ಚಂಡೀಗಢ: ರೈತರು ಮತ್ತು ಹರಿಯಾಣದ ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆಯಲ್ಲಿ ಮೃತಪಟ್ಟ ರೈತ ಶುಭಕರನ್ ಸಿಂಗ್ ಅವರಿಗೆ ಪಂಜಾಬ್ ವಿಧಾನಸಭೆಯಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇತ್ತೀಚೆಗೆ ನಿಧನರಾದ ಮಾಜಿ ಉಪ ಸಭಾಪತಿ ಮತ್ತು ಮಾಜಿ ಸಚಿವ ಬಲದೇವ್ ರಾಜ್ ಚಾವ್ಲಾ, ಮಾಜಿ ಶಾಸಕರಾದ ರಂಜಿತ್ ಸಿಂಗ್ ತಲ್ವಂಡಿ, ಪ್ರಕಾಶ್ ಸಿಂಗ್ ಗಹರ್ದಿವಾಲಾ ಮತ್ತು ಸೋಹನ್ ಸಿಂಗ್ ಅವರಿಗೆ ಸದನದ ಸದಸ್ಯರು ನಮನ ಸಲ್ಲಿಸಿದರು.
ಅಲ್ಲದೇ ಅಗ್ನಿವೀರ್ ಅಜಯ್ ಕುಮಾರ್ ಮತ್ತು ಸೇನಾ ಯೋಧ ಗುರುಪ್ರೀತ್ ಸಿಂಗ್ ಅವರನ್ನೂ ಸ್ಮರಿಸಲಾಯಿತು. ಸದನದಲ್ಲಿ ಅಗಲಿದವರ ಸ್ಮರಣೆಗಾಗಿ 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.