<p><strong>ಮುಂಬೈ:</strong> ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್ ಲಿಮಿಟೆಡ್ (ಎಂಎಸ್ಸಿಬಿ) ನಂಟಿನ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕನ್ನಡ್ ಸಹಕಾರಿ ಸಾಖರ್ ಕಾರ್ಖಾನಾ ಲಿಮಿಟೆಡ್ಗೆ (ಕೆಎಸ್ಎಸ್ಕೆ) ಸೇರಿದ ₹ 50 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.</p>.<p>ಜಪ್ತಿ ಮಾಡಲಾಗಿರುವ ಸ್ವತ್ತುಗಳಲ್ಲಿ ಕೆಎಸ್ಎಸ್ಕೆಗೆ ಸೇರಿದ 101.30 ಎಕರೆ ಜಮೀನು, ಕಾರ್ಖಾನೆಯ ಯಂತ್ರೋಪಕರಣಗಳು ಹಾಗೂ ಕಟ್ಟಡಗಳು ಸೇರಿವೆ.</p>.<p>ಜಾರಿ ನಿರ್ದೇಶನಾಲಯದ ಈ ಕ್ರಮವು ಎಸ್ಸಿಪಿ (ಶರದ್ಚಂದ್ರ ಬಣ) ವರಿಷ್ಠ ಶರದ್ ಪವಾರ್ ಅವರ ಮೊಮ್ಮಗ, ರೋಹಿತ್ ಪವಾರ್ ಅವರಿಗೆ ಹಿನ್ಡಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ರೋಹಿತ್ ಅವರು ಅಹ್ಮದ್ನಗರ ಜಿಲ್ಲೆಯ ಕರ್ಜತ್ ಜಾಮ್ಖೇಡ್ ಕ್ಷೇತ್ರದ ಶಾಸಕ.</p>.<p>ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್ ಲಿಮಿಟೆಡ್, ಕಾನೂನುಬಾಹಿರವಾಗಿ ಸಕ್ಕರೆ ಕಾರ್ಖಾನೆಗಳನ್ನು ಮಾರಾಟ ಮಾಡಿದೆ. ಈ ಮಾರಾಟದಲ್ಲಿ ಹಣದ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿದೆ.</p>.<p>ಎಂಎಸ್ಸಿಬಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ, ಕನ್ನಡ್ ಸಹಕಾರಿ ಸಾಖರ್ ಕಾರ್ಖಾನೆಯನ್ನು ಬಾರಾಮತಿ ಅಗ್ರೊ ಪ್ರೈವೇಟ್ ಲಿಮಿಟೆಡ್ ಖರೀದಿಸಿದೆ. ರೋಹಿತ್ ಪವಾರ್ ಅವರು ಬಾರಾಮತಿ ಅಗ್ರೊ ಪ್ರೈವೇಟ್ ಲಿಮಿಟೆಡ್ನ ಸಿಇಒ ಆಗಿದ್ದಾರೆ. </p>.<p>ಈ ಹಗರಣಕ್ಕೆ ಸಂಬಂಧಿಸಿ, ಇ.ಡಿ ಅಧಿಕಾರಿಗಳು ರೋಹಿತ್ ಪವಾರ್ ಅವರನ್ನು ಈಗಾಗಲೇ ಎರಡು ಬಾರಿ ವಿಚಾರಣೆಗೆ ಒಳಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್ ಲಿಮಿಟೆಡ್ (ಎಂಎಸ್ಸಿಬಿ) ನಂಟಿನ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕನ್ನಡ್ ಸಹಕಾರಿ ಸಾಖರ್ ಕಾರ್ಖಾನಾ ಲಿಮಿಟೆಡ್ಗೆ (ಕೆಎಸ್ಎಸ್ಕೆ) ಸೇರಿದ ₹ 50 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.</p>.<p>ಜಪ್ತಿ ಮಾಡಲಾಗಿರುವ ಸ್ವತ್ತುಗಳಲ್ಲಿ ಕೆಎಸ್ಎಸ್ಕೆಗೆ ಸೇರಿದ 101.30 ಎಕರೆ ಜಮೀನು, ಕಾರ್ಖಾನೆಯ ಯಂತ್ರೋಪಕರಣಗಳು ಹಾಗೂ ಕಟ್ಟಡಗಳು ಸೇರಿವೆ.</p>.<p>ಜಾರಿ ನಿರ್ದೇಶನಾಲಯದ ಈ ಕ್ರಮವು ಎಸ್ಸಿಪಿ (ಶರದ್ಚಂದ್ರ ಬಣ) ವರಿಷ್ಠ ಶರದ್ ಪವಾರ್ ಅವರ ಮೊಮ್ಮಗ, ರೋಹಿತ್ ಪವಾರ್ ಅವರಿಗೆ ಹಿನ್ಡಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ರೋಹಿತ್ ಅವರು ಅಹ್ಮದ್ನಗರ ಜಿಲ್ಲೆಯ ಕರ್ಜತ್ ಜಾಮ್ಖೇಡ್ ಕ್ಷೇತ್ರದ ಶಾಸಕ.</p>.<p>ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್ ಲಿಮಿಟೆಡ್, ಕಾನೂನುಬಾಹಿರವಾಗಿ ಸಕ್ಕರೆ ಕಾರ್ಖಾನೆಗಳನ್ನು ಮಾರಾಟ ಮಾಡಿದೆ. ಈ ಮಾರಾಟದಲ್ಲಿ ಹಣದ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿದೆ.</p>.<p>ಎಂಎಸ್ಸಿಬಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ, ಕನ್ನಡ್ ಸಹಕಾರಿ ಸಾಖರ್ ಕಾರ್ಖಾನೆಯನ್ನು ಬಾರಾಮತಿ ಅಗ್ರೊ ಪ್ರೈವೇಟ್ ಲಿಮಿಟೆಡ್ ಖರೀದಿಸಿದೆ. ರೋಹಿತ್ ಪವಾರ್ ಅವರು ಬಾರಾಮತಿ ಅಗ್ರೊ ಪ್ರೈವೇಟ್ ಲಿಮಿಟೆಡ್ನ ಸಿಇಒ ಆಗಿದ್ದಾರೆ. </p>.<p>ಈ ಹಗರಣಕ್ಕೆ ಸಂಬಂಧಿಸಿ, ಇ.ಡಿ ಅಧಿಕಾರಿಗಳು ರೋಹಿತ್ ಪವಾರ್ ಅವರನ್ನು ಈಗಾಗಲೇ ಎರಡು ಬಾರಿ ವಿಚಾರಣೆಗೆ ಒಳಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>