<p><strong>ಚಂಡೀಗಢ</strong>: ಆಕಸ್ಮಿಕವಾಗಿ ಪಾಕಿಸ್ತಾನ ಗಡಿಯೊಳಗೆ ಪ್ರವೇಶಿಸಿರುವ ಪಂಜಾಬ್ನ ಫಿರೋಜ್ಪುರದ ರೈತನನ್ನು ಸುರಕ್ಷಿತವಾಗಿ ಕರೆತರುವಂತೆ ಆತನ ಕುಟುಂಬಸ್ಥರು ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.</p>.<p>ಪಾಕಿಸ್ತಾನ ಗಡಿಯಲ್ಲಿರುವ ತಮ್ಮ ಜಮೀನಿಗೆ ಅಮೃತ್ಪಾಲ್ ಸಿಂಗ್ ಅವರು ಜೂನ್ 21ರಂದು ಕೃಷಿ ಕೆಲಸಕ್ಕೆಂದು ಹೋಗಿದ್ದರು. ಗಡಿಭಾಗದಿಂದ ಸಂಜೆ 5 ಗಂಟೆಯೊಳಗೆ ವಾಪಾಸ್ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ.</p>.<p>ಪಾಕಿಸ್ತಾನದ ಕಡೆಗಿರುವ ಮಾನವ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದ ಗಡಿ ಭದ್ರತಾ ಪಡೆಯು ( ಬಿಎಸ್ಎಫ್) ಈ ಬಗ್ಗೆ ಪಾಕಿಸ್ತಾನಿ ರೇಂಜರ್ಗಳೊಂದಿಗೆ ಮೂರರಿಂದ ನಾಲ್ಕು ಸಭೆಗಳನ್ನು ನಡೆಸಿತ್ತು. ಭಾರತೀಯನನ್ನು ವಶಕ್ಕೆ ಪಡೆದಿರುವುದನ್ನು ಆರಂಭದಲ್ಲಿ ಪಾಕಿಸ್ತಾನ ಒಪ್ಪಿಕೊಂಡಿರಲಿಲ್ಲ. ಅಮೃತ್ಪಾಲ್ ಸ್ಥಳೀಯ ಪೊಲೀಸರ ವಶದಲ್ಲಿರುವ ಬಗ್ಗೆ ಜೂನ್ 27ರಂದು ಪಾಕಿಸ್ತಾನ ದೃಢಪಡಿಸಿತ್ತು.</p>.<p>ಅಂತರರಾಷ್ಟ್ರೀಯ ಗಡಿ ಮತ್ತು ಮುಳ್ಳುತಂತಿಯ ಬೇಲಿಗಳ ನಡುವಿನ ಕೃಷಿ ಜಮೀನಿಗೆ ತೆರಳಲು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಮಾತ್ರ ರೈತರಿಗೆ ಅವಕಾಶ ನೀಡಲಾಗುತ್ತದೆ. ಈ ಬಗ್ಗೆ ಬಿಎಸ್ಎಫ್ ನಿಗಾವಹಿಸಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ</strong>: ಆಕಸ್ಮಿಕವಾಗಿ ಪಾಕಿಸ್ತಾನ ಗಡಿಯೊಳಗೆ ಪ್ರವೇಶಿಸಿರುವ ಪಂಜಾಬ್ನ ಫಿರೋಜ್ಪುರದ ರೈತನನ್ನು ಸುರಕ್ಷಿತವಾಗಿ ಕರೆತರುವಂತೆ ಆತನ ಕುಟುಂಬಸ್ಥರು ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.</p>.<p>ಪಾಕಿಸ್ತಾನ ಗಡಿಯಲ್ಲಿರುವ ತಮ್ಮ ಜಮೀನಿಗೆ ಅಮೃತ್ಪಾಲ್ ಸಿಂಗ್ ಅವರು ಜೂನ್ 21ರಂದು ಕೃಷಿ ಕೆಲಸಕ್ಕೆಂದು ಹೋಗಿದ್ದರು. ಗಡಿಭಾಗದಿಂದ ಸಂಜೆ 5 ಗಂಟೆಯೊಳಗೆ ವಾಪಾಸ್ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ.</p>.<p>ಪಾಕಿಸ್ತಾನದ ಕಡೆಗಿರುವ ಮಾನವ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದ ಗಡಿ ಭದ್ರತಾ ಪಡೆಯು ( ಬಿಎಸ್ಎಫ್) ಈ ಬಗ್ಗೆ ಪಾಕಿಸ್ತಾನಿ ರೇಂಜರ್ಗಳೊಂದಿಗೆ ಮೂರರಿಂದ ನಾಲ್ಕು ಸಭೆಗಳನ್ನು ನಡೆಸಿತ್ತು. ಭಾರತೀಯನನ್ನು ವಶಕ್ಕೆ ಪಡೆದಿರುವುದನ್ನು ಆರಂಭದಲ್ಲಿ ಪಾಕಿಸ್ತಾನ ಒಪ್ಪಿಕೊಂಡಿರಲಿಲ್ಲ. ಅಮೃತ್ಪಾಲ್ ಸ್ಥಳೀಯ ಪೊಲೀಸರ ವಶದಲ್ಲಿರುವ ಬಗ್ಗೆ ಜೂನ್ 27ರಂದು ಪಾಕಿಸ್ತಾನ ದೃಢಪಡಿಸಿತ್ತು.</p>.<p>ಅಂತರರಾಷ್ಟ್ರೀಯ ಗಡಿ ಮತ್ತು ಮುಳ್ಳುತಂತಿಯ ಬೇಲಿಗಳ ನಡುವಿನ ಕೃಷಿ ಜಮೀನಿಗೆ ತೆರಳಲು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಮಾತ್ರ ರೈತರಿಗೆ ಅವಕಾಶ ನೀಡಲಾಗುತ್ತದೆ. ಈ ಬಗ್ಗೆ ಬಿಎಸ್ಎಫ್ ನಿಗಾವಹಿಸಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>