ಜಲಂಧರ್: ವಾಹನ ದಟ್ಟಣೆ ನಿಯಂತ್ರಣಕ್ಕೆ ಮತ್ತು ರಸ್ತೆ ಅಪಘಾತಗಳ ಪರಿಶೀಲನೆಗಾಗಿಯೇ ಮೀಸಲಾದ ‘ರಸ್ತೆ ಸುರಕ್ಷಾ ದಳ’ಕ್ಕೆ (ಎಸ್ಎಸ್ಎಫ್) ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಪ್ರತಿ 30 ಕಿ.ಮೀ.ಗೆ ಎಸ್ಎಸ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.
‘ಪಂಜಾಬ್ನಲ್ಲಿ ಪ್ರತಿದಿನ ರಸ್ತೆ ಅಪಘಾತದಲ್ಲಿ 17–18 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ದತ್ತಾಂಶಗಳು ಹೇಳುತ್ತಿವೆ. ಹಲವು ಮಂದಿ ಪ್ರಸಿದ್ಧ ವ್ಯಕ್ತಿಗಳನ್ನೂ ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದೇವೆ’ ಎಂದಿದ್ದಾರೆ.
ಹೆಚ್ಚಿನ ಅಪಘಾತಗಳು ಹೆದ್ದಾರಿಗಳಲ್ಲಿ ನಡೆಯುತ್ತಿದ್ದು, ಇಂತಹ ರಸ್ತೆಗಳಲ್ಲಿ ಪೊಲೀಸರ ಸಾನಿಧ್ಯವಿದ್ದರೆ ಸ್ವಲ್ಪಮಟ್ಟಿಗಾದರೂ ಅಪಘಾತಗಳು ಕಡಿಮೆಯಾಗಬಹುದು. ಈ ನಿಟ್ಟಿನಲ್ಲಿ ಎಸ್ಎಸ್ಎಫ್ ಅನ್ನು ರಚಷಿಸಲಾಗಿದೆ ಎಂದರು.