<p><strong>ಪ್ರಯಾಗ್ರಾಜ್:</strong> ಮಾಘ ಮಾಸದ ‘ಪುಷ್ಯ ಪೂರ್ಣಿಮೆ’ಯಂದು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪುಣ್ಯಸ್ನಾನ ಮಾಡಿದರು.</p>.<p>ಮೈಕೊರೆವ ಚಳಿಯನ್ನು ಲೆಕ್ಕಿಸದೆ ಶನಿವಾರ ನಸುಕಿನಲ್ಲೇ ವೃದ್ಧರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಗಂಗಾ–ಯಮುನಾ–ಸರಸ್ವತಿಯ ಸಂಗಮದಲ್ಲಿ ಮಿಂದೆದ್ದರು.</p>.<p>ಮಾಘ ಮೇಳವು ಶನಿವಾರದಿಂದ ಆರಂಭಗೊಂಡಿದ್ದು, ಫೆ. 15ರವರೆಗೆ ನಡೆಯಲಿದೆ. ಮೊದಲ ದಿನವೇ ಅನೇಕ ಸಾಧು–ಸಂತರು, ಸ್ವಾಮೀಜಿಗಳು ತಮ್ಮ ಭಕ್ತರೊಂದಿಗೆ ಪುಣ್ಯಸ್ನಾನ ಮಾಡಿದರು. ಶನಿವಾರ ಬೆಳಿಗ್ಗೆ ಒಂಬತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಪುಣ್ಯಸ್ನಾನಕ್ಕಾಗಿ ಬರುವ ಭಕ್ತರಿಗಾಗಿ ಮಾಘ ಮೇಳದಲ್ಲಿ 10 ಸಾವಿರ ಚದರಡಿ ಪ್ರದೇಶದಲ್ಲಿ ಹತ್ತು ಸ್ನಾನಘಟ್ಟ ನಿರ್ಮಿಸಲಾಗಿದೆ. ಒಂಬತ್ತು ತೆಪ್ಪದ ಸೇತುವೆಗಳನ್ನು ನಿರ್ಮಿಸಲಾಗಿದೆ’ ಎಂದು ಪ್ರಯಾಗ್ರಾಜ್ ವಿಭಾಗೀಯ ಆಯುಕ್ತೆ ಸೌಮ್ಯಾ ಅಗರ್ವಾಲ್ ಹೇಳಿದ್ದಾರೆ.</p>.<p>‘ಮಾಘಮೇಳ ಪ್ರದೇಶದಲ್ಲಿ ಯಾತ್ರಾರ್ಥಿಗಳಿಗಾಗಿ ಪ್ರತ್ಯೇಕ ಪಟ್ಟಣ ಸ್ಥಾಪಿಸಲಾಗಿದೆ. ಈ ಪಟ್ಟಣಕ್ಕೆ 'ಪ್ರಯಾಗ್ವಾಲ್' ಎಂದು ಹೆಸರಿಡಲಾಗಿದ್ದು, ಇದು ನಾಗವಾಸುಕಿ ದೇಗುಲದ ಎದುರಿದೆ’ ಎಂದು ಎಡಿಎಂ (ಮಾಘ ಮೇಳ) ದಯಾನಂದ ಪ್ರಸಾದ್ ತಿಳಿಸಿದ್ದಾರೆ.</p>.<p>‘ಅಂದಾಜು ಐದು ಲಕ್ಷ ಭಕ್ತರು ಶನಿವಾರದಿಂದಲೇ ‘ಕಲ್ಪವಾಸ’ ಆರಂಭಿಸಿದರು. ಇವರೆಲ್ಲರೂ ಒಂದು ತಿಂಗಳು ತ್ರಿವೇಣಿ ಸಂಗಮದ ತಟದಲ್ಲೇ ಬೀಡುಬಿಟ್ಟು ಧಾರ್ಮಿಕ ಕೈಂಕರ್ಯ ಕೈಗೊಳ್ಳಲಿದ್ದಾರೆ’ ಎಂದು ತ್ರಿವೇಣಿ ಸಂಗಮ ಆರತಿ ಸೇವಾ ಸಮಿತಿಯ ಅಧ್ಯಕ್ಷ ಆಚಾರ್ಯ ರಾಜೇಂದ್ರ ಮಿಶ್ರಾ ತಿಳಿಸಿದ್ದಾರೆ.</p>.<p>ಮಾಘ ಮಾಸದಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದರಿಂದ ಮೋಕ್ಷ ದೊರೆಯಲಿದೆ ಎಂಬ ನಂಬಿಕೆಯು ಭಕ್ತ ಸಮೂಹದಲ್ಲಿ ಬೇರೂರಿದೆ. ಅದರಂತೆ ಅಸಂಖ್ಯಾತ ಭಕ್ತರು ನಿತ್ಯವೂ ಎರಡು ಬಾರಿ ನದಿಯಲ್ಲಿ ಮಿಂದೇಳುತ್ತಾರೆ. ಒಪ್ಪೊತ್ತಿನ ಊಟಕ್ಕೆ ಸೀಮಿತವಾಗಿ, ದಿನವಿಡೀ ದೇವರ ಧ್ಯಾನದಲ್ಲೇ ಸಮಯ ಕಳೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರಯಾಗ್ರಾಜ್:</strong> ಮಾಘ ಮಾಸದ ‘ಪುಷ್ಯ ಪೂರ್ಣಿಮೆ’ಯಂದು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪುಣ್ಯಸ್ನಾನ ಮಾಡಿದರು.