ನವದೆಹಲಿ: ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾಗಿ ನಡೆದಿದೆ. ಈ ಮೂಲಕ ‘ಭವಿಷ್ಯದಲ್ಲಿ ಯಾರೂ ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ಸೃಷ್ಟಿಸಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ( ಆರ್ಎಸ್ಎಸ್) ಮಹಿಳಾ ಘಟಕ ತಿಳಿಸಿದೆ.
‘ಹಿಂದೂ ಸಮಾಜದ ಸಂಘಟಿತ ಪ್ರಯತ್ನಗಳಿಂದಾಗಿ 500 ವರ್ಷಗಳ ಇತಿಹಾಸಕ್ಕೆ ಅಂಟಿದ್ದ ಕಳಂಕವನ್ನು ಅಳಿಸಿ ಹಾಕಿದೆ. ಇದು ಹೊಸ ಯುಗ ಪ್ರಾರಂಭದ ದಿಕ್ಸೂಚಿಯಂತೆ ಕಾಣುತ್ತಿದೆ. ಭಾರತದ ಆಂತರಿಕ ಪ್ರಜ್ಞೆಯು ಈಗ ಜಾಗೃತಗೊಂಡಿದೆ ಎಂದು ತೋರುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.