<p><strong>ಹೈದರಾಬಾದ್:</strong> ದೇವರ ವಿಗ್ರಹ ಅಪವಿತ್ರಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), ಬಜರಂಗ ದಳ ಮತ್ತು ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಶನಿವಾರ ಲಾಠಿ ಪ್ರಹಾರ ನಡೆಸಿದರು.</p>.<p>ಎಂಜಿನಿಯರಿಂಗ್ ಪದವೀಧರ, ಮಹಾರಾಷ್ಟ್ರದ ಸಲ್ಮಾನ್ ಸಲೀಂ ಠಾಕೂರ್ ಅಲಿಯಾಸ್ ಸಲ್ಮಾನ್ ಎನ್ನುವವನು ಸಿಕಂದರಾಬಾದ್ನ ಮುತ್ಯಾಲಮ್ಮ ದೇವಸ್ಥಾನದ ಪ್ರಮುಖ ವಿಗ್ರಹವನ್ನು ಅಪವಿತ್ರಗೊಳಿಸಿದ್ದ. ಇದನ್ನು ಖಂಡಿಸಿ ಸ್ಥಳೀಯರು, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.</p>.<p>ದೇವಸ್ಥಾನಗಳ ವಿಚಾರದಲ್ಲಿ ತೆಲಂಗಾಣ ಸರ್ಕಾರ ತೋರುತ್ತಿರುವ ‘ಧೋರಣೆ’ಯನ್ನು ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆಗೆ ವಿಎಚ್ಪಿ ಶನಿವಾರ ಕರೆ ನೀಡಿತ್ತು. ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದೇವಸ್ಥಾನದ ಎದುರು ಜಮಾಯಿಸಿದ್ದರು. ಅವರು ಕೇಸರಿ ಧ್ವಜ ಹಿಡಿದಿದ್ದರು.</p>.<p>‘ಜೈ ಶ್ರೀರಾಮ್’, ‘ನ್ಯಾಯ ಬೇಕು’ ಎಂಬ ಘೋಷಣೆಗಳನ್ನು ಅವರು ಕೂಗಿದರು. ಪ್ರತಿಭಟನಕಾರರು ಪೊಲೀಸರತ್ತ ನೀರಿನ ಪೊಟ್ಟಣಗಳನ್ನು ಎಸೆದಿದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಲಾಠಿ ಪ್ರಹಾರದ ಕಾರಣದಿಂದಾಗಿ ಕೆಲವರಿಗೆ ಗಾಯಗಳಾಗಿವೆ.</p>.<p>ಲಾಠಿ ಪ್ರಹಾರವನ್ನು ಬಿಜೆಪಿಯು ಖಂಡಿಸುವುದಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ದೇವರ ವಿಗ್ರಹ ಅಪವಿತ್ರಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), ಬಜರಂಗ ದಳ ಮತ್ತು ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಶನಿವಾರ ಲಾಠಿ ಪ್ರಹಾರ ನಡೆಸಿದರು.</p>.<p>ಎಂಜಿನಿಯರಿಂಗ್ ಪದವೀಧರ, ಮಹಾರಾಷ್ಟ್ರದ ಸಲ್ಮಾನ್ ಸಲೀಂ ಠಾಕೂರ್ ಅಲಿಯಾಸ್ ಸಲ್ಮಾನ್ ಎನ್ನುವವನು ಸಿಕಂದರಾಬಾದ್ನ ಮುತ್ಯಾಲಮ್ಮ ದೇವಸ್ಥಾನದ ಪ್ರಮುಖ ವಿಗ್ರಹವನ್ನು ಅಪವಿತ್ರಗೊಳಿಸಿದ್ದ. ಇದನ್ನು ಖಂಡಿಸಿ ಸ್ಥಳೀಯರು, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.</p>.<p>ದೇವಸ್ಥಾನಗಳ ವಿಚಾರದಲ್ಲಿ ತೆಲಂಗಾಣ ಸರ್ಕಾರ ತೋರುತ್ತಿರುವ ‘ಧೋರಣೆ’ಯನ್ನು ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆಗೆ ವಿಎಚ್ಪಿ ಶನಿವಾರ ಕರೆ ನೀಡಿತ್ತು. ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದೇವಸ್ಥಾನದ ಎದುರು ಜಮಾಯಿಸಿದ್ದರು. ಅವರು ಕೇಸರಿ ಧ್ವಜ ಹಿಡಿದಿದ್ದರು.</p>.<p>‘ಜೈ ಶ್ರೀರಾಮ್’, ‘ನ್ಯಾಯ ಬೇಕು’ ಎಂಬ ಘೋಷಣೆಗಳನ್ನು ಅವರು ಕೂಗಿದರು. ಪ್ರತಿಭಟನಕಾರರು ಪೊಲೀಸರತ್ತ ನೀರಿನ ಪೊಟ್ಟಣಗಳನ್ನು ಎಸೆದಿದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಲಾಠಿ ಪ್ರಹಾರದ ಕಾರಣದಿಂದಾಗಿ ಕೆಲವರಿಗೆ ಗಾಯಗಳಾಗಿವೆ.</p>.<p>ಲಾಠಿ ಪ್ರಹಾರವನ್ನು ಬಿಜೆಪಿಯು ಖಂಡಿಸುವುದಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>