‘ಪ್ರತೀಕಾರದ ಉದ್ದೇಶದಿಂದ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಕಾಂಗ್ರೆಸ್ ಹಿಂದೆ ಇಂಥ ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹ ರಾವ್, ಐ.ಕೆ. ಗುಜ್ರಾಲ್, ಚಂದ್ರಶೇಖರ್, ಎಚ್.ಡಿ. ದೇವೇಗೌಡ ಹಾಗೂ ಇತ್ತೀಚೆಗೆ ಮನಮೋಹನ ಸಿಂಗ್ ಅವರಿಗೆ ನೀಡಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆದಾಗ ಯಾರೂ ಚರ್ಚಿಸಿಲ್ಲ. ಈಗ ಮಾತ್ರ ಯಾಕೆ ಇಷ್ಟೊಂದು ವಿರೋಧ ಬರುತ್ತಿದೆ? ಭದ್ರತೆಯನ್ನು ಪ್ರತಿಷ್ಠೆಯ ಸಂಕೇತವಾಗಿ ಪರಿಗಣಿಸಬಾರದು’ ಎಂದರು.