<p><strong>ಲಖನೌ:</strong> ಬಾಡಿಗೆ ಬಾಕಿ ಕೇಳಿದ್ದಕ್ಕೆ ಮನೆ ಮಾಲಕಿಯನ್ನು ಕೊಂದು, ದೇಹವನ್ನು ತುಂಡುಗಳನ್ನಾಗಿ ಮಾಡಿ ಸೂಟ್ಕೇಸ್ನಲ್ಲಿ ಹಾಕಿಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.</p>.ಕೊಳ್ಳೇಗಾಲ | ರಾಗಿ ಒಕ್ಕಣೆ ಯಂತ್ರಕ್ಕೆ ಸಿಲುಕಿ ಮಹಿಳೆಯ ಕೈ ತುಂಡು.<p>ಮನೆ ಮಾಲಕಿ ದೀಪ್ಷಿಕಾ ಶರ್ಮಾ ಎಂಬವರು ಬುಧವಾರ ರಾತ್ರಿ ನಗರದ ರಾಜಿನಗರ ಎಕ್ಸ್ಟೆನ್ಷನ್ನಲ್ಲಿರುವ ಔರಾ ಚಿಮೆರಾ ಸೊಸೈಟಿಯಲ್ಲಿರುವ ಮನೆಗೆ ತೆರಳಿದ್ದಾಗ ಘಟನೆ ನಡೆದಿದೆ.</p><p>ಅಜಯ್ ಗುಪ್ತಾ ಹಾಗೂ ಆತನ ಪತ್ನಿ ಆಕೃತಿ ಗುಪ್ತಾ ಸೇರಿ ಈ ಕೃತ್ಯ ಎಸಗಿದ್ದರು. ₹ 90 ಸಾವಿರ ಬಾಡಿಗೆ ಬಾಕಿ ಇದ್ದನ್ನು ಕೇಳಿದಾಗ ಕೊಲೆ ಮಾಡಿದ್ದಾರೆ.</p><p>ಮಾಲಕಿಯ ತಲೆಗೆ ಪ್ರೆಷರ್ ಕುಕ್ಕರ್ನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ದೇಹವನ್ನು ತುಂಡುಗಳನ್ನಾಗಿ ಮಾಡಿ ಸೂಟ್ಕೇಸ್ನಲ್ಲಿ ತುಂಬಿದ್ದಾರೆ.</p>.ಬೆಳಗಾವಿ ಜಿಲ್ಲಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಯುವಕನ ಕರುಳು ತುಂಡು?.<p>ಸೂಟ್ಕೇಸ್ ಅನ್ನು ನಿರ್ಜನ ಪ್ರದೇಶದಲ್ಲಿ ಎಸೆಯಲು ಮುಂದಾಗಿದ್ದಾರೆ. ಈ ವೇಳೆ ಫ್ಲ್ಯಾಟ್ಗೆ ದೀಪ್ಷಿಕಾ ಅವರ ಮನೆಕೆಲಸದಾಕೆ ಬಂದು ಮಾಲಕಿಯ ಬಗ್ಗೆ ವಿಚಾರಿಸಿದಾಗ ಅದಕ್ಕೆ ಉತ್ತರಿಸಲು ದಂಪತಿ ತಡವರಿಸಿದ್ದಾರೆ. ಈ ವೇಳೆ ಏನೋ ಅಕ್ರಮ ನಡೆದಿದೆ ಎನ್ನುವ ಶಂಕೆಯುಂಟಾಗಿದೆ.</p><p>ಕೂಡಲೇ ಮನೆಕೆಲಸದಾಕೆ ಹೊರಗಿನಿಂದ ಬಾಗಿಲು ಹಾಕಿ ದಂಪತಿಯನ್ನು ಮನೆಯೊಳಗೆ ಬಂಧಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಬಂದು ಹುಡುಕಿದಾಗಿ ಮಂಚದಡಿಯಲ್ಲಿ ಸೂಟ್ಕೇಸ್ ಲಭ್ಯವಾಗಿದೆ. ದಂಪತಿಯನ್ನು ಬಂಧಿಸಲಾಗಿದೆ.</p>.ಮಹಿಳೆಯನ್ನ ತುಂಡು ತುಂಡಾಗಿ ಕತ್ತರಿಸಿದ್ದ ಕೇಸ್: ಅತ್ತೆಗೆ ಸ್ಕೆಚ್ ಹಾಕಿದ್ದು ಅಳಿಯ.<p>ಮನೆ ಬಾಡಿಗೆ ಕೊಡುವ ನೆಪದಲ್ಲಿ ಕರೆಸಿಕೊಂಡು ಕೊಲೆ ಮಾಡಿದ್ದಾರೆ. ಇದು ಪೂರ್ವಯೋಜಿತ ಕೃತ್ಯ ಎಂದು ದೀಪ್ಷಿಕಾ ತಾಯಿ ಹೇಳಿದ್ದಾರೆ. ಈ ಹಿಂದೆಯೂ ಬಾಡಿಗೆ ವಸೂಲಿ ಸಂಬಂಧ ಜಗಳ ಉಂಟಾಗಿತ್ತು ಎಂದು ಅವರು ತಿಳಿಸಿದ್ದಾರೆ.</p>.