<p>ಶ್ರೀನಗರ: ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ(ಐಎಇಎ) ಮೇಲ್ವಿಚಾರಣೆಗೆ ತರಬೇಕು. ಏಕೆಂದರೆ, ಅಂತಹ ದುಷ್ಟ ರಾಷ್ಟ್ರದಲ್ಲಿ ಅವು ಸುರಕ್ಷಿತವಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.</p><p>ಪಾಕಿಸ್ತಾನದ ಪರಮಾಣು ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಠಿಣವಾಗಿ ಶಿಕ್ಷಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಕೆಲವು ದಿನಗಳ ನಂತರ ರಕ್ಷಣಾ ಸಚಿವರ ಈ ಹೇಳಿಕೆ ಬಂದಿದೆ.</p><p>‘ಆಪರೇಷನ್ ಸಿಂಧೂರ’ದ ಬಳಿಕ ಕಣಿವೆ ರಾಜ್ಯಕ್ಕೆ ತಮ್ಮ ಮೊದಲ ಭೇಟಿಯಲ್ಲಿ ಶ್ರೀನಗರಕ್ಕೆ ಬಂದಿಳಿದ ರಾಜನಾಥ್, ಪಾಕಿಸ್ತಾನದ ಪರಮಾಣು ಬೆದರಿಕೆಗೆ ಜಗ್ಗದೇ ಭಾರತ ನಡೆಸಿದ ಕಾರ್ಯಾಚರಣೆಯು ಭಯೋತ್ಪಾದನೆಯ ವಿರುದ್ಧ ಭಾರತದ ದೃಢಸಂಕಲ್ಪವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.</p><p>ಪಾಕಿಸ್ತಾನವು ಬೇಜವಾಬ್ದಾರಿಯಿಂದ ಎಷ್ಟು ಬಾರಿ ಭಾರತಕ್ಕೆ ಪರಮಾಣು ಬೆದರಿಕೆಗಳನ್ನು ಹಾಕಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ. ಇಂದು, ಶ್ರೀನಗರದ ಭೂಮಿಯಿಂದ ಇಡೀ ಪ್ರಪಂಚದ ಮುಂದೆ ಈ ಪ್ರಶ್ನೆಯನ್ನು ಎತ್ತಲು ಬಯಸುತ್ತೇನೆ. ಅಂತಹ ಬೇಜವಾಬ್ದಾರಿ ಮತ್ತು ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? ಎಂದಿದ್ಧಾರೆ.</p><p>ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಐಎಇಎ(ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ) ಮೇಲ್ವಿಚಾರಣೆಗೆ ಒಳಪಡಿಸಬೇಕು ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದ್ದಾರೆ.</p><p>‘ಆಪರೇಷನ್ ಸಿಂಧೂರ’ವನ್ನು ಭಾರತವು ತನ್ನ ಇತಿಹಾಸದಲ್ಲಿ ಭಯೋತ್ಪಾದನೆಯ ವಿರುದ್ಧ ತೆಗೆದುಕೊಂಡ ಅತಿದೊಡ್ಡ ಕ್ರಮ ಎಂದು ಸೈನಿಕರ ಜೊತೆಗಿನ ಸಂವಾದದಲ್ಲಿ ರಾಜನಾಥ್ ಬಣ್ಣಿಸಿದರು.</p><p>ಕಳೆದ 35-40 ವರ್ಷಗಳಿಂದ, ಭಾರತವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಇಂದು ಭಯೋತ್ಪಾದನೆಯ ವಿರುದ್ಧ ಯಾವುದೇ ಹಂತಕ್ಕೂ ಹೋಗಬಹುದು ಎಂದು ಇಡೀ ಜಗತ್ತಿಗೆ ಭಾರತವು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದ್ದಾರೆ.</p><p>ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಭಾರತದ ಹಣೆಗೆ ಗುರಿ ಇಟ್ಟಿದ್ದರು, ನಮ್ಮ ಸಮಾಜದ ಸೌಹಾರ್ದತೆ ಹಾಳುಮಾಡಲು ಯತ್ನಿಸಿದ್ದರು. ನಾವು ಅವರ ಎದೆಗೇ ಹೊಡೆದೆವು ಎಂದಿದ್ದಾರೆ.</p><p>21 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾಕಿಸ್ತಾನ ಭೇಟಿಯನ್ನು ನೆನಪಿಸಿಕೊಂಡ ಸಿಂಗ್, ಇನ್ನು ಮುಂದೆ ತನ್ನ ನೆಲದಲ್ಲಿ ಭಯೋತ್ಪಾದನೆ ಪ್ರೋತ್ಸಾಹಿಸುವುದಿಲ್ಲ ಎಂದು ಪಾಕಿಸ್ತಾನ ನೀಡಿದ್ದ ಭರವಸೆಯನ್ನು ನೆನಪಿಸಿಕೊಂಡರು.