ಚಂಡೀಗಢ: ತರಣ್ಜಿತ್ ಸಿಂಗ್ ಸಂಧು, ಚರಣ್ಜಿತ್ ಸಿಂಗ್ ಚನ್ನಿ, ಸುಖ್ಜಿಂದರ್ ರಾಂಧವಾ, ರವನೀತ್ ಸಿಂಗ್ ಬಿಟ್ಟೂ, ಗುರ್ಮೀತ್ ಸಿಂಗ್ ಖುದಿಯಾನ್ ಮೊದಲಾದ ಪಂಜಾಬ್ನ ಪ್ರಮುಖ ರಾಜಕಾರಣಿಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರುವ ಮೂಲಭೂತವಾದಿ ಧರ್ಮಪ್ರಚಾರಕ ಅಮೃತ್ಪಾಲ್ ಸಿಂಗ್ ಅವರು ಖಡೂರ್ ಸಾಹಿಬ್ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು.
ಹೋಶಿಯಾರ್ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಎಪಿಯ ರಾಜಕುಮಾರ್ ಚಬ್ಬೇವಾಲ್ ಮತ್ತು ಕಾಂಗ್ರೆಸ್ನ ಯಾಮಿನಿ ಗೋಮರ್ ಅವರೂ ಉಮೇದುವಾರಿಕೆ ಸಲ್ಲಿಸಿದರು.