ಈ ಮಧ್ಯೆ, ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅವರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪತ್ರ ಬರೆದು, ‘ಈಗಿರುವ ನಿಯಮಾವಳಿಗಳ ಪ್ರಕಾರ ₹15 ಲಕ್ಷ ಪ್ಯಾಕೇಜ್ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಮಾತ್ರ ಅನ್ವಯಿಸು
ತ್ತದೆ. ಆದರೆ, ದೇಶದೆಲ್ಲೆಡೆ ಅಳಿವಿನಂಚಿ ನಲ್ಲಿರುವ ಅನೇಕ ವನ್ಯಪ್ರಭೇದಗಳನ್ನು ಹೊಂದಿರುವ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳು ಹಲವಾರು ಇವೆ. ಇವುಗಳು ಹುಲಿ ಸಂರಕ್ಷಿತ ಪ್ರದೇಶಗಳೆಂದು ಅಧಿಸೂಚಿತವಾಗಿರುವುದಿಲ್ಲ. ಆದರೆ,ಇಲ್ಲಿ ವಾಸಿಸುತ್ತಿರುವ ಸಾವಿರಾರುಕುಟುಂಬಗಳು ಮೂಲಸೌಕರ್ಯಗಳ ಕೊರತೆ ಹಾಗೂ ತಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಪುನರ್ವಸತಿಗೆ ಸಿದ್ಧರಾಗಿದ್ದಾರೆ. ಆದರೆ, ಸೂಕ್ತ ಪುನರ್ವಸತಿ ಪ್ಯಾಕೇಜಿನ ಕೊರತೆಯಿಂದ ಪುನರ್ವಸತಿ ಯೋಜನೆ ಸೂಕ್ತ ಪ್ರಗತಿ ಕಂಡಿಲ್ಲ’ ಎಂದು ಗಮನ ಸೆಳೆದಿದ್ದರು.