<p><strong>ಜೈಪುರ: </strong>ರಾಜಸ್ಥಾನ ಸಚಿವ ಸಂಪುಟದಲ್ಲಿರುವಸಚಿವರಲ್ಲಿ ಮೂವರು ಸಚಿವರು ಪಿಎಚ್ಡಿ, ಇಬ್ಬರು ಎಂಬಿಎ, ಆರು ಸಚಿವರು ಎಲ್ಎಲ್ಬಿ ಮತ್ತು ಒಬ್ಬರು ಇಂಜಿನಿಯರಿಂಗ್ ಪದವಿ ಪಡೆದವರಾಗಿದ್ದಾರೆ. ಏಳು ಸಚಿವರು ಪದವಿ ಪೂರೈಸಿಲ್ಲ.</p>.<p>ಸೋಮವಾರ 23 ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದು ಇದರಲ್ಲಿ ಎಂಟು ಸಚಿವರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.</p>.<p>ರಮೇಶ್ ಚಂದ್ ಮೀನಾ 1993ರಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿದ್ದರು.ಕರೌಲಿಯ ಸಪೋತರ ಕ್ಷೇತ್ರದಿಂದ ಆಯ್ಕೆಯಾದ ರಮೇಶ್ ಈಗ ಸಂಪುಟ ಸಚಿವರಾಗಿದ್ದಾರೆ.</p>.<p>ರಾಜ್ಯ ಸಚಿವರಾಗಿ ನೇಮಕವಾದ ಬಿ.ಡಿ ಕಲ್ಲಾ, ರಘು ಶರ್ಮಾ ಮತ್ತು ಆರ್ಎಲ್ಡಿ ನಾಯಕ ಸುಭಾಶ್ ಗಾರ್ಗ್ - ಇವರೆಲ್ಲರೂ ಪಿಎಚ್ಡಿ ಪಡೆದವರಾಗಿದ್ದಾರೆ. ಇದರಲ್ಲಿ ಕಲ್ಲಾ ಮತ್ತು ರಘು ಶರ್ಮಾ ಅವರು ಎಲ್ಎಲ್ಬಿ ಪದವಿಯನ್ನು ಹೊಂದಿದ್ದಾರೆ.</p>.<p>ಶಾಂತಿ ಕುಮಾರ್ ಧರಿವಾಲ್, ಗೋವಿಂದ್ ಸಿಂಗ್ ದೊತಾಸರ, ಸುಖ್ರಾಮ್ ಬಿಷ್ನೋಯ್ ಮತ್ತು ತಿಕಾರಾಮ್ ಜುಲ್ಲೆ ಅವರು ಕೂಡಾ ಎಲ್ಎಲ್ಬಿ ಪದವೀಧರರಾಗಿದ್ದಾರೆ.</p>.<p>ರಾಜ್ಯ ಸಚಿವರಾದ ಲಾಲ್ ಜತವ್ ಅವರು 10ನೇ ತರಗತಿ ತೇರ್ಗಡೆಯಾದವರಾಗಿದ್ದು, ಸಂಪುಟ ಸಚಿವರಾದ ಉದಯ್ ಲಾಲ್ ಮತ್ತು ರಾಜ್ಯ ಸಚಿವ ಅರ್ಜುನ್ ಬಮ್ನಿಯಾ ಎರಡನೇ ವರ್ಷ ಪದವಿವರೆಗೆ (ಪದವಿ ಪೂರೈಸಿಲ್ಲ) ಓದಿದ್ದಾರೆ. 5 ಸಚಿವರು ಸೀನಿಯರ್ ಸೆಕೆಂಡರಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ.</p>.<p>ಲಾಲ್ ಚಂದ್ ಕಟಾರಿಯಾ, ವಿಶ್ವೇಂದ್ರ ಸಿಂಗ್, ರಮೇಶ್ ಚಂದ್ ಮೀನಾ, ಅರ್ಜುನ್ ಸಿಂಗ್ ಬಮ್ನಿಯಾ, ಭನ್ವರ್ ಸಿಂಗ್ ಭಾಟಿ, ಅಶೋಕ್ ಚಂದ್ನಾ, ಭಜನ್ ಲಾಲ್ ಮತ್ತು ತಿಕಾರಾಮ್ ಜುಲ್ಲೇ ಅವರ ವಿರುದ್ಧ ಪ್ರಕರಣಗಳು ಇವೆ. ಈ ಪೈಕಿಕಿರಿಯ ಸಚಿವರಾದ ಅಶೋಕ್ ಚಂದ್ನಾ ಅವರ ವಿರುದ್ಧ 10 ಪ್ರಕರಣಗಳಿವೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ: </strong>ರಾಜಸ್ಥಾನ ಸಚಿವ ಸಂಪುಟದಲ್ಲಿರುವಸಚಿವರಲ್ಲಿ ಮೂವರು ಸಚಿವರು ಪಿಎಚ್ಡಿ, ಇಬ್ಬರು ಎಂಬಿಎ, ಆರು ಸಚಿವರು ಎಲ್ಎಲ್ಬಿ ಮತ್ತು ಒಬ್ಬರು ಇಂಜಿನಿಯರಿಂಗ್ ಪದವಿ ಪಡೆದವರಾಗಿದ್ದಾರೆ. ಏಳು ಸಚಿವರು ಪದವಿ ಪೂರೈಸಿಲ್ಲ.</p>.<p>ಸೋಮವಾರ 23 ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದು ಇದರಲ್ಲಿ ಎಂಟು ಸಚಿವರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.</p>.<p>ರಮೇಶ್ ಚಂದ್ ಮೀನಾ 1993ರಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿದ್ದರು.ಕರೌಲಿಯ ಸಪೋತರ ಕ್ಷೇತ್ರದಿಂದ ಆಯ್ಕೆಯಾದ ರಮೇಶ್ ಈಗ ಸಂಪುಟ ಸಚಿವರಾಗಿದ್ದಾರೆ.</p>.<p>ರಾಜ್ಯ ಸಚಿವರಾಗಿ ನೇಮಕವಾದ ಬಿ.ಡಿ ಕಲ್ಲಾ, ರಘು ಶರ್ಮಾ ಮತ್ತು ಆರ್ಎಲ್ಡಿ ನಾಯಕ ಸುಭಾಶ್ ಗಾರ್ಗ್ - ಇವರೆಲ್ಲರೂ ಪಿಎಚ್ಡಿ ಪಡೆದವರಾಗಿದ್ದಾರೆ. ಇದರಲ್ಲಿ ಕಲ್ಲಾ ಮತ್ತು ರಘು ಶರ್ಮಾ ಅವರು ಎಲ್ಎಲ್ಬಿ ಪದವಿಯನ್ನು ಹೊಂದಿದ್ದಾರೆ.</p>.<p>ಶಾಂತಿ ಕುಮಾರ್ ಧರಿವಾಲ್, ಗೋವಿಂದ್ ಸಿಂಗ್ ದೊತಾಸರ, ಸುಖ್ರಾಮ್ ಬಿಷ್ನೋಯ್ ಮತ್ತು ತಿಕಾರಾಮ್ ಜುಲ್ಲೆ ಅವರು ಕೂಡಾ ಎಲ್ಎಲ್ಬಿ ಪದವೀಧರರಾಗಿದ್ದಾರೆ.</p>.<p>ರಾಜ್ಯ ಸಚಿವರಾದ ಲಾಲ್ ಜತವ್ ಅವರು 10ನೇ ತರಗತಿ ತೇರ್ಗಡೆಯಾದವರಾಗಿದ್ದು, ಸಂಪುಟ ಸಚಿವರಾದ ಉದಯ್ ಲಾಲ್ ಮತ್ತು ರಾಜ್ಯ ಸಚಿವ ಅರ್ಜುನ್ ಬಮ್ನಿಯಾ ಎರಡನೇ ವರ್ಷ ಪದವಿವರೆಗೆ (ಪದವಿ ಪೂರೈಸಿಲ್ಲ) ಓದಿದ್ದಾರೆ. 5 ಸಚಿವರು ಸೀನಿಯರ್ ಸೆಕೆಂಡರಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ.</p>.<p>ಲಾಲ್ ಚಂದ್ ಕಟಾರಿಯಾ, ವಿಶ್ವೇಂದ್ರ ಸಿಂಗ್, ರಮೇಶ್ ಚಂದ್ ಮೀನಾ, ಅರ್ಜುನ್ ಸಿಂಗ್ ಬಮ್ನಿಯಾ, ಭನ್ವರ್ ಸಿಂಗ್ ಭಾಟಿ, ಅಶೋಕ್ ಚಂದ್ನಾ, ಭಜನ್ ಲಾಲ್ ಮತ್ತು ತಿಕಾರಾಮ್ ಜುಲ್ಲೇ ಅವರ ವಿರುದ್ಧ ಪ್ರಕರಣಗಳು ಇವೆ. ಈ ಪೈಕಿಕಿರಿಯ ಸಚಿವರಾದ ಅಶೋಕ್ ಚಂದ್ನಾ ಅವರ ವಿರುದ್ಧ 10 ಪ್ರಕರಣಗಳಿವೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>