<p><strong>ನವದೆಹಲಿ:</strong> ಭಾರತ ನಡೆಸಿದ ಆಪರೇಷನ್ ಸಿಂಧೂರ ದಾಳಿಯಲ್ಲಿ ಸತ್ತ 5 ಭಯೋತ್ಪಾದಕರ ಗುರುತು ಪತ್ತೆಯಾಗಿದ್ದು ಅವರ ಅಂತ್ಯಸಂಸ್ಕಾರದಲ್ಲಿ ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.</p><p>ಮೇ 7ರಂದು ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಜೈಷ್–ಎ–ಮೊಹಮ್ಮದ್, ಲಷ್ಕರ್-ಎ-ತಯಬಾಗೆ ಸೇರಿದ ಐವರು ಉಗ್ರರು ಹತರಾಗಿದ್ದಾರೆ. </p>.<h2>ಮೃತಪಟ್ಟ ಭಯೋತ್ಪಾದಕರು...</h2>.<p><strong>1. ಮುದಸ್ಸರ್ ಖಾಡಿಯನ್ ಖಾಸ್ ಅಲಿಯಾಸ್ ಮುದಸ್ಸರ್ ಅಲಿಯಾಸ್ ಅಬು ಜುಂದಾಲ್</strong></p><p>ಸಂಘಟನೆ: ಲಷ್ಕರ್–ಎ–ತಯಬಾ(ಎಲ್ಇಟಿ)</p><p>* ಮುರಿದ್ಕೆಯಲ್ಲಿ ‘ಮರ್ಕಜ್ ತಯಬಾ’ದ ಉಸ್ತುವಾರಿ</p><p>* ಅಂತ್ಯಕ್ರಿಯೆ ವೇಳೆ ಆತನಿಗೆ ಪಾಕಿಸ್ತಾನ ಸೇನೆಯಿಂದ ಸರ್ಕಾರಿ ಗೌರವ ಸಮರ್ಪಣೆ</p><p>* ಜಾಗತಿಕ ಉಗ್ರ ಹಫೀಜ್ ಅಬ್ದುಲ್ ರೌಫ್ ನೇತೃತ್ವದಲ್ಲಿ ಸರ್ಕಾರಿ ಶಾಲೆಯಲ್ಲಿ ಮುದಸ್ಸರ್ ಅಂತಿಮ ನಮನ ಕಾರ್ಯಕ್ರಮ</p><p>* ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮತ್ತು ಪಂಜಾಬ್ ಮುಖ್ಯಮಂತ್ರಿ ಮರಿಯಂ ನವಾಜ್ ಪರವಾಗಿ ಪುಷ್ಪಾರ್ಚನೆ</p><p>* ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಮತ್ತು ಪಂಜಾಬ್ ಐಜಿಪಿ ಭಾಗಿ</p><p><strong>2. ಹಫೀಜ್ ಮೊಹಮ್ಮದ್ ಜಮೀಲ್</strong></p><p>ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)</p><p>* ಜೆಇಎಂ ಸಂಸ್ಥಾಪಕ, ಜಾಗತಿಕ ಉಗ್ರ ಮೌಲಾನಾ ಮಸೂದ್ ಅಜರ್ನ ಹಿರಿಯ ಬಾಮೈದ</p><p>* ಭಹವಾಲ್ಪುರದಲ್ಲಿ ‘ಮರ್ಕಜ್ ತಯಬಾ’ದ ಉಸ್ತುವಾರಿ</p><p>* ಜೆಇಎಂಗೆ ಹಣ ಸಂಗ್ರಹಣೆ ಮಾಡುತ್ತಿದ್ದ ಮತ್ತು ಸಂಘಟನೆಗೆ ಸೇರಲು ಯುವಕರನ್ನು ಪ್ರೇರೇಪಿಸುತ್ತಿದ್ದ</p><p><strong>3. ಮೊಹಮ್ಮದ್ ಯೂಸುಫ್ ಅಜರ್ ಅಲಿಯಾಸ್ ಉಸ್ತಾದ್ ಜಿ ಅಲಿಯಾಸ್ ಮೊಹದ್ ಸಲೀಮ್ ಅಲಿಯಾಸ್ ಘೋಸಿ ಸಾಹಬ್</strong></p><p>ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)</p><p>* ಮೌಲಾನಾ ಮಸೂದ್ ಅಜರ್ನ ಕಿರಿಯ ಬಾಮೈದ</p><p>* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಭಾಗಿ</p><p>* 1999ರಲ್ಲಿ ನಡೆದಿದ್ದ ಐಸಿ–814 ವಿಮಾನ ಅಪಹರಣ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಭಯೋತ್ಪಾದಕ</p><p>* ಜೆಇಎಂನಲ್ಲಿ ಶಸ್ತ್ರಾಸ್ತ್ರ ತರಬೇತುದಾರ</p><p><strong>4. ಖಲೀದ್ ಅಲಿಯಾಸ್ ಅಬು ಅಕಾಶಾ</strong></p><p>ಸಂಘಟನೆ: