ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ಭಾರತ್ ಜೋಡೊ ಯಾತ್ರೆಗೆ ಕೈಜೋಡಿಸಿ ಪಾಲ್ಗೊಂಡ ಎಲ್ಲರಿಗೂ ರಾಹುಲ್ ಅವರಲ್ಲಿರುವ ಪ್ರೀತಿ ಹಾಗೂ ಮಾನವೀಯ ಗುಣಗಳು ಅರ್ಥವಾಗಿವೆ. ಅವರ ಬಗ್ಗೆ ತಪ್ಪು ತಿಳಿವಳಿಕೆ ಹೊಂದುವುದು ಸ್ಮೃತಿ ಅವರಲ್ಲಿರುವ ದೋಷ. ಅದು ರಾಹುಲ್ ತಪ್ಪಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.