‘ತನಿಖಾ ವಿಭಾಗದ ಡಿಸಿಪಿ ಹರ್ಮಿತ್ ಸಿಂಗ್ ಹುಂದಾನ್ ಎಸ್ಐಟಿ ಮುಖ್ಯಸ್ಥರಾಗಿದ್ದಾರೆ. ಒಳಚರಂಡಿ ಮಾರ್ಗಗಳಿಗೆ ಯಾವುದಾದರು ಕಾರ್ಖಾನೆಗಳು ರಾಸಾಯನಿಕ ತ್ಯಾಜ್ಯಗಳನ್ನು ಸುರಿದಿವೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ. ಇದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರ ಕೋರಿದ್ದೇವೆ. ಮಂಡಳಿ ಸ್ಪಂದಿಸದಿದ್ದರೆ ಅವರ ವಿರುದ್ಧವೂ ಕ್ರಮವಹಿಸಲಾಗುವುದು’ ಎಂದು ಲುಧಿಯಾನ ನಗರದ ಪೊಲೀಸ್ ಆಯುಕ್ತ ಮನ್ದೀಪ್ ಸಿಂಗ್ ಸಿಧು ಹೇಳಿದ್ದಾರೆ.