<p><strong>ಮುಂಬೈ</strong>: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಮುಂಬೈನ ಸೀಟು ಹಂಚಿಕೆ ವಿಚಾರವು ಮಹಾ ವಿಕಾಸ ಆಘಾಡಿ ಮೈತ್ರಿಕೂಟಕ್ಕೆ ಕಗ್ಗಂಟಾಗುವ ಸಾಧ್ಯತೆಗಳಿವೆ.</p>.<p>ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿ ನಡುವೆ ಸೀಟು ಹಂಚಿಕೆ ಬಗೆಗಿನ ಮಾತುಕತೆಯು ಪ್ರಗತಿಯಲ್ಲಿದೆ.</p>.<p>ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸ್ಥಾನಗಳಲ್ಲಿ ಮುಂಬೈ 36 ಸ್ಥಾನಗಳನ್ನು ಹೊಂದಿದೆ.</p>.<p>36 ಸ್ಥಾನಗಳಲ್ಲಿ, ಶಿವಸೇನಾವು(ಉದ್ಧವ್ ಬಣ) 20ರಿಂದ 25 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದೆ. ಕಾಂಗ್ರೆಸ್ 15ರಿಂದ 20 ಸೀಟುಗಳನ್ನು ಕೇಳುತ್ತಿದೆ. ಎನ್ಸಿಪಿಯು(ಶರದ್ ಬಣ) ಏಳರಿಂದ ಎಂಟು ಸ್ಥಾನಗಳ ನಿರೀಕ್ಷೆಯಲ್ಲಿದೆ. ಜೊತೆಗೆ ಸಮಾಜವಾದಿ ಸೇರಿದಂತೆ ಮೈತ್ರಿಕೂಟದ ಇತರ ಪಕ್ಷಗಳಿಗೂ ಕೆಲ ಸ್ಥಾನಗಳನ್ನು ನೀಡಬೇಕಾದ ಅನಿವಾರ್ಯ ಇದೆ.</p>.<p>‘ಸೀಟು ಹಂಚಿಕೆ ಮಾತುಕತೆಯು 99 ಶೇಕಡ ಪೂರ್ಣಗೊಂಡಿದೆ’ ಎಂದು ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವುತ್ ಹೇಳಿಕೊಂಡಿದ್ದರು ಆದರೆ ಕಾಂಗ್ರೆಸ್ ಮತ್ತು ಎನ್ಸಿಪಿ(ಶರದ್ ಬಣ) ಅದನ್ನು ತಿರಸ್ಕರಿಸಿವೆ.</p>.<p>ಮೂರೂ ಪಕ್ಷಗಳು ಮುಂಬೈನಲ್ಲಿ ಸರಣಿ ಚುನಾವಣಾ ಸಭೆಗಳನ್ನು ನಡೆಸುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಮುಂಬೈನ ಸೀಟು ಹಂಚಿಕೆ ವಿಚಾರವು ಮಹಾ ವಿಕಾಸ ಆಘಾಡಿ ಮೈತ್ರಿಕೂಟಕ್ಕೆ ಕಗ್ಗಂಟಾಗುವ ಸಾಧ್ಯತೆಗಳಿವೆ.</p>.<p>ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿ ನಡುವೆ ಸೀಟು ಹಂಚಿಕೆ ಬಗೆಗಿನ ಮಾತುಕತೆಯು ಪ್ರಗತಿಯಲ್ಲಿದೆ.</p>.<p>ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸ್ಥಾನಗಳಲ್ಲಿ ಮುಂಬೈ 36 ಸ್ಥಾನಗಳನ್ನು ಹೊಂದಿದೆ.</p>.<p>36 ಸ್ಥಾನಗಳಲ್ಲಿ, ಶಿವಸೇನಾವು(ಉದ್ಧವ್ ಬಣ) 20ರಿಂದ 25 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದೆ. ಕಾಂಗ್ರೆಸ್ 15ರಿಂದ 20 ಸೀಟುಗಳನ್ನು ಕೇಳುತ್ತಿದೆ. ಎನ್ಸಿಪಿಯು(ಶರದ್ ಬಣ) ಏಳರಿಂದ ಎಂಟು ಸ್ಥಾನಗಳ ನಿರೀಕ್ಷೆಯಲ್ಲಿದೆ. ಜೊತೆಗೆ ಸಮಾಜವಾದಿ ಸೇರಿದಂತೆ ಮೈತ್ರಿಕೂಟದ ಇತರ ಪಕ್ಷಗಳಿಗೂ ಕೆಲ ಸ್ಥಾನಗಳನ್ನು ನೀಡಬೇಕಾದ ಅನಿವಾರ್ಯ ಇದೆ.</p>.<p>‘ಸೀಟು ಹಂಚಿಕೆ ಮಾತುಕತೆಯು 99 ಶೇಕಡ ಪೂರ್ಣಗೊಂಡಿದೆ’ ಎಂದು ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವುತ್ ಹೇಳಿಕೊಂಡಿದ್ದರು ಆದರೆ ಕಾಂಗ್ರೆಸ್ ಮತ್ತು ಎನ್ಸಿಪಿ(ಶರದ್ ಬಣ) ಅದನ್ನು ತಿರಸ್ಕರಿಸಿವೆ.</p>.<p>ಮೂರೂ ಪಕ್ಷಗಳು ಮುಂಬೈನಲ್ಲಿ ಸರಣಿ ಚುನಾವಣಾ ಸಭೆಗಳನ್ನು ನಡೆಸುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>