ಸ್ವಾತಂತ್ರ್ಯ ಹೋರಾಟಕ್ಕೆ ಮಾತೃಭೂಮಿ ಕೊಡುಗೆ
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ 'ಮಾತೃಭೂಮಿ' ಪತ್ರಿಕೆ ನೀಡಿದ ಕೊಡುಗೆಗಳ ಬಗ್ಗೆ ಪ್ರಧಾನಿ ಮೋದಿ ಅವರು ಮೆಲುಕು ಹಾಕಿದರು. ಮಹಾತ್ಮ ಗಾಂಧೀಜಿ ಅವರ ಆದರ್ಶಗಳಿಂದ ಪ್ರೇರಣೆಗೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಲು ಮಾತೃಭೂಮಿ ಪತ್ರಿಕೆ ಹುಟ್ಟಿಕೊಂಡಿತು. ಅಲ್ಲದೆ ಕೆ.ಪಿ ಕೇಶವ ಮೆನನ್, ಕೆ.ಎ. ದಾಮೋದರ ಮೆನನ್, ಕೇರಳದ ಗಾಂಧಿ ಕೆ. ಕೇಳಪ್ಪನ್ ಹಾಗೂ ಕುರೂ ನೀಲಕಂಠನ್ ನಂಬೂದಿರಿಪಾಡ್ ಸೇರಿದಂತೆ ಇತರರ ಹೆಸರುಗಳನ್ನು ಪ್ರಸ್ತಾಪಿಸಿದರು.