ಬಂಧಿತರಲ್ಲಿ ಒಬ್ಬರಾದ ಸತೀಶ್ ಎಂಬುವವರು ತಿರುನೆಲ್ವೆಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ಸಂಬಂಧಿಕ ಮತ್ತು ಬಿಜೆಪಿ ಕಾರ್ಯಕರ್ತ. ಇನ್ನಿಬ್ಬರು ಆರೋಪಿಗಳಾದ ನವೀನ್ ಮತ್ತು ಪೆರುಮಾಳ್ ಸಹ ನಾಗೇಂದ್ರನ್ ಬೆಂಬಲಿಗರಾಗಿದ್ದಾರೆ. ಈ ಮೂವರು ಚೆನ್ನೈನಲ್ಲಿರುವ ನಾಗೇಂದ್ರನ್ ಒಡೆತನದ ಹೋಟೆಲ್ ಬ್ಲೂ ಡೈಮಂಡ್ನಲ್ಲಿ ತಂಗಿದ್ದರು.