ಮಿಡತೆ ಹಾವಳಿಯಿಂದಾಗಿ ಬೆಳೆನಾಶವಾಗಿರುವುದರ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ವರ್ಷದ ಮುಂಗಾರು ಪೂರ್ವ ಬೆಳೆ ಹಾನಿಗೆ ಕೃಷಿ ವಿಮೆ ಕಂಪೆನಿಗಳು ಸಾಧ್ಯವಾದಷ್ಟು ಬೇಗ ₹ 380 ಕೋಟಿ ಮೊತ್ತದ ಪರಿಹಾರ ಒದಗಿಸಬೇಕು ಎಂದಿದ್ದಾರೆ. ಮುಂದುವರಿದು, 2020-21ನೇ ಸಾಲಿನ ಕೇಂದ್ರ ಯೋಜನೆಗಳ ಮೊದಲ ಕಂತಿನ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ರೈತರ ಹಿತದೃಷ್ಟಿಯಿಂದ ಎಲ್ಲ ಯೋಜನೆಗಳ ಮೊದಲ ಕಂತನ್ನು ಕೇಂದ್ರ ಸರ್ಕಾರ ತಕ್ಷಣವೇ ರಾಜ್ಯಕ್ಕೆ ಬಿಡುಗಡೆ ಮಾಡಬೇಕು ಎಂದೂ ಮನವಿ ಮಾಡಿದ್ದಾರೆ.