<p><strong>ರಾಜ್ಕೋಟ್:</strong> ₹ 1,500 ಕೋಟಿ ಮೊತ್ತದ ಸೈಬರ್ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ಗುಜರಾತ್ನ ರಾಜ್ಕೋಟ್ ಜಿಲ್ಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿದೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.</p>.<p>ತೆಲಂಗಾಣದ ಅದಿಲುದ್ದೀನ್ ಮೊಹಮ್ಮದ್, ರಾಜ್ಕೋಟ್ನ ಮಿಹಿರ್ ರಂಗಾನಿ ಮತ್ತು ಹಿರೇನ್ ಲಿಂಬಾಸಿಯಾ ಬಂಧಿತರು. ಆರೋಪಿ ಅದಿಲುದ್ದೀನ್ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸುವ ಮತ್ತು ಆ ಹಣವನ್ನು‘ಅಂಗಾಡಿಯಾ’ ( ಗುಜರಾತ್ ಮತ್ತು ಮುಂಬೈ ನಡುವೆ ನಡೆಯುವ ಸಾಂಪ್ರದಾಯಿಕ ಕೊರಿಯರ್ ವ್ಯವಸ್ಥೆ) ಮೂಲಕ ವಾಪಸ್ ಪಡೆದುಕೊಳ್ಳುತ್ತಿದ್ದ. ಈತನನ್ನು ಬುಧವಾರ ಬಂಧಿಸಲಾಗಿದೆ’ ಎಂದು ಎಸ್ಪಿ ವಿಜಯ್ ಗುರ್ಜಾರ್ ತಿಳಿಸಿದ್ದಾರೆ.</p>.<p>‘ಇತರೆ ಇಬ್ಬರು ಬ್ಯಾಂಕ್ ಖಾತೆಗಳನ್ನು ಒದಗಿಸುವ, ಹಣ ತೆಗೆಸಿಕೊಡುವ ಮತ್ತು ಹಣ ವರ್ಗಾಯಿಸಲು ಸಹಕರಿಸುತ್ತಿದ್ದರು. ಫೆಬ್ರುವರಿ 13ರಂದು 6 ಮಂದಿಯನ್ನು ಬಂಧಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.</p>.<p>‘ಜಿಎಸ್ಟಿ ಮತ್ತು ಟಿಡಿಎಸ್ನಿಂದ ತಪ್ಪಿಸಿಕೊಳ್ಳಲು ಇವರು ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ) ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದರು. ಖಾಸಗಿ ಬ್ಯಾಂಕ್ಗಳಲ್ಲಿ ಎಪಿಎಂಸಿಯ ಮೂಲಕ 15 ಖಾತೆಗಳನ್ನು ತೆರೆಸಿದ್ದರು.’</p>.<p>ಸೈಬರ್ ವಂಚನೆ, ಆನ್ಲೈನ್ ಗೇಮಿಂಗ್ ವಹಿವಾಟು ಮತ್ತು ಜಿಎಸ್ಟಿ ಸಂಬಂಧಿತ ಹಣದಿಂದ ಆದಾಯ ಗಳಿಸಲು ಈ ಖಾತೆ ಬಳಕೆ ಆಗಿದ್ದವು. ಈ ಖಾತೆಗಳಲ್ಲಿ ಸುಮಾರು ₹1,500 ಕೋಟಿ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು. ಸೈಬರ್ ಅಪರಾಧ ಪ್ರಕರಣದಡಿ 180 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ.’ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಕೋಟ್:</strong> ₹ 1,500 ಕೋಟಿ ಮೊತ್ತದ ಸೈಬರ್ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ಗುಜರಾತ್ನ ರಾಜ್ಕೋಟ್ ಜಿಲ್ಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿದೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.</p>.<p>ತೆಲಂಗಾಣದ ಅದಿಲುದ್ದೀನ್ ಮೊಹಮ್ಮದ್, ರಾಜ್ಕೋಟ್ನ ಮಿಹಿರ್ ರಂಗಾನಿ ಮತ್ತು ಹಿರೇನ್ ಲಿಂಬಾಸಿಯಾ ಬಂಧಿತರು. ಆರೋಪಿ ಅದಿಲುದ್ದೀನ್ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸುವ ಮತ್ತು ಆ ಹಣವನ್ನು‘ಅಂಗಾಡಿಯಾ’ ( ಗುಜರಾತ್ ಮತ್ತು ಮುಂಬೈ ನಡುವೆ ನಡೆಯುವ ಸಾಂಪ್ರದಾಯಿಕ ಕೊರಿಯರ್ ವ್ಯವಸ್ಥೆ) ಮೂಲಕ ವಾಪಸ್ ಪಡೆದುಕೊಳ್ಳುತ್ತಿದ್ದ. ಈತನನ್ನು ಬುಧವಾರ ಬಂಧಿಸಲಾಗಿದೆ’ ಎಂದು ಎಸ್ಪಿ ವಿಜಯ್ ಗುರ್ಜಾರ್ ತಿಳಿಸಿದ್ದಾರೆ.</p>.<p>‘ಇತರೆ ಇಬ್ಬರು ಬ್ಯಾಂಕ್ ಖಾತೆಗಳನ್ನು ಒದಗಿಸುವ, ಹಣ ತೆಗೆಸಿಕೊಡುವ ಮತ್ತು ಹಣ ವರ್ಗಾಯಿಸಲು ಸಹಕರಿಸುತ್ತಿದ್ದರು. ಫೆಬ್ರುವರಿ 13ರಂದು 6 ಮಂದಿಯನ್ನು ಬಂಧಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.</p>.<p>‘ಜಿಎಸ್ಟಿ ಮತ್ತು ಟಿಡಿಎಸ್ನಿಂದ ತಪ್ಪಿಸಿಕೊಳ್ಳಲು ಇವರು ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ) ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದರು. ಖಾಸಗಿ ಬ್ಯಾಂಕ್ಗಳಲ್ಲಿ ಎಪಿಎಂಸಿಯ ಮೂಲಕ 15 ಖಾತೆಗಳನ್ನು ತೆರೆಸಿದ್ದರು.’</p>.<p>ಸೈಬರ್ ವಂಚನೆ, ಆನ್ಲೈನ್ ಗೇಮಿಂಗ್ ವಹಿವಾಟು ಮತ್ತು ಜಿಎಸ್ಟಿ ಸಂಬಂಧಿತ ಹಣದಿಂದ ಆದಾಯ ಗಳಿಸಲು ಈ ಖಾತೆ ಬಳಕೆ ಆಗಿದ್ದವು. ಈ ಖಾತೆಗಳಲ್ಲಿ ಸುಮಾರು ₹1,500 ಕೋಟಿ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು. ಸೈಬರ್ ಅಪರಾಧ ಪ್ರಕರಣದಡಿ 180 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ.’ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>