<p><strong>ಗೋರಖಪುರ:</strong> 'ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿರುವ ಭವ್ಯ ರಾಮಮಂದಿರವನ್ನು ನೋಡಿ ಯಾರಾದರೂ ಹೆಮ್ಮೆಪಟ್ಟುಕೊಳ್ಳದಿದ್ದರೆ ಅವರು ಭಾರತೀಯರೇ ಎಂದು ಅನುಮಾನಪಟ್ಟುಕೊಳ್ಳಬೇಕು' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು (ಬುಧವಾರ) ತಿಳಿಸಿದ್ದಾರೆ. </p><p>ಗೋರಖನಾಥ ದೇಗುಲದ ಆವರಣದಲ್ಲಿ ಮಹಂತ್ ದಿಗ್ವಿಜಯನಾಥ್ ಅವರ 56ನೇ ಹಾಗೂ ಮಹಂತ್ ಅವೈದ್ಯನಾಥ್ ಅವರ 11ನೇ ಪುಣ್ಯತಿಥಿಯಲ್ಲಿ ಮಾತನಾಡಿದ ಆದಿತ್ಯನಾಥ, 'ಭಾರತದಲ್ಲಿ ಇದ್ದುಕೊಂಡು ಅಯೋಧ್ಯೆಯ ರಾಮಮಂದಿರದ ಬಗ್ಗೆ ಹೆಮ್ಮೆಪಟ್ಟುಕೊಳ್ಳದಿದ್ದರೆ ಅವರು ಭಾರತೀಯರೇ ಎಂಬುದೇ ಅನುಮಾನ' ಎಂದು ತಿಳಿಸಿದ್ದಾರೆ. </p><p>'ಈ ಮಹಾನ್ ವ್ಯಕ್ತಿಗಳು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಕನಸನ್ನು ಕಂಡಿದ್ದರು. ಅದೀಗ ಸಾಕಾರಗೊಂಡಿದೆ' ಎಂದು ಆದಿತ್ಯನಾಥ ಉಲ್ಲೇಖಿಸಿದ್ದಾರೆ. </p><p>'ದೇಶ ಹಾಗೂ ಧರ್ಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಂತರು ತಮ್ಮ ಬದ್ಧತೆ ಹಾಗೂ ತ್ಯಾಗದ ಮೂಲದ ಸಮಾಜ ಹಾಗೂ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದರು' ಎಂದು ಆದಿತ್ಯನಾಥ ಹೇಳಿದ್ದಾರೆ. </p><p>'ರಾಮಮಂದಿರವು ಮಹಂತರ ದೃಢ ಸಂಕಲ್ಪ ಹಾಗೂ ಹೋರಾಟದ ಸಂಕೇತವಾಗಿದೆ' ಎಂದು ಅವರು ಹೇಳಿದ್ದಾರೆ. </p>.ರಾಮಮಂದಿರ ನಿರ್ಮಿಸಿದ ಮೋದಿಯನ್ನು ನಿರಂತರವಾಗಿ ಟೀಕಿಸುವ ಉದ್ಧವ್ ಠಾಕ್ರೆ: ಶಿಂದೆ.ಅಯೋಧ್ಯೆ | ರಾಮಮಂದಿರ ಟ್ರಸ್ಟ್ಗೆ ಬೆದರಿಕೆ ಇ–ಮೇಲ್; ತನಿಖೆ ಆರಂಭಿಸಿದ ಪೊಲೀಸರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋರಖಪುರ:</strong> 'ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿರುವ ಭವ್ಯ ರಾಮಮಂದಿರವನ್ನು ನೋಡಿ ಯಾರಾದರೂ ಹೆಮ್ಮೆಪಟ್ಟುಕೊಳ್ಳದಿದ್ದರೆ ಅವರು ಭಾರತೀಯರೇ ಎಂದು ಅನುಮಾನಪಟ್ಟುಕೊಳ್ಳಬೇಕು' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು (ಬುಧವಾರ) ತಿಳಿಸಿದ್ದಾರೆ. </p><p>ಗೋರಖನಾಥ ದೇಗುಲದ ಆವರಣದಲ್ಲಿ ಮಹಂತ್ ದಿಗ್ವಿಜಯನಾಥ್ ಅವರ 56ನೇ ಹಾಗೂ ಮಹಂತ್ ಅವೈದ್ಯನಾಥ್ ಅವರ 11ನೇ ಪುಣ್ಯತಿಥಿಯಲ್ಲಿ ಮಾತನಾಡಿದ ಆದಿತ್ಯನಾಥ, 'ಭಾರತದಲ್ಲಿ ಇದ್ದುಕೊಂಡು ಅಯೋಧ್ಯೆಯ ರಾಮಮಂದಿರದ ಬಗ್ಗೆ ಹೆಮ್ಮೆಪಟ್ಟುಕೊಳ್ಳದಿದ್ದರೆ ಅವರು ಭಾರತೀಯರೇ ಎಂಬುದೇ ಅನುಮಾನ' ಎಂದು ತಿಳಿಸಿದ್ದಾರೆ. </p><p>'ಈ ಮಹಾನ್ ವ್ಯಕ್ತಿಗಳು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಕನಸನ್ನು ಕಂಡಿದ್ದರು. ಅದೀಗ ಸಾಕಾರಗೊಂಡಿದೆ' ಎಂದು ಆದಿತ್ಯನಾಥ ಉಲ್ಲೇಖಿಸಿದ್ದಾರೆ. </p><p>'ದೇಶ ಹಾಗೂ ಧರ್ಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಂತರು ತಮ್ಮ ಬದ್ಧತೆ ಹಾಗೂ ತ್ಯಾಗದ ಮೂಲದ ಸಮಾಜ ಹಾಗೂ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದರು' ಎಂದು ಆದಿತ್ಯನಾಥ ಹೇಳಿದ್ದಾರೆ. </p><p>'ರಾಮಮಂದಿರವು ಮಹಂತರ ದೃಢ ಸಂಕಲ್ಪ ಹಾಗೂ ಹೋರಾಟದ ಸಂಕೇತವಾಗಿದೆ' ಎಂದು ಅವರು ಹೇಳಿದ್ದಾರೆ. </p>.ರಾಮಮಂದಿರ ನಿರ್ಮಿಸಿದ ಮೋದಿಯನ್ನು ನಿರಂತರವಾಗಿ ಟೀಕಿಸುವ ಉದ್ಧವ್ ಠಾಕ್ರೆ: ಶಿಂದೆ.ಅಯೋಧ್ಯೆ | ರಾಮಮಂದಿರ ಟ್ರಸ್ಟ್ಗೆ ಬೆದರಿಕೆ ಇ–ಮೇಲ್; ತನಿಖೆ ಆರಂಭಿಸಿದ ಪೊಲೀಸರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>