</p>.<p>ಮೈಕೊರೆವ ಚಳಿಯನ್ನು ಲೆಕ್ಕಿಸದೆ ಶನಿವಾರ ನಸುಕಿನಲ್ಲೇ ವೃದ್ಧರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಗಂಗಾ–ಯಮುನಾ–ಸರಸ್ವತಿಯ ಸಂಗಮದಲ್ಲಿ ಮಿಂದೆದ್ದರು.</p>.<p>ಮಾಘ ಮೇಳವು ಶನಿವಾರದಿಂದ ಆರಂಭಗೊಂಡಿದ್ದು, ಫೆ. 15ರವರೆಗೆ ನಡೆಯಲಿದೆ. ಮೊದಲ ದಿನವೇ ಅನೇಕ ಸಾಧು–ಸಂತರು, ಸ್ವಾಮೀಜಿಗಳು ತಮ್ಮ ಭಕ್ತರೊಂದಿಗೆ ಪುಣ್ಯಸ್ನಾನ ಮಾಡಿದರು. ಶನಿವಾರ ಬೆಳಿಗ್ಗೆ ಒಂಬತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಪುಣ್ಯಸ್ನಾನಕ್ಕಾಗಿ ಬರುವ ಭಕ್ತರಿಗಾಗಿ ಮಾಘ ಮೇಳದಲ್ಲಿ 10 ಸಾವಿರ ಚದರಡಿ ಪ್ರದೇಶದಲ್ಲಿ ಹತ್ತು ಸ್ನಾನಘಟ್ಟ ನಿರ್ಮಿಸಲಾಗಿದೆ. ಒಂಬತ್ತು ತೆಪ್ಪದ ಸೇತುವೆಗಳನ್ನು ನಿರ್ಮಿಸಲಾಗಿದೆ’ ಎಂದು ಪ್ರಯಾಗ್ರಾಜ್ ವಿಭಾಗೀಯ ಆಯುಕ್ತೆ ಸೌಮ್ಯಾ ಅಗರ್ವಾಲ್ ಹೇಳಿದ್ದಾರೆ.</p>.<p>‘ಮಾಘಮೇಳ ಪ್ರದೇಶದಲ್ಲಿ ಯಾತ್ರಾರ್ಥಿಗಳಿಗಾಗಿ ಪ್ರತ್ಯೇಕ ಪಟ್ಟಣ ಸ್ಥಾಪಿಸಲಾಗಿದೆ. ಈ ಪಟ್ಟಣಕ್ಕೆ 'ಪ್ರಯಾಗ್ವಾಲ್' ಎಂದು ಹೆಸರಿಡಲಾಗಿದ್ದು, ಇದು ನಾಗವಾಸುಕಿ ದೇಗುಲದ ಎದುರಿದೆ’ ಎಂದು ಎಡಿಎಂ (ಮಾಘ ಮೇಳ) ದಯಾನಂದ ಪ್ರಸಾದ್ ತಿಳಿಸಿದ್ದಾರೆ.</p>.<p>‘ಅಂದಾಜು ಐದು ಲಕ್ಷ ಭಕ್ತರು ಶನಿವಾರದಿಂದಲೇ ‘ಕಲ್ಪವಾಸ’ ಆರಂಭಿಸಿದರು. ಇವರೆಲ್ಲರೂ ಒಂದು ತಿಂಗಳು ತ್ರಿವೇಣಿ ಸಂಗಮದ ತಟದಲ್ಲೇ ಬೀಡುಬಿಟ್ಟು ಧಾರ್ಮಿಕ ಕೈಂಕರ್ಯ ಕೈಗೊಳ್ಳಲಿದ್ದಾರೆ’ ಎಂದು ತ್ರಿವೇಣಿ ಸಂಗಮ ಆರತಿ ಸೇವಾ ಸಮಿತಿಯ ಅಧ್ಯಕ್ಷ ಆಚಾರ್ಯ ರಾಜೇಂದ್ರ ಮಿಶ್ರಾ ತಿಳಿಸಿದ್ದಾರೆ.</p>.<p>ಮಾಘ ಮಾಸದಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದರಿಂದ ಮೋಕ್ಷ ದೊರೆಯಲಿದೆ ಎಂಬ ನಂಬಿಕೆಯು ಭಕ್ತ ಸಮೂಹದಲ್ಲಿ ಬೇರೂರಿದೆ. ಅದರಂತೆ ಅಸಂಖ್ಯಾತ ಭಕ್ತರು ನಿತ್ಯವೂ ಎರಡು ಬಾರಿ ನದಿಯಲ್ಲಿ ಮಿಂದೇಳುತ್ತಾರೆ. ಒಪ್ಪೊತ್ತಿನ ಊಟಕ್ಕೆ ಸೀಮಿತವಾಗಿ, ದಿನವಿಡೀ ದೇವರ ಧ್ಯಾನದಲ್ಲೇ ಸಮಯ ಕಳೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>