ಬೆಂಗಳೂರು | ರಸ್ತೆ ವಿಭಜಕಕ್ಕೆ ಡಿಕ್ಕಿ: ಟೆಂಪೊ ಎರಡು ತುಂಡು, ಮೂವರಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಬಾಡಿಗೆ ಬಾಕಿ ಕೇಳಿದ್ದಕ್ಕೆ ಮನೆ ಮಾಲಕಿಯನ್ನು ಕೊಂದು, ದೇಹವನ್ನು ತುಂಡುಗಳನ್ನಾಗಿ ಮಾಡಿ ಸೂಟ್ಕೇಸ್ನಲ್ಲಿ ಹಾಕಿಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.</p>.ಕೊಳ್ಳೇಗಾಲ | ರಾಗಿ ಒಕ್ಕಣೆ ಯಂತ್ರಕ್ಕೆ ಸಿಲುಕಿ ಮಹಿಳೆಯ ಕೈ ತುಂಡು.<p>ಮನೆ ಮಾಲಕಿ ದೀಪ್ಷಿಕಾ ಶರ್ಮಾ ಎಂಬವರು ಬುಧವಾರ ರಾತ್ರಿ ನಗರದ ರಾಜಿನಗರ ಎಕ್ಸ್ಟೆನ್ಷನ್ನಲ್ಲಿರುವ ಔರಾ ಚಿಮೆರಾ ಸೊಸೈಟಿಯಲ್ಲಿರುವ ಮನೆಗೆ ತೆರಳಿದ್ದಾಗ ಘಟನೆ ನಡೆದಿದೆ.</p><p>ಅಜಯ್ ಗುಪ್ತಾ ಹಾಗೂ ಆತನ ಪತ್ನಿ ಆಕೃತಿ ಗುಪ್ತಾ ಸೇರಿ ಈ ಕೃತ್ಯ ಎಸಗಿದ್ದರು. ₹ 90 ಸಾವಿರ ಬಾಡಿಗೆ ಬಾಕಿ ಇದ್ದನ್ನು ಕೇಳಿದಾಗ ಕೊಲೆ ಮಾಡಿದ್ದಾರೆ.</p><p>ಮಾಲಕಿಯ ತಲೆಗೆ ಪ್ರೆಷರ್ ಕುಕ್ಕರ್ನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ದೇಹವನ್ನು ತುಂಡುಗಳನ್ನಾಗಿ ಮಾಡಿ ಸೂಟ್ಕೇಸ್ನಲ್ಲಿ ತುಂಬಿದ್ದಾರೆ.</p>.ಬೆಳಗಾವಿ ಜಿಲ್ಲಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಯುವಕನ ಕರುಳು ತುಂಡು?.<p>ಸೂಟ್ಕೇಸ್ ಅನ್ನು ನಿರ್ಜನ ಪ್ರದೇಶದಲ್ಲಿ ಎಸೆಯಲು ಮುಂದಾಗಿದ್ದಾರೆ. ಈ ವೇಳೆ ಫ್ಲ್ಯಾಟ್ಗೆ ದೀಪ್ಷಿಕಾ ಅವರ ಮನೆಕೆಲಸದಾಕೆ ಬಂದು ಮಾಲಕಿಯ ಬಗ್ಗೆ ವಿಚಾರಿಸಿದಾಗ ಅದಕ್ಕೆ ಉತ್ತರಿಸಲು ದಂಪತಿ ತಡವರಿಸಿದ್ದಾರೆ. ಈ ವೇಳೆ ಏನೋ ಅಕ್ರಮ ನಡೆದಿದೆ ಎನ್ನುವ ಶಂಕೆಯುಂಟಾಗಿದೆ.</p><p>ಕೂಡಲೇ ಮನೆಕೆಲಸದಾಕೆ ಹೊರಗಿನಿಂದ ಬಾಗಿಲು ಹಾಕಿ ದಂಪತಿಯನ್ನು ಮನೆಯೊಳಗೆ ಬಂಧಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಬಂದು ಹುಡುಕಿದಾಗಿ ಮಂಚದಡಿಯಲ್ಲಿ ಸೂಟ್ಕೇಸ್ ಲಭ್ಯವಾಗಿದೆ. ದಂಪತಿಯನ್ನು ಬಂಧಿಸಲಾಗಿದೆ.</p>.ಮಹಿಳೆಯನ್ನ ತುಂಡು ತುಂಡಾಗಿ ಕತ್ತರಿಸಿದ್ದ ಕೇಸ್: ಅತ್ತೆಗೆ ಸ್ಕೆಚ್ ಹಾಕಿದ್ದು ಅಳಿಯ.<p>ಮನೆ ಬಾಡಿಗೆ ಕೊಡುವ ನೆಪದಲ್ಲಿ ಕರೆಸಿಕೊಂಡು ಕೊಲೆ ಮಾಡಿದ್ದಾರೆ. ಇದು ಪೂರ್ವಯೋಜಿತ ಕೃತ್ಯ ಎಂದು ದೀಪ್ಷಿಕಾ ತಾಯಿ ಹೇಳಿದ್ದಾರೆ. ಈ ಹಿಂದೆಯೂ ಬಾಡಿಗೆ ವಸೂಲಿ ಸಂಬಂಧ ಜಗಳ ಉಂಟಾಗಿತ್ತು ಎಂದು ಅವರು ತಿಳಿಸಿದ್ದಾರೆ.</p>.ಬೆಂಗಳೂರು | ರಸ್ತೆ ವಿಭಜಕಕ್ಕೆ ಡಿಕ್ಕಿ: ಟೆಂಪೊ ಎರಡು ತುಂಡು, ಮೂವರಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>