ಮುಖ್ಯಮಂತ್ರಿ ಜೊತೆ ಸೋನಂ ಲಾಮಾ, ಅರುಣ್ ಕುಮಾರ್ ಉಪ್ರೇಟಿ, ಸಮದುಪ್ ಲೆಪ್ಚಾ, ಭೀಮ್ ಹಂಗ್ ಲಿಂಬೂ, ಭೋಜರಾಜ ರಾಯ್, ಜಿ.ಟಿ.ಧುನ್ಗೆಲ್, ಪುರನ್ ಕುಮಾರ್ ಗುರುಂಗ್, ಪಿಂಟ್ಸೊ ನಮಗ್ಯಾಲ್ ಲೆಪ್ಚಾ, ನರ್ ಬಹಾದ್ದೂರ್ ದಹಲ್, ರಾಜು ಬಸ್ನೇಟ್, ಟಿರ್ಸಿಂಗ್ ತೆಂಡುಪ್ ಭುಟಿಯಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹಿಂದಿನ ಸಂಪುಟದಲ್ಲಿದ್ದ ನಾಲ್ವರು ಸಚಿವರನ್ನು ಮಾತ್ರ ಈ ಸಂಪುಟದಲ್ಲಿ ಮತ್ತೆ ಸೇರಿಸಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಪತ್ನಿ ಕೃಷ್ಣ ಕುಮಾರಿ ರಾಯ್ ಸೇರಿದಂತೆ ನಾಲ್ವರು ಮಹಿಳೆಯರು ಎಸ್ಕೆಎಂನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿಲ್ಲ.