ಈ ಬಗ್ಗೆ ಟ್ವೀಟ್ ಮಾಡಿರುವ ಅವರು,‘ರೈತರ ಆಂದೋಲನವು ಇವತ್ತಿಗೆ ಆರು ತಿಂಗಳು ಪೂರೈಸಿದೆ. ರೈತರ ಬೇಡಿಕೆಗಳಂತೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆನಾನು ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ. ನನ್ನ ಮನೆಯ ಮೇಲೆ ಕಪ್ಪು ಧ್ವಜ ಹಾರಿಸಿದ್ದೇನೆ. ಅಕಾಲಿದಳದ ಇತರ ನಾಯಕರು ಕೂಡ ಕಪ್ಪು ಧ್ವಜ ಹಾರಿಸಿದ್ದಾರೆ’ ಎಂದರು.