ಜಿಲ್ಲೆಯ ಕುನರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬತ್ ಗ್ರಾಮದ ನಿವಾಸಿ ಭೂರೆ ಸಿಂಗ್ ಅವರ ಪುತ್ರ ಶಿವಂ ಮೃತ ಬಾಲಕ. ಈತ ಇತರ ಮಕ್ಕಳೊಂದಿಗೆ ನಾಟಕದ ಅಭ್ಯಾಸ ಮಾಡುತ್ತಿದ್ದ. ನಾಟಕದಲ್ಲಿ ಭಗತ್ಸಿಂಗ್ರನ್ನು ಗಲ್ಲಿಗೇರಿಸುವ ದೃಶ್ಯ ಅಭ್ಯಾಸ ಮಾಡುತ್ತಿದ್ದಾಗ, ಶಿವಂ ಕುತ್ತಿಗೆಗೆ ಹಗ್ಗದ ಕುಣಿಕೆ ಹಾಕಿಕೊಂಡಿದ್ದಾನೆ. ಆದರೆ, ಆತ ನಿಂತಿದ್ದ ಸ್ಟೂಲ್ ಜಾರಿತು ಎಂದು ಸ್ಥಳೀಯರು ಘಟನೆಯನ್ನು ವಿವರಿಸಿದ್ದಾರೆ