<p><strong>ರಾಮಗಢ</strong>: ಜಾರ್ಖಂಡ್ನ ರಾಮಗಢ ಜಿಲ್ಲೆಯಲ್ಲಿ ನಾಲ್ಕನೇ ದಿನದ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಮಗಢ ಕಲ್ಲಿದ್ದಲು ಪ್ರದೇಶಕ್ಕೆ ಭೇಟಿ ನೀಡಿ ಕಾರ್ಮಿಕರ ಜೊತೆ ಕೆಲ ಹೊತ್ತು ಸಂವಾದ ನಡೆಸಿದರು.</p><p>‘ನಿತ್ಯ 200 ಕೆ.ಜಿ ಕಲ್ಲಿದ್ದಲನ್ನು ಸೈಕಲ್ ಮೇಲೆ ಹೊತ್ತು 30ರಿಂದ 40 ಕಿ.ಮೀ ಸಂಚರಿಸುವ ಈ ಯುವಕರ ಆದಾಯ ಹೆಸರಿಗಷ್ಟೇ. ಅವರೊಂದಿಗೆ ನಡೆಯದೆ, ಅವರ ಭಾರವನ್ನು ಅನುಭವಿಸದೆ ಅವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಯುವ ಕಾರ್ಮಿಕರ ಬದುಕು ನಿತ್ರಾಣವಾದರೆ ಭಾರತ ನಿರ್ಮಾಣದ ಚಕ್ರವೂ ನಿಲ್ಲುತ್ತದೆ’ ಎಂದು ರಾಹುಲ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.</p><p>ಇದೇ ವೇಳೆ ‘ಜಾರ್ಖಂಡ್ ಕ್ರಾಂತಿ’ಯ ಮುಂದಾಳತ್ವ ವಹಿಸಿ ವೀರ ಮರಣ ಹೊಂದಿದ ಶೇಖ್ ಭಿಖಾರಿ ಮತ್ತು ಟಿಕೈತ್ ಉಮ್ರಾವ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದರು.</p><p>ರಾಂಚಿಯ ಶಾಹೀದ್ ಮೈದಾನದಲ್ಲಿ ಮಧ್ಯಾಹ್ನ ಸಾರ್ವಜನಿಕರನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮಗಢ</strong>: ಜಾರ್ಖಂಡ್ನ ರಾಮಗಢ ಜಿಲ್ಲೆಯಲ್ಲಿ ನಾಲ್ಕನೇ ದಿನದ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಮಗಢ ಕಲ್ಲಿದ್ದಲು ಪ್ರದೇಶಕ್ಕೆ ಭೇಟಿ ನೀಡಿ ಕಾರ್ಮಿಕರ ಜೊತೆ ಕೆಲ ಹೊತ್ತು ಸಂವಾದ ನಡೆಸಿದರು.</p><p>‘ನಿತ್ಯ 200 ಕೆ.ಜಿ ಕಲ್ಲಿದ್ದಲನ್ನು ಸೈಕಲ್ ಮೇಲೆ ಹೊತ್ತು 30ರಿಂದ 40 ಕಿ.ಮೀ ಸಂಚರಿಸುವ ಈ ಯುವಕರ ಆದಾಯ ಹೆಸರಿಗಷ್ಟೇ. ಅವರೊಂದಿಗೆ ನಡೆಯದೆ, ಅವರ ಭಾರವನ್ನು ಅನುಭವಿಸದೆ ಅವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಯುವ ಕಾರ್ಮಿಕರ ಬದುಕು ನಿತ್ರಾಣವಾದರೆ ಭಾರತ ನಿರ್ಮಾಣದ ಚಕ್ರವೂ ನಿಲ್ಲುತ್ತದೆ’ ಎಂದು ರಾಹುಲ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.</p><p>ಇದೇ ವೇಳೆ ‘ಜಾರ್ಖಂಡ್ ಕ್ರಾಂತಿ’ಯ ಮುಂದಾಳತ್ವ ವಹಿಸಿ ವೀರ ಮರಣ ಹೊಂದಿದ ಶೇಖ್ ಭಿಖಾರಿ ಮತ್ತು ಟಿಕೈತ್ ಉಮ್ರಾವ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದರು.</p><p>ರಾಂಚಿಯ ಶಾಹೀದ್ ಮೈದಾನದಲ್ಲಿ ಮಧ್ಯಾಹ್ನ ಸಾರ್ವಜನಿಕರನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>