<p><strong>ಹೈದರಾಬಾದ್:</strong> ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರನ್ನು ವಿಶೇಷ ತನಿಖಾ ತಂಡವು (ಎಸ್ಐಟಿ) ಭಾನುವಾರ ವಿಚಾರಣೆಗೊಳಪಡಿಸಿತು. </p><p>ಹಿಂದಿನ ಬಿಆರ್ಎಸ್ ಅವಧಿಯಲ್ಲಿನ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್ಎಸ್ ಮುಖ್ಯಸ್ಥರ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳ ತಂಡವು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿತು. </p>.ಫೋನ್ ಪೇ ಮೂಲಕ ₹10 ಸಾವಿರ ಲಂಚ ಪಡೆದಿದ್ದ ಸತೀಶ ರಾಠೋಡ: ಎಫ್ಡಿಎ ‘ಲೋಕಾ’ ಬಲೆಗೆ.ಪ. ಬಂಗಾಳ ರಾಜ್ಯಪಾಲರಿಗೆ ಜೀವ ಬೆದರಿಕೆ: ಇಮೇಲ್ನಲ್ಲಿ ಫೋನ್ ನಂಬರ್ ಹಾಕಿದ ಆರೋಪಿ. <p>ಬಿಆರ್ಎಸ್ ಪಕ್ಷದ ಬೆಂಬಲಿಗರು ನಿವಾಸದ ಹೊರಗಡೆ ಜಮಾಯಿಸಿದ್ದರು. ಮಾಜಿ ಸಿಎಂ ನಿವಾಸದ ಸಮೀಪ ಭಾರಿ ಭದ್ರತೆ ಏರ್ಪಡಿಸಲಾಗಿತ್ತು. </p><p>ಎಸ್ಐಟಿ ವಿಚಾರಣೆಯನ್ನು ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ ಸಜ್ಜನರ್ ಖಚಿತಪಡಿಸಿದ್ದಾರೆ. </p><p>ಈ ಕುರಿತು ಪ್ರತಿಕ್ರಿಯಿಸಿರುವ ಕೆಆರ್ಎಸ್ ಮಗ ಕೆ.ಟಿ. ರಾಮರಾವ್, 'ಇದೊಂದು ಸುಳ್ಳು ಪ್ರಕರಣ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಲಾಗುತ್ತಿದೆ. ಕೆಸಿಆರ್ ಬಳಿ ಏನು ಕೇಳಿದ್ದಾರೆಂದು ತಿಳಿದಿಲ್ಲ' ಎಂದು ಹೇಳಿದ್ದಾರೆ. </p><p>'ಬಿಆರ್ಎಸ್ ಪಕ್ಷಕ್ಕೆ ಮಸಿ ಬಳಿಯಲು ಯತ್ನಿಸಲಾಗುತ್ತಿದೆ. ತನಿಖೆಗೆ ಕೆಸಿಆರ್ ಸಂಪೂರ್ಣವಾಗಿ ಸಹಕರಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ. </p><p>ಬಿಆರ್ಎಸ್ ಆಡಳಿತ ಅವಧಿಯಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಪತ್ರಕರ್ತರು ಸೇರಿದಂತೆ ಗಣ್ಯವ್ಯಕ್ತಿಗಳ ಫೋನ್ ಕದ್ದಾಲಿಕೆ ನಡೆದಿದೆ ಎಂಬ ಆರೋಪದ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರನ್ನು ವಿಶೇಷ ತನಿಖಾ ತಂಡವು (ಎಸ್ಐಟಿ) ಭಾನುವಾರ ವಿಚಾರಣೆಗೊಳಪಡಿಸಿತು. </p><p>ಹಿಂದಿನ ಬಿಆರ್ಎಸ್ ಅವಧಿಯಲ್ಲಿನ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್ಎಸ್ ಮುಖ್ಯಸ್ಥರ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳ ತಂಡವು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿತು. </p>.ಫೋನ್ ಪೇ ಮೂಲಕ ₹10 ಸಾವಿರ ಲಂಚ ಪಡೆದಿದ್ದ ಸತೀಶ ರಾಠೋಡ: ಎಫ್ಡಿಎ ‘ಲೋಕಾ’ ಬಲೆಗೆ.ಪ. ಬಂಗಾಳ ರಾಜ್ಯಪಾಲರಿಗೆ ಜೀವ ಬೆದರಿಕೆ: ಇಮೇಲ್ನಲ್ಲಿ ಫೋನ್ ನಂಬರ್ ಹಾಕಿದ ಆರೋಪಿ. <p>ಬಿಆರ್ಎಸ್ ಪಕ್ಷದ ಬೆಂಬಲಿಗರು ನಿವಾಸದ ಹೊರಗಡೆ ಜಮಾಯಿಸಿದ್ದರು. ಮಾಜಿ ಸಿಎಂ ನಿವಾಸದ ಸಮೀಪ ಭಾರಿ ಭದ್ರತೆ ಏರ್ಪಡಿಸಲಾಗಿತ್ತು. </p><p>ಎಸ್ಐಟಿ ವಿಚಾರಣೆಯನ್ನು ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ ಸಜ್ಜನರ್ ಖಚಿತಪಡಿಸಿದ್ದಾರೆ. </p><p>ಈ ಕುರಿತು ಪ್ರತಿಕ್ರಿಯಿಸಿರುವ ಕೆಆರ್ಎಸ್ ಮಗ ಕೆ.ಟಿ. ರಾಮರಾವ್, 'ಇದೊಂದು ಸುಳ್ಳು ಪ್ರಕರಣ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಲಾಗುತ್ತಿದೆ. ಕೆಸಿಆರ್ ಬಳಿ ಏನು ಕೇಳಿದ್ದಾರೆಂದು ತಿಳಿದಿಲ್ಲ' ಎಂದು ಹೇಳಿದ್ದಾರೆ. </p><p>'ಬಿಆರ್ಎಸ್ ಪಕ್ಷಕ್ಕೆ ಮಸಿ ಬಳಿಯಲು ಯತ್ನಿಸಲಾಗುತ್ತಿದೆ. ತನಿಖೆಗೆ ಕೆಸಿಆರ್ ಸಂಪೂರ್ಣವಾಗಿ ಸಹಕರಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ. </p><p>ಬಿಆರ್ಎಸ್ ಆಡಳಿತ ಅವಧಿಯಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಪತ್ರಕರ್ತರು ಸೇರಿದಂತೆ ಗಣ್ಯವ್ಯಕ್ತಿಗಳ ಫೋನ್ ಕದ್ದಾಲಿಕೆ ನಡೆದಿದೆ ಎಂಬ ಆರೋಪದ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>