ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಹೆಸರಾಂತ 50 ಕ್ಕೂ ಹೆಚ್ಚು ಯೂಟ್ಯೂಬರ್‌ಗಳೊಂದಿಗೆ ಸಂವಾದ ನಡೆಸಿದ ಸಚಿವ ಗೋಯಲ್‌

Published 25 ಜೂನ್ 2023, 11:12 IST
Last Updated 25 ಜೂನ್ 2023, 11:12 IST
ಅಕ್ಷರ ಗಾತ್ರ

ನವದೆಹಲಿ: ಕರಕುಶಲ ವಸ್ತುಗಳನ್ನು ಜನಪ್ರಿಯಗೊಳಿಸುವುದು, ಸಿರಿಧಾನ್ಯಗಳ ಪ್ರಯೋಜನಗಳು ಮತ್ತು ಗ್ರಾಹಕರ ಜಾಗೃತಿಯಂತಹ ವಿವಿಧ ವಿಷಯಗಳ ಕುರಿತು ದೇಶದ 50 ಕ್ಕೂ ಹೆಚ್ಚು ಜನಪ್ರಿಯ ಯೂಟ್ಯೂಬರ್‌ಗಳೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಜೂನ್ 23 ರಂದು ಸಂವಾದ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಚಿವ ಪಿಯೂಷ್‌ ಗೋಯಲ್‌ ಅವರು ಭಾರತದಲ್ಲಿನ ಉನ್ನತ–ಕಾರ್ಯನಿರ್ವಹಣೆಯ ಯೂಟ್ಯೂಬರ್‌ಗಳ ಗುಂಪಿನೊಂದಿಗೆ ‘ಸಂಪರ್ಕ ಸೆ ಸಂವಾದ್‌’ ಎಂಬ ಆಸಕ್ತಿದಾಯಕ ಸಂವಾದವನ್ನು ನಡೆಸಿದರು’ ಎಂದು ಅಧಿಕಾರಿಗಳು ತಿಳಿಸಿದರು.

ಗ್ರಾಹಕರ ಜಾಗೃತಿ ಮತ್ತು ರಕ್ಷಣೆ (ನಕಲಿ ವೆಬ್‌ಸೈಟ್‌ಗಳಿಂದ), ಸೈಬರ್‌ ಭದ್ರತೆ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಮಾರ್ಗಗಳು, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಜನಪ್ರಿಯಗೊಳಿಸುವುದು ಮತ್ತು ಸಿರಿಧಾನ್ಯಗಳ ಪ್ರಯೋಜನಗಳ ಕುರಿತಂತೆ ಹೆಚ್ಚಿನ ವಿಷಯವನ್ನು ರಚಿಸಿರುವುದರ ಕುರಿತು ಸಂವಾದದಲ್ಲಿ ಚರ್ಚಿಸಲಾಯಿತು.

ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಸೇರಿದಂತೆ ಐದು ನಿರ್ಣಯಗಳನ್ನು ಮತ್ತಷ್ಟು ಪ್ರಚಾರ ಮಾಡಲು ವಿಷಯ ರಚನೆಕಾರರನ್ನು ಸಚಿವರು ಆಹ್ವಾನಿಸಿದ್ದರು.

ಸರ್ಕಾರಿ ಕಾರ್ಯಕ್ರಮಗಳು ಮತ್ತು ನೀತಿಗಳ ಕುರಿತು ಯೂಟ್ಯೂಬರ್‌ಗಳು ಪ್ರೇಕ್ಷಕರಿಗೆ ಮಾಹಿತಿ ನೀಡಲು ತಮ್ಮ ಚಾನಲ್‌ಗಳ ಮೂಲಕ ವಿಷಯಗಳನ್ನು ಹೊರತರಲು ಉತ್ಸುಕತೆಯನ್ನು ವ್ಯಕ್ತಪಡಿಸಿದ್ದು, ತಪ್ಪು ಮಾಹಿತಿಗಳನ್ನು ಎದುರಿಸುವ ಸತ್ಯ ಪರಿಶೀಲಕರಾಗಿ ಕೆಲಸ ಮಾಡುತ್ತಾರೆ.

ಚರ್ಚೆಯಲ್ಲಿ ವಿವೇಕ್‌ ಬಿಂದ್ರಾ. ಗೌರವ್‌ ಚೌಧರಿ (ತಾಂತ್ರಿಕ ಗುರೂಜಿ), ವಿರಾಜ್‌ ಶೇತ್‌ (ಸಹ–ಸಂಸ್ಥಾಪಕ ಮಾಂಕ್‌ ಎಂಟರ್‌ಟೈನ್‌ಮೆಂಟ್‌), ಗಣೇಶ್‌ ಪ್ರಸಾದ್‌ (ಥಿಂಕ್‌ ಸ್ಕೂಲ್‌), ಶ್ಲೋಕ್‌ ಶ್ರೀವಾಸ್ತವ (ಟೆಕ್‌ ಬರ್ನರ್‌), ಪ್ರಫುಲ್‌ ಬಿಲ್ಲೂರ್ (ಎಂಬಿಎ ಚಾಯ್‌ ವಾಲಾ), ಮತ್ತು ಅನುಷ್ಕಾ ರಾಥೋಡ್‌ (ಅನುಷ್ಕಾ ರಾಥೋಡ್‌ ಹಣಕಾಸು) ಸೇರಿದಂತೆ ಇತರ ಪ್ರಸಿದ್ಧ ಯೂಟ್ಯೂಬರ್‌ಗಳು ಭಾಗವಹಿಸಿದ್ದರು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT