ಪ್ರಯಾಗರಾಜ್ (ಉತ್ತರ ಪ್ರದೇಶ): ಪಾಕ್ ಆಕ್ರಮಿತ ಕಾಶ್ಮೀರ ( ಪಿಒಕೆ ) ಭಾರತಕ್ಕೆ ಸೇರಿದ್ದು , ನಾವು ಅದನ್ನು ವಾಪಸ್ ಪಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ನೀರಜ್ ತ್ರಿಪಾಠಿ ಪರ ಮತ ಯಾಚಿಸಲು ಪ್ರಯಾಗರಾಜ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಭಾರತ ಪಾಕಿಸ್ತಾನವನ್ನು ಗೌರವಿಸಬೇಕು ಎಂದು ಫಾರೂಕ್ ಅಬ್ದುಲ್ಲಾ ಮತ್ತು ಮಣಿಶಂಕರ್ ಅಯ್ಯರ್ ಹೇಳುತ್ತಾರೆ. ಆದರೆ ಪಿಓಕೆ ನಮಗೆ ಸೇರಿದ್ದು ಎಂದು ಈ ಪವಿತ್ರ ಭೂಮಿ ಪ್ರಯಾಗರಾಜ್ನಲ್ಲಿ ನಿಂತು ನಾನು ಹೇಳುತ್ತೇನೆ‘ ಎಂದಿದ್ದಾರೆ.