಳಲ್ಲಿ ಮೈತ್ರಿಕೂಟದ ಸದಸ್ಯರು ಸಭೆ ಸೇರಿರುವುದು ಇದು ಎರಡನೇ ಬಾರಿ. </p>.ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲ ವಂಚನೆ: ಇ.ಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ.ಧರ್ಮಸ್ಥಳ ಪ್ರಕರಣ: ಕಾಡಿನಲ್ಲಿ ಏಳನೇ ದಿನದ ಶೋಧ ಆರಂಭ.LIVE | ಸಾರಿಗೆ ನೌಕರರ ಮುಷ್ಕರ: ರಸ್ತೆಗಿಳಿಯದ KSRTC ಬಸ್ಗಳು; ಸಂಚಾರದಲ್ಲಿ ಭಾರಿ ವ್ಯತ್ಯಯ.ಸರ್ಕಾರಿ ಸಾರಿಗೆ ನೌಕರರ ಮುಷ್ಕರಕ್ಕೆ ಕೂಡಲೇ ಪರಿಹಾರ: ಬಿ.ವೈ.ವಿಜಯೇಂದ್ರ ಆಗ್ರಹ.ಸರ್ವಾಧಿಕಾರಿ ಧೋರಣೆ: ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಸಂಸದ ತೀಕ್ಷ್ಣ ಪ್ರತಿಕ್ರಿಯೆ.KSRTC Strike |ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ; ಜನಸಾಮಾನ್ಯರಿಗೆ ಪರದಾಟ: ಅಶೋಕ .IND vs ENG Stats: 56 ನಿಮಿಷಗಳ ಥ್ರಿಲ್ಲರ್; ಭಾರತಕ್ಕೆ ಸ್ಮರಣೀಯ ಗೆಲುವು .SBI ATM ಕಳ್ಳತನಕ್ಕೆ SUV ಬಳಸಿದ ಚಾಲಾಕಿ ಕಳ್ಳರು: ಹೊರಗೆಳೆಯುವ ಯತ್ನ ವಿಫಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>