ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಮಗು ಮಣ್ಣು ತಿನ್ನುತ್ತಿರಲಿಲ್ಲ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

Last Updated 4 ಡಿಸೆಂಬರ್ 2019, 18:37 IST
ಅಕ್ಷರ ಗಾತ್ರ

ತಿರುವನಂತಪುರ: ‘ಹಸಿವನ್ನು ತಣಿಸುವ ಸಲುವಾಗಿ ಏಳು ವರ್ಷದ ಮಗುವೊಂದು ಮಣ್ಣು ತಿನ್ನುತ್ತಿತ್ತು’ ಎಂಬ ವರದಿಯನ್ನು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಅಲ್ಲಗಳೆದಿದೆ.

‘ಮಗು ಮಣ್ಣನ್ನು ತಿನ್ನುತ್ತಿರಲಿಲ್ಲ; ಬದಲಿಗೆ ಮಣ್ಣಿನಲ್ಲಿ ಆಟವಾಡುತ್ತಿತ್ತು’ ಎಂದು ಆಯೋಗದ ಅಧ್ಯಕ್ಷ ಪಿ.ಸುರೇಶ್‌ ಬುಧವಾರ ಹೇಳಿದ್ದಾರೆ. ಮಗುವಿನ ತಾಯಿ, ಬಂಧುಗಳು ಹಾಗೂ ನೆರೆಹೊರೆಯವರ ಹೇಳಿಕೆಗಳನ್ನೂ ಅವರು ಸಂಗ್ರಹಿಸಿದ್ದಾರೆ.

‘ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಈ ವಿಷಯವನ್ನು ತಪ್ಪಾಗಿ ಅರ್ಥೈಸಿದೆ’ ಎಂದೂ ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್‌.ಪಿ. ದೀಪಕ್‌, ‘ಮಹಿಳೆ ಮತ್ತು ಮಕ್ಕಳ ದುಸ್ಥಿತಿ ಬಗ್ಗೆ ಕರೆ ಬಂದ ನಂತರ ಸ್ಥಳಕ್ಕೆಭೇಟಿ ನೀಡಿದ್ದ ಮಂಡಳಿ ಅಧಿಕಾರಿಗಳು, ಮಕ್ಕಳು ಕರುಣಾಜನಕ ಸ್ಥಿತಿಯಲ್ಲಿರುವುದನ್ನು ಕಂಡಿದ್ದಾರೆ. ಈ ಕುಟುಂಬಕ್ಕೆ ಸಮಾಜ ಕಲ್ಯಾಣ ಯೋಜನೆಗಳಡಿ ಯಾವಸೌಲಭ್ಯವೂ ಸಿಗದ ಬಗ್ಗೆ ಖಾತರಿಪಡಿಸಿಕೊಂಡಿದ್ದಾರೆ’ ಎಂದು ಹೇಳುವ ಮೂಲಕ ಮಂಡಳಿಯ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT