‘ಒಂದು ರೀತಿಯಲ್ಲಿ, ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವು ಯಾವಾಗಲೂ ನಮಗೆ ಅದೃಷ್ಟವಾಗಿದೆ. ಇಂದು ನೀವು (ವಿರೋಧ ಪಕ್ಷಗಳು) 2024ರ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮತ್ತು ಬಿಜೆಪಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಅಭೂತಪೂರ್ವ ಜಯದೊಂದಿಗೆ ಮರಳಿ ಬರಲು ನಿರ್ಧರಿಸಿರುವುದನ್ನು ನಾನು ನೋಡುತ್ತಿದ್ದೇನೆ’ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
'ದೇವರು ತುಂಬಾ ಕರುಣಾಮಯಿ. ಯಾವುದಾದರೂ ಮಾಧ್ಯಮದ ಮೂಲಕ ಮಾತನಾಡುತ್ತಾನೆ.ಪ್ರತಿಪಕ್ಷಗಳು ಈ ನಿರ್ಣಯವನ್ನು ತಂದಿರುವುದು ದೇವರ ಆಶೀರ್ವಾದ ಎಂದು ನಾನು ನಂಬುತ್ತೇನೆ. ನಾನು 2018ರಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ಹೇಳಿದ್ದೆ. ಇದು ಸದನದಲ್ಲಿ ನಮ್ಮ ಪರೀಕ್ಷೆ ಅಲ್ಲ, ಬದಲಾಗಿ ಅವರ ಪರೀಕ್ಷೆ ಎಂದಿದ್ದೆ. ಪರಿಣಾಮವಾಗಿ ಅವರು ಕಳೆದ ಚುನಾವಣೆಯಲ್ಲಿ ಸೋತರು’ ಎಂದು ಮೋದಿ ಹೇಳಿದ್ದಾರೆ.