ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾವು (ಬಿಜೆಪಿ) ಅಧಿಕಾರಕ್ಕೆ ಬಂದಾಗ, ಯುಪಿಎ ಸರ್ಕಾರದ ಫೋನ್ ಬ್ಯಾಂಕಿಂಗ್ ನೀತಿಯಿಂದಾಗಿ ನಮ್ಮ ಬ್ಯಾಂಕ್ಗಳು ನಷ್ಟ ಮತ್ತು ಹೆಚ್ಚಿನ ಎನ್ಪಿಎಗಳಿಂದ ತತ್ತರಿಸಿದ್ದವು. ಬಡವರಿಗೆ ಬ್ಯಾಂಕ್ಗಳ ಬಾಗಿಲು ಮುಚ್ಚಲ್ಪಟ್ಟಿದ್ದವು. ಆದರೆ, ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಾಗಿರುವ ಸುಧಾರಣೆಯು ಬಡವರು, ರೈತರು ಮತ್ತು ಎಂಎಸ್ಎಂಇಗಳಿಗೆ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಹೆಚ್ಚಿನ ಸಾಲ ಲಭ್ಯತೆಯನ್ನು ಒದಗಿಸಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.