<p><strong>ನವದೆಹಲಿ:</strong> ಪಾಕಿಸ್ತಾನಕ್ಕೆ ಆಯುಧ ಹಾಗೂ ಡ್ರೋನ್ಗಳನ್ನು ರಪ್ತು ಮಾಡುವ ಮೂಲಕ, ಅವರ ಪರ ನಿಂತು ಭಾರತದ ಸುರಕ್ಷತೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಟರ್ಕಿಯ ವಿರುದ್ಧ ಸಂಪೂರ್ಣ ನಿರ್ಬಂಧ ವಿಧಿಸಬೇಕು ಎಂದು ಆರ್ಎಸ್ಎಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್(ಎಸ್ಜೆಎಮ್), ಬುಧವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.</p><p>ಟರ್ಕಿಯ ವಿರುದ್ಧ ಹಣಕಾಸು ನಿರ್ಬಂಧ, ನಾಗರಿಕ ವಿಮಾನಯಾನ ಸೇವೆ ಮತ್ತು ಪ್ರವಾಸವನ್ನು ರದ್ದು ಮಾಡುವುದು ಹಾಗೂ ಈಗಿರುವ ರಾಜತಾಂತ್ರಿಕ ಸಂಬಂಧದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿದೆ. </p><p>ಭಾರತೀಯರು ಟರ್ಕಿಗೆ ಪ್ರವಾಸಕ್ಕೆ ತೆರಳುವುದನ್ನು ನಿಲ್ಲಿಸಬೇಕು ಹಾಗೂ ಅವರ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಮನವಿ ಮಾಡಿದೆ. </p><p>ಚೀನಾ ನಂತರದಲ್ಲಿ, ಪಾಕಿಸ್ತಾನಕ್ಕೆ ಅತಿ ಹೆಚ್ಚಿನ ಪ್ರಮಾಣ ಆಯುಧಗಳನ್ನು ಟರ್ಕಿ ರಪ್ತು ಮಾಡುತ್ತಿದೆ. ಇದರಿಂದ ಪಾಕಿಸ್ತಾನದ ವಾಯುಪಡೆ ಹಾಗು ನೌಕಾಪಡೆಯು ಆಧುನಿಕಗೊಂಡಿದೆ. ಟರ್ಕಿಯು ಕೇವಲ ವ್ಯಾಪಾರದ ದೃಷ್ಟಿಯಿಂದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿಲ್ಲ. ಬದಲಾಗಿ, ಇದರ ಹಿಂದೆ ಬೇರೆಯ ಉದ್ದೇಶವಿದೆ ಎಂದು ಆರೋಪಿಸಿತು. </p> .ಟರ್ಕಿ ನಿರ್ಮಿತ ಡ್ರೋನ್ ಬಳಕೆ | ಪಾಕ್ ದಾಳಿ ಯತ್ನ ವಿಫಲ: ಕರ್ನಲ್ ಖುರೇಷಿ. <p>ಭಾರತವು ಟರ್ಕಿಗೆ ನಿರ್ಬಂಧವನ್ನು ಹೇರಿದರೆ, ಪಾಕಿಸ್ತಾನಕ್ಕೆ ಅವರಿಂದ ರಫ್ತಾಗುತ್ತಿರುವ ಆಯುಧ ಸರಬರಾಜನ್ನು ನಿಲ್ಲಿಸಬಹುದು ಎಂದು ಎಸ್ಜೆಎಮ್ ವಕ್ತಾರ ಅಶ್ವಿನಿ ಮಹಾಜನ್ ಹೇಳಿದರು. </p><p>2023ರಲ್ಲಿ ಟರ್ಕಿಯಲ್ಲಿ ಭಯಂಕರ ಭೂಕಂಪವಾದಾಗ, ಭಾರತವು ಮಾನವೀಯ ನೆಲೆಯಲ್ಲಿ ಅವರಿಗೆ ಸಹಾಯಹಸ್ತ ಚಾಚಿತ್ತು. </p><p>ಭಾರತ ಮತ್ತು ಪಾಕ್ ನಡುವಿನ ಸಂಘರ್ಷದ ವೇಳೆ, ಪಾಕಿಸ್ತಾನವು ಟರ್ಕಿ ನಿರ್ಮಿತ ಡ್ರೋನ್ಗಳ ಮೂಲಕ ಭಾರತೀಯ ಸೇನಾ ನೆಲಗಳ ಮೇಲೆ ದಾಳಿ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪಾಕಿಸ್ತಾನಕ್ಕೆ ಆಯುಧ ಹಾಗೂ ಡ್ರೋನ್ಗಳನ್ನು ರಪ್ತು ಮಾಡುವ ಮೂಲಕ, ಅವರ ಪರ ನಿಂತು ಭಾರತದ ಸುರಕ್ಷತೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಟರ್ಕಿಯ ವಿರುದ್ಧ ಸಂಪೂರ್ಣ ನಿರ್ಬಂಧ ವಿಧಿಸಬೇಕು ಎಂದು ಆರ್ಎಸ್ಎಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್(ಎಸ್ಜೆಎಮ್), ಬುಧವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.</p><p>ಟರ್ಕಿಯ ವಿರುದ್ಧ ಹಣಕಾಸು ನಿರ್ಬಂಧ, ನಾಗರಿಕ ವಿಮಾನಯಾನ ಸೇವೆ ಮತ್ತು ಪ್ರವಾಸವನ್ನು ರದ್ದು ಮಾಡುವುದು ಹಾಗೂ ಈಗಿರುವ ರಾಜತಾಂತ್ರಿಕ ಸಂಬಂಧದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿದೆ. </p><p>ಭಾರತೀಯರು ಟರ್ಕಿಗೆ ಪ್ರವಾಸಕ್ಕೆ ತೆರಳುವುದನ್ನು ನಿಲ್ಲಿಸಬೇಕು ಹಾಗೂ ಅವರ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಮನವಿ ಮಾಡಿದೆ. </p><p>ಚೀನಾ ನಂತರದಲ್ಲಿ, ಪಾಕಿಸ್ತಾನಕ್ಕೆ ಅತಿ ಹೆಚ್ಚಿನ ಪ್ರಮಾಣ ಆಯುಧಗಳನ್ನು ಟರ್ಕಿ ರಪ್ತು ಮಾಡುತ್ತಿದೆ. ಇದರಿಂದ ಪಾಕಿಸ್ತಾನದ ವಾಯುಪಡೆ ಹಾಗು ನೌಕಾಪಡೆಯು ಆಧುನಿಕಗೊಂಡಿದೆ. ಟರ್ಕಿಯು ಕೇವಲ ವ್ಯಾಪಾರದ ದೃಷ್ಟಿಯಿಂದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿಲ್ಲ. ಬದಲಾಗಿ, ಇದರ ಹಿಂದೆ ಬೇರೆಯ ಉದ್ದೇಶವಿದೆ ಎಂದು ಆರೋಪಿಸಿತು. </p> .ಟರ್ಕಿ ನಿರ್ಮಿತ ಡ್ರೋನ್ ಬಳಕೆ | ಪಾಕ್ ದಾಳಿ ಯತ್ನ ವಿಫಲ: ಕರ್ನಲ್ ಖುರೇಷಿ. <p>ಭಾರತವು ಟರ್ಕಿಗೆ ನಿರ್ಬಂಧವನ್ನು ಹೇರಿದರೆ, ಪಾಕಿಸ್ತಾನಕ್ಕೆ ಅವರಿಂದ ರಫ್ತಾಗುತ್ತಿರುವ ಆಯುಧ ಸರಬರಾಜನ್ನು ನಿಲ್ಲಿಸಬಹುದು ಎಂದು ಎಸ್ಜೆಎಮ್ ವಕ್ತಾರ ಅಶ್ವಿನಿ ಮಹಾಜನ್ ಹೇಳಿದರು. </p><p>2023ರಲ್ಲಿ ಟರ್ಕಿಯಲ್ಲಿ ಭಯಂಕರ ಭೂಕಂಪವಾದಾಗ, ಭಾರತವು ಮಾನವೀಯ ನೆಲೆಯಲ್ಲಿ ಅವರಿಗೆ ಸಹಾಯಹಸ್ತ ಚಾಚಿತ್ತು. </p><p>ಭಾರತ ಮತ್ತು ಪಾಕ್ ನಡುವಿನ ಸಂಘರ್ಷದ ವೇಳೆ, ಪಾಕಿಸ್ತಾನವು ಟರ್ಕಿ ನಿರ್ಮಿತ ಡ್ರೋನ್ಗಳ ಮೂಲಕ ಭಾರತೀಯ ಸೇನಾ ನೆಲಗಳ ಮೇಲೆ ದಾಳಿ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>