</p><p>ಪಾಕಿಸ್ತಾನವು ಭಾರತಕ್ಕೆ ದ್ರೋಹ ಬಗೆದು ಈಗ ಬೆಲೆ ತೆತ್ತಿದೆ ಎಂದಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀನಗರ: ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ(ಐಎಇಎ) ಮೇಲ್ವಿಚಾರಣೆಗೆ ತರಬೇಕು. ಏಕೆಂದರೆ, ಅಂತಹ ದುಷ್ಟ ರಾಷ್ಟ್ರದಲ್ಲಿ ಅವು ಸುರಕ್ಷಿತವಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.</p><p>ಪಾಕಿಸ್ತಾನದ ಪರಮಾಣು ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಠಿಣವಾಗಿ ಶಿಕ್ಷಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಕೆಲವು ದಿನಗಳ ನಂತರ ರಕ್ಷಣಾ ಸಚಿವರ ಈ ಹೇಳಿಕೆ ಬಂದಿದೆ.</p><p>‘ಆಪರೇಷನ್ ಸಿಂಧೂರ’ದ ಬಳಿಕ ಕಣಿವೆ ರಾಜ್ಯಕ್ಕೆ ತಮ್ಮ ಮೊದಲ ಭೇಟಿಯಲ್ಲಿ ಶ್ರೀನಗರಕ್ಕೆ ಬಂದಿಳಿದ ರಾಜನಾಥ್, ಪಾಕಿಸ್ತಾನದ ಪರಮಾಣು ಬೆದರಿಕೆಗೆ ಜಗ್ಗದೇ ಭಾರತ ನಡೆಸಿದ ಕಾರ್ಯಾಚರಣೆಯು ಭಯೋತ್ಪಾದನೆಯ ವಿರುದ್ಧ ಭಾರತದ ದೃಢಸಂಕಲ್ಪವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.</p><p>ಪಾಕಿಸ್ತಾನವು ಬೇಜವಾಬ್ದಾರಿಯಿಂದ ಎಷ್ಟು ಬಾರಿ ಭಾರತಕ್ಕೆ ಪರಮಾಣು ಬೆದರಿಕೆಗಳನ್ನು ಹಾಕಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ. ಇಂದು, ಶ್ರೀನಗರದ ಭೂಮಿಯಿಂದ ಇಡೀ ಪ್ರಪಂಚದ ಮುಂದೆ ಈ ಪ್ರಶ್ನೆಯನ್ನು ಎತ್ತಲು ಬಯಸುತ್ತೇನೆ. ಅಂತಹ ಬೇಜವಾಬ್ದಾರಿ ಮತ್ತು ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? ಎಂದಿದ್ಧಾರೆ.</p><p>ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಐಎಇಎ(ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ) ಮೇಲ್ವಿಚಾರಣೆಗೆ ಒಳಪಡಿಸಬೇಕು ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದ್ದಾರೆ.</p><p>‘ಆಪರೇಷನ್ ಸಿಂಧೂರ’ವನ್ನು ಭಾರತವು ತನ್ನ ಇತಿಹಾಸದಲ್ಲಿ ಭಯೋತ್ಪಾದನೆಯ ವಿರುದ್ಧ ತೆಗೆದುಕೊಂಡ ಅತಿದೊಡ್ಡ ಕ್ರಮ ಎಂದು ಸೈನಿಕರ ಜೊತೆಗಿನ ಸಂವಾದದಲ್ಲಿ ರಾಜನಾಥ್ ಬಣ್ಣಿಸಿದರು.</p><p>ಕಳೆದ 35-40 ವರ್ಷಗಳಿಂದ, ಭಾರತವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಇಂದು ಭಯೋತ್ಪಾದನೆಯ ವಿರುದ್ಧ ಯಾವುದೇ ಹಂತಕ್ಕೂ ಹೋಗಬಹುದು ಎಂದು ಇಡೀ ಜಗತ್ತಿಗೆ ಭಾರತವು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದ್ದಾರೆ.</p><p>ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಭಾರತದ ಹಣೆಗೆ ಗುರಿ ಇಟ್ಟಿದ್ದರು, ನಮ್ಮ ಸಮಾಜದ ಸೌಹಾರ್ದತೆ ಹಾಳುಮಾಡಲು ಯತ್ನಿಸಿದ್ದರು. ನಾವು ಅವರ ಎದೆಗೇ ಹೊಡೆದೆವು ಎಂದಿದ್ದಾರೆ.</p><p>21 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾಕಿಸ್ತಾನ ಭೇಟಿಯನ್ನು ನೆನಪಿಸಿಕೊಂಡ ಸಿಂಗ್, ಇನ್ನು ಮುಂದೆ ತನ್ನ ನೆಲದಲ್ಲಿ ಭಯೋತ್ಪಾದನೆ ಪ್ರೋತ್ಸಾಹಿಸುವುದಿಲ್ಲ ಎಂದು ಪಾಕಿಸ್ತಾನ ನೀಡಿದ್ದ ಭರವಸೆಯನ್ನು ನೆನಪಿಸಿಕೊಂಡರು.</p><p>ಪಾಕಿಸ್ತಾನವು ಭಾರತಕ್ಕೆ ದ್ರೋಹ ಬಗೆದು ಈಗ ಬೆಲೆ ತೆತ್ತಿದೆ ಎಂದಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>