ಮುಂಬೈ (ಪಿಟಿಐ): ‘ಇಸ್ರೇಲ್ ವಿರುದ್ಧ ಪ್ಯಾಲೆಸ್ಟೀನಿಯನ್ನರ ಸ್ವಾತಂತ್ರ್ಯ ಹೋರಾಟದ ಕುರಿತಂತೆ ಐಐಟಿಯಲ್ಲಿ ಈಚೆಗೆ ನಡೆದ ಉಪನ್ಯಾಸದಲ್ಲಿ ಭಯೋತ್ಪಾದನೆಯನ್ನು ವಿಜೃಂಭಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರೊಫೆಸರ್ ಹಾಗೂ ಅತಿಥಿ ಭಾಷಣಕಾರನನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ವಿವೇಕ್ ವಿಚಾರ್ ಮಂಚ್ ನೇತೃತ್ವದಲ್ಲಿ ಶನಿವಾರ ಐಐಟಿ ಬಾಂಬೆ ಕ್ಯಾಂಪಸ್ನ ಹೊರಭಾಗದಲ್ಲಿ ಪ್ರತಿಭಟನೆ ನಡೆಯಿತು.