<p><strong>ನವದೆಹಲಿ</strong>: ಬಿಹಾರ ಸಂಸದ ಪಪ್ಪು ಯಾದವ್ ಅವರ ಬಂಧನವು ರಾಜಕೀಯ ಸೇಡಿನ ಕೃತ್ಯವಾಗಿದ್ದು, ಸರ್ಕಾರದಿಂದ ಉತ್ತರದಾಯಿತ್ವ ಬಯಸುವ ಪ್ರತಿಯೊಂದು ಧ್ವನಿಯನ್ನು ಬೆದರಿಸುವ ಮತ್ತು ಅಡಗಿಸುವ ಉದ್ದೇಶದ್ದಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.</p>.<p>ಇತ್ತೀಚೆಗೆ ಪಟ್ನಾದಲ್ಲಿ ನಿಗೂಢವಾಗಿ ಮೃತಪಟ್ಟ ನೀಟ್ ಆಕಾಂಕ್ಷಿಗೆ ನ್ಯಾಯ ಒದಗಿಸಲು ಪಪ್ಪು ಯಾದವ್ ಧ್ವನಿಯೆತ್ತಿದ್ದರು. ಈ ಅನುಮಾನಾಸ್ಪದ ಸಾವು ಮತ್ತು ನಂತರದ ಕ್ರಮಗಳು, ವ್ಯವಸ್ಥೆಯು ಆಳದಲ್ಲಿ ಕೊಳೆತಿರುವುದನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಎಂದು ರಾಹುಲ್ ಗಾಂಧಿ ‘ಎಕ್ಸ್’ ಮಾಡಿದ್ದಾರೆ.</p>.<p>‘ಇದು ರಾಜಕೀಯವಲ್ಲ, ನ್ಯಾಯದ ವಿಚಾರವಾಗಿದೆ. ಬಿಹಾರದ ಹೆಣ್ಣುಮಕ್ಕಳ ಘನತೆ ಮತ್ತು ಸುರಕ್ಷತೆಯ ಪ್ರಶ್ನೆಯಾಗಿದೆ’ ಎಂದು ಅವರು ಹೇಳಿದ್ದಾರೆ. </p>.<p>‘ಸಂತ್ರಸ್ತರ ಕುಟುಂಬವು ನ್ಯಾಯಯುತ ತನಿಖೆಗಾಗಿ ಆಗ್ರಹಿಸಿದಾಗ, ಬಿಜೆಪಿ ಮತ್ತು ಎನ್ಡಿಎ ಅಧಿಕಾರವನ್ನು ಬಳಸಿಕೊಂಡು ಪ್ರಕರಣವನ್ನು ಹಳಿ ತಪ್ಪಿಸುವುದು ಮತ್ತು ಕುಟುಂಬಕ್ಕೆ ಕಿರುಕುಳ ನೀಡುವ ಅದೇ ಹಳೆಯ ನಾಟಕವನ್ನು ಆಡುತ್ತಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. </p>.<p><strong>ಪಪ್ಪು ನ್ಯಾಯಾಂಗ ವಶಕ್ಕೆ</strong> </p><p> ಸಂಸದ ಪಪ್ಪು ಯಾದವ್ ಅವರನ್ನು ಪಟ್ನಾ ನ್ಯಾಯಾಲಯವು ಶನಿವಾರ ಎರಡು ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬಿಹಾರ ಸಂಸದ ಪಪ್ಪು ಯಾದವ್ ಅವರ ಬಂಧನವು ರಾಜಕೀಯ ಸೇಡಿನ ಕೃತ್ಯವಾಗಿದ್ದು, ಸರ್ಕಾರದಿಂದ ಉತ್ತರದಾಯಿತ್ವ ಬಯಸುವ ಪ್ರತಿಯೊಂದು ಧ್ವನಿಯನ್ನು ಬೆದರಿಸುವ ಮತ್ತು ಅಡಗಿಸುವ ಉದ್ದೇಶದ್ದಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.</p>.<p>ಇತ್ತೀಚೆಗೆ ಪಟ್ನಾದಲ್ಲಿ ನಿಗೂಢವಾಗಿ ಮೃತಪಟ್ಟ ನೀಟ್ ಆಕಾಂಕ್ಷಿಗೆ ನ್ಯಾಯ ಒದಗಿಸಲು ಪಪ್ಪು ಯಾದವ್ ಧ್ವನಿಯೆತ್ತಿದ್ದರು. ಈ ಅನುಮಾನಾಸ್ಪದ ಸಾವು ಮತ್ತು ನಂತರದ ಕ್ರಮಗಳು, ವ್ಯವಸ್ಥೆಯು ಆಳದಲ್ಲಿ ಕೊಳೆತಿರುವುದನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಎಂದು ರಾಹುಲ್ ಗಾಂಧಿ ‘ಎಕ್ಸ್’ ಮಾಡಿದ್ದಾರೆ.</p>.<p>‘ಇದು ರಾಜಕೀಯವಲ್ಲ, ನ್ಯಾಯದ ವಿಚಾರವಾಗಿದೆ. ಬಿಹಾರದ ಹೆಣ್ಣುಮಕ್ಕಳ ಘನತೆ ಮತ್ತು ಸುರಕ್ಷತೆಯ ಪ್ರಶ್ನೆಯಾಗಿದೆ’ ಎಂದು ಅವರು ಹೇಳಿದ್ದಾರೆ. </p>.<p>‘ಸಂತ್ರಸ್ತರ ಕುಟುಂಬವು ನ್ಯಾಯಯುತ ತನಿಖೆಗಾಗಿ ಆಗ್ರಹಿಸಿದಾಗ, ಬಿಜೆಪಿ ಮತ್ತು ಎನ್ಡಿಎ ಅಧಿಕಾರವನ್ನು ಬಳಸಿಕೊಂಡು ಪ್ರಕರಣವನ್ನು ಹಳಿ ತಪ್ಪಿಸುವುದು ಮತ್ತು ಕುಟುಂಬಕ್ಕೆ ಕಿರುಕುಳ ನೀಡುವ ಅದೇ ಹಳೆಯ ನಾಟಕವನ್ನು ಆಡುತ್ತಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. </p>.<p><strong>ಪಪ್ಪು ನ್ಯಾಯಾಂಗ ವಶಕ್ಕೆ</strong> </p><p> ಸಂಸದ ಪಪ್ಪು ಯಾದವ್ ಅವರನ್ನು ಪಟ್ನಾ ನ್ಯಾಯಾಲಯವು ಶನಿವಾರ ಎರಡು ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>