ನವದೆಹಲಿ: ವಿನಾಯಕ ದಾಮೋದರ್ ಸಾವರ್ಕರ್ ಅವರ ಜನ್ಮ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
‘ತಾಯಿ ಭಾರತಿಯ ವೀರ ಪುತ್ರ ವೀರ ಸಾವರ್ಕರ್ ಅವರಿಗೆ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
मां भारती के कर्मठ सपूत वीर सावरकर को उनकी जयंती पर आदरपूर्ण श्रद्धांजलि। pic.twitter.com/AHk7L6qBib
— Narendra Modi (@narendramodi) May 28, 2022
‘ರಾಷ್ಟ್ರೀಯತೆ, ಸ್ವಾತಂತ್ರ್ಯದ ಪ್ರತೀಕ ವೀರ ಸಾವರ್ಕರ್ ಅವರ ಜನ್ಮದಿನದಂದು ಅವರಿಗೆ ನಮನಗಳು. ದೇಹದ ಪ್ರತಿ ಕಣದಲ್ಲೂ ದೇಶಪ್ರೇಮ ಉರಿಸಿ ದೇಶಕ್ಕಾಗಿ ಬದುಕಬಹುದು ಎಂಬುದಕ್ಕೆ ಸಾವರ್ಕರ್ ಅವರ ಜೀವನ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಅವರ ತ್ಯಾಗದ ಜೀವನ ನಮಗೆ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡುತ್ತಲೇ ಇರುತ್ತದೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
‘ಸಾವರ್ಕರ್ ಅವರು ಒಂದೇ ಜೀವನದಲ್ಲಿ ಎರಡು ಬಾರಿ ಜೀವಾವಧಿ ಶಿಕ್ಷೆಗೆ ಗುರಿಯಾದರು ಹಾಗೂ ಬಂದೀಖಾನೆಯ ಅಮಾನವೀಯ ಚಿತ್ರಹಿಂಸೆಗಳನ್ನು ಅನುಭವಿಸಿದರು. ಆದರೆ, ತಾಯಿ ಭಾರತಿಯನ್ನು ವೈಭವದ ಉತ್ತುಂಗಕ್ಕೆ ಕರೆದೊಯ್ಯುವ ಅವರ ಸಂಕಲ್ಪವನ್ನು ತಡೆಯಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯ ಚಳವಳಿಗೆ ಅವರು ನೀಡಿದ ಅಪ್ರತಿಮ ಕೊಡುಗೆ ಮತ್ತು ಸಮಾಜದಿಂದ ಅಸ್ಪೃಶ್ಯತೆ ತೊಡೆದುಹಾಕಲು ಅವರು ಮಾಡಿದ ಪ್ರಯತ್ನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಮತ್ತೊಂದು ಟ್ವೀಟ್ನಲ್ಲಿ ಅಮಿತ್ ಶಾ ಉಲ್ಲೇಖಿಸಿದ್ದಾರೆ.
वीर सावरकर जी को एक ही जीवन में मिली दो उम्रकैद व काल कोठरी की अमानवीय यातनाएं भी माँ भारती को परम वैभव पर ले जाने के उनके संकल्प को डिगा नहीं पाई।
— Amit Shah (@AmitShah) May 28, 2022
स्वतंत्रता आंदोलन में उनके अद्वितीय योगदान और समाज से अस्पृश्यता को दूर करने के उनके प्रयासों को कभी भुलाया नहीं जा सकता।
‘ವೀರ ಸಾವರ್ಕರ್ ಅವರು ಧೈರ್ಯ, ಸಂಕಲ್ಪ ಮತ್ತು ತ್ಯಾಗದ ಪ್ರತಿರೂಪ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ವಹಿಸಿದ ಪರಿಣಾಮಕಾರಿ ಪಾತ್ರ ಸ್ಫೂರ್ತಿದಾಯಕವಾಗಿದೆ. ಅವರ ಇಡೀ ಜೀವನ ದೇಶ ಮತ್ತು ಸಮಾಜ ಸೇವೆಗೆ ಮುಡಿಪಾಗಿತ್ತು. ಅಂತಹ ವೀರ ಸಾವರ್ಕರ್ ಜನ್ಮದಿನದಂದು ನಾನು ಅವರಿಗೆ ನಮಸ್ಕರಿಸುತ್ತೇನೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
वीर सावरकर साहस, संकल्प और त्याग की प्रतिमूर्ति थे। भारत के स्वाधीनता संग्राम में उन्होंने जो प्रभावी भूमिका निभाई है, वह प्रेरणास्पद है। उनका पूरा जीवन देश और समाज की सेवा में समर्पित रहा। ऐसे वीर सावरकर को उनकी जयंती पर मैं श्रद्धापूर्वक नमन करता हूँ।
— Rajnath Singh (@rajnathsingh) May 28, 2022
‘ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಪ್ರಖರ ವಾಗ್ಮಿ, ಕವಿ, ದಿವಂಗತ ವಿನಾಯಕ ದಾಮೋದರ್ ಸಾವರ್ಕರ್ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ವೀರ ಸಾವರ್ಕರ್ ಅವರ ಹೋರಾಟದ ಬದುಕು ಭಾರತೀಯರಿಗೆ ಸ್ಫೂರ್ತಿಯ ಸೆಲೆಯಾಗಿದೆ’ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಪ್ರಖರ ವಾಗ್ಮಿ, ಕವಿ, ದಿವಂಗತ ವಿನಾಯಕ ದಾಮೋದರ್ ಸಾವರ್ಕರ್ ರವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು.
— Basavaraj S Bommai (@BSBommai) May 28, 2022
ವೀರ ಸಾವರ್ಕರ್ ಅವರ ಹೋರಾಟದ ಬದುಕು ಭಾರತೀಯರಿಗೆ ಸ್ಫೂರ್ತಿಯ ಸೆಲೆಯಾಗಿದೆ.#VeerSavarkar pic.twitter.com/DsdoAa5Euh
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.