<p class="title"><strong>ನವದೆಹಲಿ:</strong> ಭಾರತೀಯ ರೈಲ್ವೆಯು 2023-24ರಲ್ಲಿ ದಿನಕ್ಕೆ 19 ಕಿಲೋಮೀಟರ್ನಷ್ಟು ಹೊಸ ಹಳಿಯನ್ನು ನಿರ್ಮಿಸುವ ಗುರಿ ಹೊಂದಿದೆ. 2022–23ರಲ್ಲಿ ದಿನಕ್ಕೆ 12 ಕಿ.ಮೀ.ನಷ್ಟು ಹೊಸ ಹಳಿ ನಿರ್ಮಿಸಲಾಗಿತ್ತು.</p>.<p class="title">2023–24ರ ಹಣಕಾಸು ವರ್ಷದಲ್ಲಿ ರೈಲ್ವೆಗೆ ₹ 2.41 ಲಕ್ಷ ಕೋಟಿಯಷ್ಟು ಹಣವನ್ನು ಮೀಸಲಿಡಲಾಗಿದ್ದು, 7,000 ಕಿ.ಮೀ.ಉದ್ದದ ಮಾರ್ಗವನ್ನು ನಿರ್ಮಿಸಲು ಯೋಜಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 4,500 ಕಿ.ಮೀ.ಉದ್ದದ ಮಾರ್ಗವನ್ನು ನಿರ್ಮಾಣ ಮಾಡಲಾಗಿತ್ತು.</p>.<p class="title">‘ಹೊಸ ಹಳಿ ನಿರ್ಮಿಸುವ ಯೋಜನೆಯು ಗೇಜ್ ಪರಿವರ್ತನೆ ಹಾಗೂ ಜೋಡುಮಾರ್ಗಗಳನ್ನು ಒಳಗೊಂಡಿದೆ’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p class="title">‘2014ಕ್ಕಿಂತಲೂ ಮುಂಚೆ ದಿನಕ್ಕೆ 4 ಕಿ.ಮೀ. ಉದ್ದದಷ್ಟು ಹಳಿ ನಿರ್ಮಿಸಲಾಗುತ್ತಿತ್ತು’ ಎಂದು ಅವರು ಹೇಳಿದರು.</p>.<p class="title">ಮುಂಬರುವ ಹಣಕಾಸು ವರ್ಷದಲ್ಲಿ ಕಲ್ಲಿದ್ದಲು, ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಸಾಗಣೆಗೆ ಸಂಬಂಧಿಸಿದಂತೆ 100 ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ಭಾರತೀಯ ರೈಲ್ವೆಯು 2023-24ರಲ್ಲಿ ದಿನಕ್ಕೆ 19 ಕಿಲೋಮೀಟರ್ನಷ್ಟು ಹೊಸ ಹಳಿಯನ್ನು ನಿರ್ಮಿಸುವ ಗುರಿ ಹೊಂದಿದೆ. 2022–23ರಲ್ಲಿ ದಿನಕ್ಕೆ 12 ಕಿ.ಮೀ.ನಷ್ಟು ಹೊಸ ಹಳಿ ನಿರ್ಮಿಸಲಾಗಿತ್ತು.</p>.<p class="title">2023–24ರ ಹಣಕಾಸು ವರ್ಷದಲ್ಲಿ ರೈಲ್ವೆಗೆ ₹ 2.41 ಲಕ್ಷ ಕೋಟಿಯಷ್ಟು ಹಣವನ್ನು ಮೀಸಲಿಡಲಾಗಿದ್ದು, 7,000 ಕಿ.ಮೀ.ಉದ್ದದ ಮಾರ್ಗವನ್ನು ನಿರ್ಮಿಸಲು ಯೋಜಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 4,500 ಕಿ.ಮೀ.ಉದ್ದದ ಮಾರ್ಗವನ್ನು ನಿರ್ಮಾಣ ಮಾಡಲಾಗಿತ್ತು.</p>.<p class="title">‘ಹೊಸ ಹಳಿ ನಿರ್ಮಿಸುವ ಯೋಜನೆಯು ಗೇಜ್ ಪರಿವರ್ತನೆ ಹಾಗೂ ಜೋಡುಮಾರ್ಗಗಳನ್ನು ಒಳಗೊಂಡಿದೆ’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p class="title">‘2014ಕ್ಕಿಂತಲೂ ಮುಂಚೆ ದಿನಕ್ಕೆ 4 ಕಿ.ಮೀ. ಉದ್ದದಷ್ಟು ಹಳಿ ನಿರ್ಮಿಸಲಾಗುತ್ತಿತ್ತು’ ಎಂದು ಅವರು ಹೇಳಿದರು.</p>.<p class="title">ಮುಂಬರುವ ಹಣಕಾಸು ವರ್ಷದಲ್ಲಿ ಕಲ್ಲಿದ್ದಲು, ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಸಾಗಣೆಗೆ ಸಂಬಂಧಿಸಿದಂತೆ 100 ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>