<p><strong>ನವದೆಹಲಿ</strong>: ನ್ಯಾಯಾಲಯಗಳ ವಿಚಾರಗಳಲ್ಲಿ ಜನರಿಗೆ ಅದೆಷ್ಟು ಸಾಕಾಗಿಹೋಗಿರುತ್ತದೆ ಅಂದರೆ, ಅವರಿಗೆ ಪ್ರಕರಣಗಳು ಇತ್ಯರ್ಥವಾದರೆ ಸಾಕು ಎಂಬಂತಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಹೇಳಿದ್ದಾರೆ.</p>.<p>ವ್ಯಾಜ್ಯಗಳ ಇತ್ಯರ್ಥಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಲೋಕ ಅದಾಲತ್ಗಳನ್ನು ಬಳಸಿಕೊಳ್ಳುವುದರ ಮಹತ್ವದ ಬಗ್ಗೆ ಹೇಳುವಾಗ ಸಿಜೆಐ ಚಂದ್ರಚೂಡ್ ಅವರು ಹೀಗೆ ಹೇಳಿದ್ದಾರೆ.</p>.<p>ಕೋರ್ಟ್ಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುತ್ತದೆ, ರಾಜಿ ಸಂಧಾನದ ಮೂಲಕ ಬಗೆಹರಿಸಲಾಗುತ್ತದೆ. ವಾದಿಗಳು ಹಾಗೂ ಪ್ರತಿವಾದಿಗಳು ಪರಸ್ಪರ ಒಪ್ಪಿ ಇತ್ಯರ್ಥಪಡಿಸಿದ ಪ್ರಕರಣಗಳ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ.</p>.<p>‘ಕೋರ್ಟ್ ಪ್ರಕ್ರಿಯೆಗಳೇ ಶಿಕ್ಷೆಯಂತೆ ಆಗಿರುವುದು ನ್ಯಾಯಮೂರ್ತಿಗಳಾದ ನಮಗೆ ಕಳವಳ ಮೂಡಿಸುವ ಸಂಗತಿ’ ಎಂದು ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ನಲ್ಲಿ ನಡೆದ ಲೋಕ ಅದಾಲತ್ ಸಪ್ತಾಹದ ಕೊನೆಯಲ್ಲಿ ಹೇಳಿದ್ದಾರೆ.</p>.<p>ಪ್ರತಿ ಹಂತದಲ್ಲಿಯೂ ಲೋಕ ಅದಾಲತ್ ಆರಂಭಿಸುವುದಕ್ಕೆ ವಕೀಲರು ಹಾಗೂ ನ್ಯಾಯಮೂರ್ತಿಗಳಿಂದ ತಮಗೆ ಭಾರಿ ಸಹಕಾರ ದೊರೆಯಿತು ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.</p>.<p>ವಿಶೇಷ ಲೋಕ ಅದಾಲತ್ ಕಾರ್ಯಕ್ರಮವು ಆರಂಭದಲ್ಲಿ ಏಳು ನ್ಯಾಯಪೀಠಗಳೊಂದಿಗೆ ಆರಂಭವಾಯಿತು. ಆದರೆ ಗುರುವಾರದ ಹೊತ್ತಿಗೆ 13 ಪೀಠಗಳು ಅದಾಲತ್ನಲ್ಲಿ ಭಾಗಿಯಾಗಿದ್ದವು ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ನ್ಯಾಯಾಲಯಗಳ ವಿಚಾರಗಳಲ್ಲಿ ಜನರಿಗೆ ಅದೆಷ್ಟು ಸಾಕಾಗಿಹೋಗಿರುತ್ತದೆ ಅಂದರೆ, ಅವರಿಗೆ ಪ್ರಕರಣಗಳು ಇತ್ಯರ್ಥವಾದರೆ ಸಾಕು ಎಂಬಂತಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಹೇಳಿದ್ದಾರೆ.</p>.<p>ವ್ಯಾಜ್ಯಗಳ ಇತ್ಯರ್ಥಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಲೋಕ ಅದಾಲತ್ಗಳನ್ನು ಬಳಸಿಕೊಳ್ಳುವುದರ ಮಹತ್ವದ ಬಗ್ಗೆ ಹೇಳುವಾಗ ಸಿಜೆಐ ಚಂದ್ರಚೂಡ್ ಅವರು ಹೀಗೆ ಹೇಳಿದ್ದಾರೆ.</p>.<p>ಕೋರ್ಟ್ಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುತ್ತದೆ, ರಾಜಿ ಸಂಧಾನದ ಮೂಲಕ ಬಗೆಹರಿಸಲಾಗುತ್ತದೆ. ವಾದಿಗಳು ಹಾಗೂ ಪ್ರತಿವಾದಿಗಳು ಪರಸ್ಪರ ಒಪ್ಪಿ ಇತ್ಯರ್ಥಪಡಿಸಿದ ಪ್ರಕರಣಗಳ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ.</p>.<p>‘ಕೋರ್ಟ್ ಪ್ರಕ್ರಿಯೆಗಳೇ ಶಿಕ್ಷೆಯಂತೆ ಆಗಿರುವುದು ನ್ಯಾಯಮೂರ್ತಿಗಳಾದ ನಮಗೆ ಕಳವಳ ಮೂಡಿಸುವ ಸಂಗತಿ’ ಎಂದು ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ನಲ್ಲಿ ನಡೆದ ಲೋಕ ಅದಾಲತ್ ಸಪ್ತಾಹದ ಕೊನೆಯಲ್ಲಿ ಹೇಳಿದ್ದಾರೆ.</p>.<p>ಪ್ರತಿ ಹಂತದಲ್ಲಿಯೂ ಲೋಕ ಅದಾಲತ್ ಆರಂಭಿಸುವುದಕ್ಕೆ ವಕೀಲರು ಹಾಗೂ ನ್ಯಾಯಮೂರ್ತಿಗಳಿಂದ ತಮಗೆ ಭಾರಿ ಸಹಕಾರ ದೊರೆಯಿತು ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.</p>.<p>ವಿಶೇಷ ಲೋಕ ಅದಾಲತ್ ಕಾರ್ಯಕ್ರಮವು ಆರಂಭದಲ್ಲಿ ಏಳು ನ್ಯಾಯಪೀಠಗಳೊಂದಿಗೆ ಆರಂಭವಾಯಿತು. ಆದರೆ ಗುರುವಾರದ ಹೊತ್ತಿಗೆ 13 ಪೀಠಗಳು ಅದಾಲತ್ನಲ್ಲಿ ಭಾಗಿಯಾಗಿದ್ದವು ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>