ಲಷ್ಕರ್–ಎ–ತಯಬಾ(ಎಲ್ಇಟಿ)</p><p>* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಭಾಗಿ</p><p>* ಅಫ್ಗಾನಿಸ್ತಾನದಿಂದ ಶಸ್ತ್ರಾಸ್ತ್ರ ಸಾಗಣೆ ಮಾಡುತ್ತಿದ್ದ ಖಲೀದ್</p><p>* ಫೈಸಲಾಬಾದ್ನಲ್ಲಿ ನಡೆದ ಖಲೀದ್ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಅಲ್ಲಿನ ಜಿಲ್ಲಾಧಿಕಾರಿ ಭಾಗಿ</p><p><strong>5. ಮೊಹಮ್ಮದ್ ಹಸಾನ್ ಖಾನ್</strong></p><p>ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)</p><p>* ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೆಇಎಂನ ಆಪರೇಷನಲ್ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿಯ ಪುತ್ರ</p><p>* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ</p>.‘ಆಪರೇಷನ್ ಸಿಂಧೂರ’ ಮಾಹಿತಿ ನೀಡಿದ ಸೋಫಿಯಾ ಖುರೇಷಿ ನಮ್ಮ ಬೆಳಗಾವಿಯ ಸೊಸೆ.ಆಪರೇಷನ್ ಸಿಂಧೂರ: ಭಾರತದ ದಾಳಿ ದೃಢಪಡಿಸಿದ ಪಾಕ್– ಷೆಹ್ಬಾಜ್ ಷರೀಫ್ ಗುಟುರು.ಆಪರೇಷನ್ ಸಿಂಧೂರ: ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಮುಜರಾಯಿ ಇಲಾಖೆ ಸೂಚನೆ.ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ: ಸಂಸದ ಜಗದೀಶ ಶೆಟ್ಟರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತ ನಡೆಸಿದ ಆಪರೇಷನ್ ಸಿಂಧೂರ ದಾಳಿಯಲ್ಲಿ ಸತ್ತ 5 ಭಯೋತ್ಪಾದಕರ ಗುರುತು ಪತ್ತೆಯಾಗಿದ್ದು ಅವರ ಅಂತ್ಯಸಂಸ್ಕಾರದಲ್ಲಿ ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.</p><p>ಮೇ 7ರಂದು ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಜೈಷ್–ಎ–ಮೊಹಮ್ಮದ್, ಲಷ್ಕರ್-ಎ-ತಯಬಾಗೆ ಸೇರಿದ ಐವರು ಉಗ್ರರು ಹತರಾಗಿದ್ದಾರೆ. </p>.<h2>ಮೃತಪಟ್ಟ ಭಯೋತ್ಪಾದಕರು...</h2>.<p><strong>1. ಮುದಸ್ಸರ್ ಖಾಡಿಯನ್ ಖಾಸ್ ಅಲಿಯಾಸ್ ಮುದಸ್ಸರ್ ಅಲಿಯಾಸ್ ಅಬು ಜುಂದಾಲ್</strong></p><p>ಸಂಘಟನೆ: ಲಷ್ಕರ್–ಎ–ತಯಬಾ(ಎಲ್ಇಟಿ)</p><p>* ಮುರಿದ್ಕೆಯಲ್ಲಿ ‘ಮರ್ಕಜ್ ತಯಬಾ’ದ ಉಸ್ತುವಾರಿ</p><p>* ಅಂತ್ಯಕ್ರಿಯೆ ವೇಳೆ ಆತನಿಗೆ ಪಾಕಿಸ್ತಾನ ಸೇನೆಯಿಂದ ಸರ್ಕಾರಿ ಗೌರವ ಸಮರ್ಪಣೆ</p><p>* ಜಾಗತಿಕ ಉಗ್ರ ಹಫೀಜ್ ಅಬ್ದುಲ್ ರೌಫ್ ನೇತೃತ್ವದಲ್ಲಿ ಸರ್ಕಾರಿ ಶಾಲೆಯಲ್ಲಿ ಮುದಸ್ಸರ್ ಅಂತಿಮ ನಮನ ಕಾರ್ಯಕ್ರಮ</p><p>* ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮತ್ತು ಪಂಜಾಬ್ ಮುಖ್ಯಮಂತ್ರಿ ಮರಿಯಂ ನವಾಜ್ ಪರವಾಗಿ ಪುಷ್ಪಾರ್ಚನೆ</p><p>* ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಮತ್ತು ಪಂಜಾಬ್ ಐಜಿಪಿ ಭಾಗಿ</p><p><strong>2. ಹಫೀಜ್ ಮೊಹಮ್ಮದ್ ಜಮೀಲ್</strong></p><p>ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)</p><p>* ಜೆಇಎಂ ಸಂಸ್ಥಾಪಕ, ಜಾಗತಿಕ ಉಗ್ರ ಮೌಲಾನಾ ಮಸೂದ್ ಅಜರ್ನ ಹಿರಿಯ ಬಾಮೈದ</p><p>* ಭಹವಾಲ್ಪುರದಲ್ಲಿ ‘ಮರ್ಕಜ್ ತಯಬಾ’ದ ಉಸ್ತುವಾರಿ</p><p>* ಜೆಇಎಂಗೆ ಹಣ ಸಂಗ್ರಹಣೆ ಮಾಡುತ್ತಿದ್ದ ಮತ್ತು ಸಂಘಟನೆಗೆ ಸೇರಲು ಯುವಕರನ್ನು ಪ್ರೇರೇಪಿಸುತ್ತಿದ್ದ</p><p><strong>3. ಮೊಹಮ್ಮದ್ ಯೂಸುಫ್ ಅಜರ್ ಅಲಿಯಾಸ್ ಉಸ್ತಾದ್ ಜಿ ಅಲಿಯಾಸ್ ಮೊಹದ್ ಸಲೀಮ್ ಅಲಿಯಾಸ್ ಘೋಸಿ ಸಾಹಬ್</strong></p><p>ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)</p><p>* ಮೌಲಾನಾ ಮಸೂದ್ ಅಜರ್ನ ಕಿರಿಯ ಬಾಮೈದ</p><p>* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಭಾಗಿ</p><p>* 1999ರಲ್ಲಿ ನಡೆದಿದ್ದ ಐಸಿ–814 ವಿಮಾನ ಅಪಹರಣ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಭಯೋತ್ಪಾದಕ</p><p>* ಜೆಇಎಂನಲ್ಲಿ ಶಸ್ತ್ರಾಸ್ತ್ರ ತರಬೇತುದಾರ</p><p><strong>4. ಖಲೀದ್ ಅಲಿಯಾಸ್ ಅಬು ಅಕಾಶಾ</strong></p><p>ಸಂಘಟನೆ: ಲಷ್ಕರ್–ಎ–ತಯಬಾ(ಎಲ್ಇಟಿ)</p><p>* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಭಾಗಿ</p><p>* ಅಫ್ಗಾನಿಸ್ತಾನದಿಂದ ಶಸ್ತ್ರಾಸ್ತ್ರ ಸಾಗಣೆ ಮಾಡುತ್ತಿದ್ದ ಖಲೀದ್</p><p>* ಫೈಸಲಾಬಾದ್ನಲ್ಲಿ ನಡೆದ ಖಲೀದ್ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಅಲ್ಲಿನ ಜಿಲ್ಲಾಧಿಕಾರಿ ಭಾಗಿ</p><p><strong>5. ಮೊಹಮ್ಮದ್ ಹಸಾನ್ ಖಾನ್</strong></p><p>ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)</p><p>* ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೆಇಎಂನ ಆಪರೇಷನಲ್ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿಯ ಪುತ್ರ</p><p>* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ</p>.‘ಆಪರೇಷನ್ ಸಿಂಧೂರ’ ಮಾಹಿತಿ ನೀಡಿದ ಸೋಫಿಯಾ ಖುರೇಷಿ ನಮ್ಮ ಬೆಳಗಾವಿಯ ಸೊಸೆ.ಆಪರೇಷನ್ ಸಿಂಧೂರ: ಭಾರತದ ದಾಳಿ ದೃಢಪಡಿಸಿದ ಪಾಕ್– ಷೆಹ್ಬಾಜ್ ಷರೀಫ್ ಗುಟುರು.ಆಪರೇಷನ್ ಸಿಂಧೂರ: ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಮುಜರಾಯಿ ಇಲಾಖೆ ಸೂಚನೆ.ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ: ಸಂಸದ ಜಗದೀಶ ಶೆಟ್ಟರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>